ಬಿಸ್ಕೆಟ್ ಹಾಕಿದರೆ ಸಾಕು; ಹಾದಿ ಸಲೀಸು!ಕೊಡಚಾದ್ರಿ ಶ್ರೇಣಿಯ ಗೈಡ್ಗಳಾಗಿರುವ 3 ಶ್ವಾನಗಳು
Team Udayavani, Aug 26, 2021, 8:40 AM IST
ಶಿವಮೊಗ್ಗ: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಹೊಲ ಕಾಯುವುದು, ಮನೆ ಕಾಯುವುದರಲ್ಲಿ ಇವು ಎತ್ತಿದ ಕೈ. ಆದರೆ ಕೊಡಚಾದ್ರಿ ಪರ್ವತ ಶ್ರೇಣಿಯಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿನ 3 ನಾಯಿಗಳು ವಿಭಿನ್ನ. ಈ ನಾಯಿಗಳಿಗೆ 2 ಬಿಸ್ಕೆಟ್ ಹಾಕಿದರೆ ಸಾಕು ನಿಮಗೆ ಕೊಡಚಾದ್ರಿ ಪರ್ವತದ ಸಹ್ಯಾದ್ರಿ ಗಿರಿ ಶ್ರೇಣಿಯಲ್ಲಿ ಸೂರ್ಯೋದಯ ನೋಡಲು ಹಾಗೂ ವ್ಯೂ ಪಾಯಿಂಟ್ ತಲುಪಲು ಸಹಾಯ ಮಾಡುತ್ತವೆ!
ಹೊಸಬರಿರಲಿ, ಹಳಬರಿರಲಿ ಯಾರಿಗೂ ಬೊಗಳದೆ, ಬೆದರಿಸದೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಈ ನಾಯಿಗಳು ಸದಾ ಕ್ರಿಯಾಶೀಲವಾಗಿರುತ್ತವೆ. ಪರ್ವತ ಶ್ರೇಣಿಯಲ್ಲಿ ಎತ್ತ ಹೋಗಬೇಕು ತಿಳಿಯದ ಪ್ರವಾಸಿಗರಿಗೆ ಅವು ಮಾರ್ಗದರ್ಶನ ಮಾಡುತ್ತವೆ. ನಡುವೆ ಬೇರೆ ಯಾರೇ ಸಿಕ್ಕರೂ ಅವರ ಜತೆ ಹೋಗದಿರುವುದು ಇವುಗಳ ವಿಶೇಷ. ಗೆಸ್ಟ್ ಹೌಸ್ನಲ್ಲಿರುವ ಅಡುಗೆ ಭಟ್ಟ ಇವುಗಳಿಗೆ ಅನ್ನ, ಆಹಾರ ನೀಡಿ ಪೋಷಣೆ ಮಾಡುತ್ತಿದ್ದಾರೆ. ವಿಶೇಷ ವೆಂದರೆ ಇವುಗಳು ಯಾವುದೇ ಹೊರದೇಶದ ಅಥವಾ ಯಾವುದೇ ವಿಶೇಷ ತಳಿಗಳಲ್ಲ. ಅವುಗಳ ಚುರುಕು, ನಿಯತ್ತಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.
ಇದನ್ನೂ ಓದಿ:ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ
2 ಕಿಮೀ ಪರ್ವತ ಏರಬೇಕು: ಕೊಡಚಾದ್ರಿ ಪರ್ವತ ಶ್ರೇಣಿ ಅತ್ಯಂತ ಕಡಿದಾದ ಪ್ರದೇಶವಾಗಿದ್ದು ಜನವಸತಿಯಿಂದ 9 ಕಿಮೀ ಮೇಲಿದೆ. ಅಲ್ಲಿರುವ ಲೋಕೋಪಯೋಗಿ ಗೆಸ್ಟ್ ಹೌಸ್ಗೆ ವಿದ್ಯುತ್ಸಂಪರ್ಕ ಬಿಟ್ಟರೆ ಒಂದೇ ಒಂದು ಲೈಟ್ಇಲ್ಲ. ಸೂರ್ಯೋದಯ ನೋಡಲು ಅಲ್ಲಿಂದ ಸುಮಾರು 2 ಕಿಮೀ ಪರ್ವತ ಏರಬೇಕು. ಅಲ್ಲಿಗೆ ಹೋಗಲು ಅಡ್ಡ ದಾರಿ, ಕಾಲುದಾರಿಗಳಿವೆ. ಈ ಪರ್ವತ ತುಂಬಾ ಕಡಿದಾಗಿದ್ದು ಸ್ವಲ್ಪ ಯಾಮಾರಿದರೂ ಜಾರಿ ಬೀಳುವುದು ಗ್ಯಾರಂಟಿ.
ನಾವೂ ನಂಬಿರಲಿಲ್ಲ: ಕೊಡಚಾದ್ರಿಯಲ್ಲಿ ಸೂರ್ಯೋದಯ ನೋಡಬೇಕೆಂಬ ಆಸೆಯಿಂದ ಗೆಸ್ಟ್ ಹೌಸ್ನಲ್ಲಿ ಉಳಿದಿದ್ದೆವು. ಬೆಳಗ್ಗೆ 4.30ಕ್ಕೆ ಬೆಟ್ಟ ಏರಲು ಸಿದ್ಧವಾದೆವು. ಆದರೆ ಅಷ್ಟು ಕತ್ತಲಲ್ಲಿ ಹೇಗೆ ಹೋಗೋದು ತಿಳಿಯಲಿಲ್ಲ. ಬ್ಯಾಟರಿ, ಮೊಬೈಲ್ ಲೈಟ್ ಹಾಕಿಕೊಂಡರೂ ಕಾಣುತ್ತಿರಲಿಲ್ಲ. ಆಗ ಅಲ್ಲಿನ ಅಡುಗೆ ಭಟ್ಟರು ಈ ನಾಯಿಗಳಿಗೆ ಒಂದೆರಡು ಬಿಸ್ಕೆಟ್ ಹಾಕಿ ಅವೇ ಕರೆದುಕೊಂಡು ಹೋಗುತ್ತವೆ ಎಂದರು. ಈ ನಾಯಿಗಳು ತಮ್ಮ ನಿಯತ್ತು ಪ್ರದರ್ಶಿಸಿದವು. ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಿದ್ದಲ್ಲದೇ ಬೆಟ್ಟ ಏರಲು ಸಹಾಯ ಮಾಡಿದವು ಎನ್ನುತ್ತಾರೆ ಪ್ರವಾಸಿಗ ನವೀನ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ