ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಅವಕಾಶದ ಬಾಗಿಲು


Team Udayavani, Sep 7, 2021, 12:04 PM IST

7-2

ದಾಂಡೇಲಿ: ಸೋಲರಿಯದ ಮುತ್ಸದ್ದಿ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ಒಮ್ಮೆ ಸೋಲಿನರುಚಿ ತೋರಿಸುವ ಮೂಲಕ ರಾಜ್ಯ ರಾಜಕಾರಣದ ಚಿತ್ತ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಕಡೆಗೆ ಹರಿಸುವಂತೆ ಮಾಡಿದ ಮಾಜಿ ಶಾಸಕರು ಹಾಗೂ ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಸುನೀಲ ಹೆಗಡೆಯವರಿಗೆ ಇದೀಗ ಬಸವರಾಜ ಬೊಮ್ಮಯಿ ಸಾರಥ್ಯದ ರಾಜ್ಯ ಸರಕಾರದ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಒಲಿದು ಬರುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆಂದು ಇದು ಕ್ಷೇತ್ರದಲ್ಲಿ ಮುಖಂಡರಾದಿಯಾಗಿ, ಕಾರ್ಯಕರ್ತರಲ್ಲಿಯೂ ಬಹು ಚರ್ಚೆಯ ವಿಷಯವಾಗಿದೆ.

ಹಾಗೆ ನೋಡಿದರೇ, ಒಮ್ಮೆ ಶಾಸಕರಾಗಿ ಅನುಭವವನ್ನು ಹೊಂದಿರುವ ಹಾಗೂ ಬಿಜೆಪಿಯ ಪ್ರಮುಖ ನಾಯಕರ ಜೊತೆ ಆತ್ಮೀಯ ಓಡನಾಟವಿರುವ ಕಾರಣದಿಂದ ನಿಗಮ ಮಂಡಳಿಯಲ್ಲಿ ಸುನೀಲ ಹೆಗಡೆಯವರಿಗೆ ಅದೃಷ್ಟ ಖುಲಾಯಿಸಬಹುದಾಗಿದೆ.  ಇನ್ನೂ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಬಹಳ ಹತ್ತಿರದ ಓಡನಾಡಿಯೆಂದೆ ಹೇಳಬಹುದಾದ ಸುನೀಲ ಹೆಗಡೆಯವರ ಮೇಲೆ ಪ್ರಹ್ಲಾದ್ ಜೋಶಿಯವರ ಪ್ರೀತಿಯು ಇದೆ. ಇತ್ತ ಬಸವರಾಜ ಬೊಮ್ಮಯಿಯವರಿಗೂ ಸುನೀಲ ಹೆಗಡೆಯವರು ಹತ್ತಿರವಾಗಿಯೆ ಇರುವುದು ನೋಡಿದರೇ ಹಾಗೂ ಮಗದೊಮ್ಮೆ ಕಾಂಗ್ರೆಸ್ಸಿನ ಆರ್.ವಿ.ದೇಶಪಾಂಡೆಯವರನ್ನು ಮಣಿಸಲು ಸುನೀಲ ಹೆಗಡೆಯವರಲ್ಲಿ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಬಾರಿ ನಿಗಮ ಮಂಡಳಿಯಲ್ಲೊಂದು ಬಹುದೊಡ್ಡ ಅವಕಾಶ ನೀಡಬಹುದಾದ ಸಾಧ್ಯತೆ ಕಂಡುಬರುತ್ತಿದೆ.

ಇದನ್ನೂ ಓದಿ : ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್

ಸುನೀಲ ಹೆಗಡೆಯವರು ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಜನಸಾಮಾನ್ಯರಲ್ಲಿ ಜನಸಾಮಾನ್ಯರಂತೆ ಸರಳತೆಯನ್ನು ಮೈಗೂಡಿಸಿಕೊಂಡ ಜನನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ರಾಜಧಾನಿಯಲ್ಲಿ ನಾಯಕನಾಗದೇ, ಕ್ಷೇತ್ರದ ಜನತೆಯ ನಾಯಕನಾಗಿರುವುದು ಸುನೀಲ ಹೆಗಡೆಯವರಿಗೆ ಪ್ಲಸ್ ಪಾಯಿಂಟ್. ರಾಜಕೀಯದಲ್ಲಿ ಏನು ಆಗಬಹುದು. ಹಾವು ಮುಂಗುಸಿಯಂತಿದ್ದವರು ಕೈ ಕೈ ಕೂಡಿಸಿ ಸ್ನೇಹ ಬೆಳೆಸಿ ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ-ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ನಮ್ಮದಾಗಿರುವಾಗ, ಕ್ಷೇತ್ರದಲ್ಲಿಯೂ ಹಾವು ಮುಂಗುಸಿಯಂತಿರುವ ಘೋಟ್ನೇಕರ ಮತ್ತು ಸುನೀಲ ಹೆಗಡೆಯವರು ಒಂದಾದರೇ ಕ್ಷೇತ್ರವನ್ನು ಬೇರೊಬ್ಬರು ಆಳುವುದುಂಟೆ ಎಂಬ ಮಾತು ಕುತೂಹಲಕರ ರೀತಿಯಲ್ಲಿ ಚರ್ಚೆಯಲ್ಲಿರುವುದಂತು ಸತ್ಯ. ಇವರಿಗೆ ಇನ್ನೂ ವಯಸ್ಸು ಇರುವುದರಿಂದ ಅವರಿವರ ವಯಸ್ಸು ನೋಡಿ ಈ ಭಾರಿ ಅವರಿಗೆ ಅವಕಾಶ ಕೊಟ್ಟು ಮುಂದಿನ ಬಾರಿಗೆ ಇವರಿಗೆ ಅವಕಾಶ ಕೊಡುವ ವಾಗ್ದಾನದ ಜೊತೆ ಉತ್ತಮ ಹುದ್ದೆಯನ್ನು ದಯಾಪಾಲಿಸಿದ್ದಲ್ಲಿ ಏನು ಆಗಬಹುದು? ಯಾಕೆಂದ್ರೆ ಜ್ಯೋತಿಷ್ಯರಿಗೂ ಹಾಗೂ ರಾಜಕೀಯ ವಿಶ್ಲೇಷಕರಿಗೂ ಹೇಳಲಾರದ ಸಂಗತಿಗಳಿಗೆ ಕಾರಣವಾಗುತ್ತಿರುವ ಹಾಗೂ ಮರುಭೂಮಿಯಲ್ಲಿ ಜಲಾಧಾರೆಯನ್ನು ಸೃಷ್ಟಿಸುವಂತಹ ಕನಸನ್ನು ಬಿತ್ತುವ ರಾಜಕೀಯದಲ್ಲಿ ಏನು ಆಗಬಹುದು.

ಈ ಎಲ್ಲ ಸಾಧ್ಯತೆಗಳ ನಡುವೆ ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಅರಸಿ ಬಂದರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿಬರತೊಡಗಿದೆ.

ಇದನ್ನೂ ಓದಿ : Increase testing in areas with high Covid-19 cases: Min Angara

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.