ಆರೋಗ್ಯ ಖಾತರಿಗೆ ಓಟದ ಸ್ಪರ್ಧೆ ನಡೆಸೋಣ, ಬನ್ನಿ!
ಮಧ್ಯಪ್ರದೇಶ ಸಿಎಂಗೆ ಕಾಂಗ್ರೆಸ್ ಮುಖಂಡ ಕಮಲ್ನಾಥ್ ಸವಾಲು
Team Udayavani, Oct 3, 2021, 10:45 PM IST
ಭೋಪಾಲ್:”ಬನ್ನಿ, ನಾವಿಬ್ಬರೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸೋಣ. ಯಾರ ಆರೋಗ್ಯ ಚೆನ್ನಾಗಿದೆಯೋ ನೋಡೇ ಬಿಡೋಣ.’
ಹೀಗೆಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (64)ಗೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲ್ನಾಥ್ (74) ಸವಾಲು ಹಾಕಿದ್ದಾರೆ.
ಅನಾರೋಗ್ಯ ಮತ್ತು ವಯಸ್ಸಿನ ನಿಮಿತ್ತ ಕಮಲ್ನಾಥ್ ನವದೆಹಲಿಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಚೌಹಾಣ್ ಪದೇ ಪದೆ ಲೇವಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:ಜಮ್ಮು – ಕಾಶ್ಮೀರ ಉರಿಯಲ್ಲಿ ಡ್ರಗ್ಸ್ ಸಾಗಾಟ?
“ನನ್ನ ಆರೋಗ್ಯದ ಬಗ್ಗೆ ಪದೇ ಪದೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಪ್ರತಿ ಬಾರಿಯೂ ನನಗೆ ವಯಸ್ಸಾಗಿದೆ ಮತ್ತು ಅನಾರೋಗ್ಯ ಇದೆ ಎಂದು ಹೇಳುತ್ತಾರೆ. ಯಾರ ಆರೋಗ್ಯ ಚೆನ್ನಾಗಿದೆ ಎಂದು ಸಾಬೀತುಪಡಿಸಲು ನಾವಿಬ್ಬರೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸೋಣ’ ಎಂದಿದ್ದಾರೆ
ಕಮಲ್ನಾಥ್ ಕೋವಿಡ್ ಸೋಂಕು ದೃಢಪಟ್ಟ ನಂತರ ನನಗೆ ನ್ಯುಮೋನಿಯಾ ಬಂದಿತ್ತು. ಹೀಗಾಗಿ, ಆರೋಗ್ಯ ತಪಾಸಣೆಗಾಗಿ ತೆರಳಿದ್ದೆ. ಎಲ್ಲಾ ವರದಿಗಳೂ ತೃಪ್ತಿಕರವಾಗಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!