ಅನ್ನದಾತನ ಕೈಹಿಡಿದ ಚೆಂಡು ಹೂ
Team Udayavani, Oct 12, 2021, 2:59 PM IST
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ರೈತ ಚಂದ್ರಶೇಖರ್ಅರ್ಧ ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆ ಬೆಳೆದಿದ್ದುಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದು ದಸರಾ ಹಬ್ಬದಅಂಗವಾಗಿ ಬಳ್ಳಾರಿ ಮತ್ತು ಸಿರುಗುಪ್ಪದ ವ್ಯಾಪಾರಿಗಳುರೈತನ ಜಮೀನಿಗೆ ತೆರಳಿ ಹೂವನ್ನು ಖರೀದಿಸಲು ಮುಂದಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಚೆಂಡು ಹೂ ಮತ್ತುಸೇವಂತಿಗೆ ಹೂವನ್ನು ದಸರಾ ಮತ್ತು ದೀಪಾವಳಿ ಸಂದರ್ಭಕ್ಕೆಕಟಾವು ಬರುವಂತೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ರೈತನು ತನ್ನ ಅರ್ಧ ಎಕರೆ ಚೆಂಡು ಹೂವಿನ ಬೆಳೆಬೆಳೆಯಲು ರೂ. 10 ಸಾವಿರ ವೆಚ್ಚವಾಗುತ್ತಿದ್ದು, ಬೆಳೆಬೆಳೆಯಲು ವೆಚ್ಚವಾದ ಹಣ ತೆಗೆದು ರೂ. 30ರಿಂದ40 ಸಾವಿರ ಆದಾಯ ಗಳಿಸುತ್ತಿದ್ದಾನೆ.
ಅರ್ಧ ಎಕರೆಗೆ8ರಿಂದ 10 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದು, ಒಂದುಕ್ವಿಂಟಲ್ ಹೂವಿಗೆ ರೂ.5 ಸಾವಿರದಂತೆ ಮಾರಾಟಣಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಚೆಂಡುಹೂವಿಗೆದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.ಆದ್ದರಿಂದ ಬಳ್ಳಾರಿ ಮತ್ತು ಸಿರುಗುಪ್ಪದ ಹೂವಿನವ್ಯಾಪಾರಿಗಳು ರೈತನ ಹೊಲಕ್ಕೆ ಬಂದು ಹೂವನ್ನು ಖರೀದಿಸುತ್ತಿರುವುದರಿಂದ ರೈತನಿಗೆ ಮಾರುಕಟ್ಟೆಗೆ ಹೂವನ್ನುಸಾಗಿಸುವ ವೆಚ್ಚ ಉಳಿಯುತ್ತದೆ.
ಹೂವನ್ನು ಕಟಾವುಮಾಡಿದ ನಂತರ ವ್ಯಾಪಾರಿಗಳು ತೂಕ ಮಾಡಿಕೊಂಡುತಮ್ಮದೇ ವಾಹನದಲ್ಲಿ ಸಾಗಿಸುತ್ತಾರೆ.ತೋಟಗಾರಿಕೆ ಬೆಳೆಯಲ್ಲಿ ಬರುವ ಹೂವಿನ ಬೆಳೆಗೆ ನಮ್ಮತಾಲೂಕಿನಲ್ಲಿ ಹೆಚ್ಚಿನ ರೈತರು ಆಸಕ್ತಿ ತೋರಿಸುತ್ತಿಲ್ಲ. ಆದರೆರೈತ ಚಂದ್ರಶೇಖರ್ ಕಳೆದ ಮೂರು ವರ್ಷಗಳಿಂದ ಚೆಂಡುಹೂ, ಸೇವಂತಿಗೆ ಹೂವನ್ನು ಬೆಳೆದು ಉತ್ತಮ ಆದಾಯಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾನೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ
Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ