ಭಟ್ಕಳ: ಅರವಿಂದ ಸ್ವಾಮಿ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ಚಿತ್ರೀಕರಣ
Team Udayavani, Oct 29, 2021, 3:16 PM IST
ಭಟ್ಕಳ: ಮಲಯಾಳಂ, ತಮಿಳು ಸೇರಿದಂತೆ ಬಹುಭಾಷಾ ತಾರೆ ಅರವಿಂದ ಸ್ವಾಮಿ ಅಭಿನಯದ ಅಭಿನಯನದ “ಒಟ್ಟು” ಮಲಯಾಳಂ ಚಿತ್ರದ ಚಿತ್ರೀಕರಣ ನಗರದ ಶಂಶುದ್ಧೀನ್ ಸರ್ಕಲ್, ಮುಖ್ಯ ರಸ್ತೆ, ಮೀನು ಮಾರುಕಟ್ಟೆಗಳಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.
ದೃಶ್ಯವೊಂದರಲ್ಲಿ ನಿಂತಿರುವ ಕಾರೊಂದರ ಹಿಂದುಗಡೆ ನಿಂತಿರುವ ಅರವಿಂದ ಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ಭಟ್ಕಳ್, ಭಟ್ಕಳ್ ಎನ್ನುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇನ್ನೊಂದು ದೃಶ್ಯದಲ್ಲಿ ನಗರದ ಹಳೇ ಪುರಸಭಾ ಕಟ್ಟಡದ ಒಳಗಿರುವ ತರಕಾರಿ ಮಾರುಕಟ್ಟೆಯೊಳಕ್ಕೆ ಹೋಗಿ ಹೊರ ಬರುವ ದೃಶ್ಯವಿದೆ.
ಬಹುಭಾಷಾ ಹೀರೋ ಭಟ್ಕಳಕ್ಕೆ ಬಂದಿರುವ ಸುದ್ದಿ ತಿಳಿಯುತ್ತಲೇ ಸಿನೆಮಾ ಪ್ರಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಚಿತ್ರೀಕರಣದ ವೇಳೆ ಕ್ಯಾಮರಾಮೆನ್, ಸಹ ನಟರು, ಸಹಾಯಕರು ಸೇರಿದಂತೆ 50ಕ್ಕೂ ಹೆಚ್ಚು ಜನರು ಬಂದಿದ್ದು, ಚಿತ್ರೀಕರಣದ ಸ್ಥಳದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು.
ಇದನ್ನೂ ಓದಿ: ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು
ಪ್ರಮುಖ ಮಲಯಾಳಿ ನಟ ಕುಂಚಾಕೋ ಬೋಬಾನ್, ನಟಿ ಈಶಾ ರೆಬ್ಬಾ ಕೂಡಾ ಹಾಜರಿದ್ದರು. ಎಸ್. ಸಂಜೀವ ಅವರ ಕಥೆಯನ್ನಾಧರಿಸಿ ಆಗಸ್ಟ್ ಸಿನೆಮಾಸ್ ಮತ್ತು ಸಿನಿ ಹಾಲಿಕ್ಸ ನಿರ್ಮಾಣದಡಿಯಲ್ಲಿ ಚಿತ್ರ ಮೂಡಿಬರುತ್ತಿದ್ದು ಪಿಲ್ಲಿನಿ ಟಿ.ಪಿ. ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಆಹ್ ಖಾಸೀಫ್ ಸಂಗೀತ ನಿರ್ದೇಶಕರಾಗಿದ್ದು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಕೊರೊನಾದ ನಂತರ ಭಟ್ಕಳದ ಸುತ್ತಮುತ್ತ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದ್ದು ಜನರಲ್ಲಿ ಹೆಚ್ಚು ಕುತೂಹಲ ಮೂಡಲು ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!