ಗುಮ್ಮಟ ನಗರಿಗೆ ಬಂದಿದ್ದ ಪುನೀತ್‌..


Team Udayavani, Oct 30, 2021, 1:01 PM IST

13puneet

ವಿಜಯಪುರ: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಕಣಜ ಎನಿಸಿರುವ ವಿಜಯಪುರ ಸುಂದರ ನಗರ. ಅಪ್ಪಾಜಿ ನಂಬಿದ ಅಭಿಮಾನಿ ದೇವರ ಮುಂದೆ ಮತ್ತೂಮ್ಮೆ ಬಂದು ಹಾಡುತ್ತೇನೆ. ಮತ್ತೆ ಮತ್ತೆ ಈ ಜಿಲ್ಲೆಗೆ ಬರುವುದು ನನಗೆ ಖುಷಿ ನೀಡುವ ಸಂಗತಿ… ಮತ್ತೆ ಬರುತ್ತೇನೆ, ಅಭಿಮಾನಿ ದೇವರಾದ ನಿಮ್ಮ ಮುಂದೆ ಬಂದು ಹಾಡುತ್ತೇನೆ…

2004 ಮಾರ್ಚ್‌ 14ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪ್ಪು ಭಾಷೆ ಕೊಟ್ಟಿದ್ದರು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳದೇ ಕಾಲನ ಕರೆಗೆ ಓಗೊಟ್ಟು ಕಾಣದಂತೆ ಮಾಯಗಾಗಿದ್ದಾರೆ. ಭಾಷೆ ಕೊಟ್ಟಿದ್ದ ಪುನೀತ್‌ ರಾಜಕುಮಾರ ಇನ್ನಿಲ್ಲ ಎಂಬ ಸುದ್ದಿ ವಿಜಯಪುರ ಜಿಲ್ಲೆಯ ಜನರಿಗೆ ಆಘಾತ ಎನಿಸಿದೆ.

ಅಂದು ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಅಸಂಖ್ಯಾತವಾಗಿ ಸೇರಿದ್ದ ಅಭಿಮಾನಿ ದೇವರ ಮುಂದೆ ನಿಂತು “ವೀರಕನ್ನಡಿಗ’ ಚಿತ್ರದ “ಜೀವ ಕನ್ನಡ-ದೇಹ ಕನ್ನಡ…’ ಎಂದು ಅಪ್ಪು ಹಾಡುತ್ತಿದ್ದರೆ ಅಭಿಮಾನಿಗಳು ಕೇಕೆ ಹಾಕುತ್ತ, ಕುಣಿದು ಕುಪ್ಪಳಿಸಿದ್ದರು. ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಗರೆದಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ್ದ ಅಪ್ಪು, ಮತ್ತೆ ಮತ್ತೆ ಬಿಜಾಪುರಕ್ಕೆ ಬರುತ್ತೇನೆ… ಸಂಗೀತ ಸಂಜೆ ಆಯೋಜಿ ಸೋಣ, ಅಭಿಮಾನಿ ದೇವರುಗಳ ಮುಂದೆ ಬಂದು ಹಾಡುತ್ತೇನೆ ಎಂದು ಭರವಸೆ ನೀಡಿದ್ದರು.

ತಾವು ಕೊಟ್ಟಿದ್ದ ಈ ಮಾತನ್ನು ಈಚೆಗಷ್ಟೇ ತಮ್ಮನ್ನು ಭೇಟಿಯಾಗಿದ್ದಾಗ ಮತ್ತೆ ಸ್ಮರಿಸಿದ್ದರು ಎಂದು ಯುವ ಮುಖಂಡರಾದ ಸಂಜ ಸಬರದ, ಶರಣು ಸಬರದ ನೆನಪಿನಾಳಕ್ಕೆ ಇಳಿದು ಕಣ್ಣಾಲಿ ತುಂಬಿಕೊಂಡರು.

ಇದನ್ನೂ ಓದಿ: ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ರ ‘ಕೂ’ ಕ್ರಿಕೆಟ್ ಗೀತೆ

“ನೀವು ನೀಡಿರುವ ಈ ಅಪೂರ್ವ ಉಡುಗೊರೆ ಮುಂದುವರಿಸಿಕೊಂಡು ಹೋಗೋಣ, ಈ ಕಾರ್ಯ ಬಿಜಾಪುರದಿಂದಲೇ ಪುನಾರಾಂಭಗೊಳ್ಳಲಿ…’ ಎಂದು ಕೆಲವೇ ತಿಂಗಳ ಹಿಂದಷ್ಟೇ ತಮ್ಮನ್ನು ಭೇಟಿಯಾಗಿದ್ದಾಗ ಸಂಗೀತ ಸಂಜೆ ನೀಡಲು ವಿಜಯಪುರಕ್ಕೆ ಬರುವುದಾಗಿ ಹೇಳಿದ್ದರು. ಆದರೆ ವಚನ ಪಾಲಿಸುವ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಲಕ್ಷಾಂತರ ಅಭಿಮಾನಿಗಳ ಹೃದಯ ಮಂದಿರದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪುನೀತ್‌ ರಾಜಕುಮಾರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಕಂಬನಿ ಮಿಡಿದರು.

ವರನಟ ಡಾ| ರಾಜಕುಮಾರ ಅವರು ಆಯಾ ಜಿಲ್ಲೆಯಲ್ಲಿ ಅಭಿಮಾನಿ ದೇವರುಗಳಿಗಾಗಿ ಸಂಗೀತ ಸಂಜೆ ನಡೆಸುತ್ತಿದ್ದರು. ದಂತಚೋರ ವೀರಪ್ಪನ್ನನಿಂದ ಅಪಹೃತಗೊಂಡ ನಂತರ ಈ ಕಾರ್ಯಕ್ರಮಗಳಿಂದ ಅಣ್ಣಾವ್ರು ವಿಮುಖರಾಗಿದ್ದರು. ಆದರೆ ವಿಜಯಪುರದ ಸಂಜಯ ಸಬರದ ಮೊದಲಾದವರು ಅಣ್ಣಾವ್ರರನ್ನು ಭೇಟಿ ಮಾಡಿ ಈ ಕಾರ್ಯಕ್ರಮ ಮತ್ತೆ ಮುಂದುವರಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ಡಾ| ರಾಜಕುಮಾರ ಅವರು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮ ನೀಡುವುದಾಗಿ ವಾಗ್ಧಾನ ಮಾಡಿದ್ದರು. ಅವರ ಆಶಯದಂತೆ ಕಾರ್ಯಕ್ರಮ ಆಯೋಜಿಸಲು ಆಯೋಜನೆ ರೂಪಿಸುವ ಸಿದ್ಧತೆಯಲ್ಲಿದ್ದೇವು ಸಬರದ ದುಖೀತರಾದರು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.