ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ

ಗೆಳೆಯನೆಂದು ನಂಬಿಸಿ ಹಣ ದೋಚುತ್ತಾರೆ ಎಚ್ಚರ

Team Udayavani, Nov 9, 2021, 7:00 AM IST

ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ

ಮಂಗಳೂರು: ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ ಮಾಡುವವರ ಬಗ್ಗೆ ಸೈಬರ್‌ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಮೂಲಕ ನಗರದ ಓರ್ವರಿಗೆ ತುರ್ತು ಹಣಕ್ಕಾಗಿ ಕೋರಿಕೆ ಬಂದಿದ್ದು ಸಂದೇಹಗೊಂಡ ಅವರು ಸೈಬರ್‌ ತಜ್ಞರ ಮೂಲಕ ಪರಿಶೀಲಿಸಿದಾಗ ಅದು ವಂಚನೆ ಪ್ರಯತ್ನ ಎಂಬುದು ದೃಢಪಟ್ಟಿದೆ.

ನಮ್ಮ ಗೆಳೆಯರು ಅಥವಾ ಕುಟುಂಬ ಸದಸ್ಯರ ಫೋಟೋ (ಡಿಪಿ) ಸಂಗ್ರಹಿಸಿ ಅದನ್ನು ಹೊಸದೊಂದು ನಂಬರ್‌ಗೆ ಅಳವಡಿಸುತ್ತಾರೆ. ಅನಂತರ ಆ ನಕಲಿ ಪ್ರೊಫೈಲ್‌ನಲ್ಲಿ ನಮಗೆ, ನಮ್ಮ ಗೆಳೆಯರು, ಕುಟುಂಬಿಕರಿಗೆ ಸಂದೇಶ ಕಳುಹಿಸಿ “ನಾನು ನಿಮ್ಮ ಗೆಳೆಯ… ಇದು ನನ್ನ ಹೊಸ ವಾಟ್ಸ್‌ಆ್ಯಪ್‌ ನಂಬರ್‌’ ಎಂದು ನಂಬಿಸುತ್ತಾರೆ.

ಪ್ರೊಫೈಲ್‌ನಲ್ಲಿ ಗೆಳೆಯನ ಫೋಟೋ ಇರುವುದರಿಂದ ನಂಬುವ ಸಾಧ್ಯತೆ ಹೆಚ್ಚು. ಕೆಲವು ಸಮಯದ ಬಳಿಕ ನಮ್ಮ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಸಂದೇಶ ಮಾಡಿ, “ತುರ್ತಾಗಿ ಹಣದ ಅವಶ್ಯಕತೆ ಇದ್ದು ಕೂಡಲೇ ಕಳುಹಿಸಿಕೊಡಿ’ ಎಂದು ಮನವಿ ಮಾಡುತ್ತಾನೆ. ಇದನ್ನು ನಂಬಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸದೆ ಹಣ ಕಳುಹಿಸಿದರೆ ವಂಚನೆಗೆ ಒಳಗಾಗುತ್ತೇವೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಒಟಿಪಿ ಕದಿಯುತ್ತಾರೆ
ಇನ್ನೊಂದು ರೀತಿಯ ವಂಚನೆ ಜಾಲವೂ ಸಕ್ರಿಯವಾಗಿದ್ದು ಅದು ನಮ್ಮ ಮೊಬೈಲ್‌ನಿಂದ ಒಟಿಪಿಯನ್ನೇ ಕದ್ದು ಆ ಮೂಲಕ ನಮ್ಮ ವಾಟ್ಸ್‌ಆ್ಯಪ್‌ ಅನ್ನೇ ಅವರ ಮೊಬೈಲ್‌ಗೆ ವರ್ಗಾಯಿಸಿಕೊಳ್ಳುತ್ತದೆ. ನಮ್ಮ ವಾಟ್ಸ್‌ಆ್ಯಪ್‌ ಸಂಖ್ಯೆ ಗೊತ್ತಿರುವವರ ಬಳಿ ನಮ್ಮ ಮೊಬೈಲನ್ನು ಇಟ್ಟಿದ್ದರೆ ಇದು ಸಾಧ್ಯವಾಗುತ್ತದೆ. ಸೈಬರ್‌ ಭದ್ರತಾ ತಜ್ಞರ ಪ್ರಕಾರ ವಂಚನೆಯ ವಿಧಾನ ಹೀಗಿದೆ: ನಮ್ಮ ಪಕ್ಕದಲ್ಲಿ ಇರಬಹುದಾದ ವ್ಯಕ್ತಿ ಆತನ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಅನ್ನು ಹೊಸದಾಗಿ ಇನ್‌ಸ್ಟಾಲ್‌ ಮಾಡುವಾಗ ನಮ್ಮ ವಾಟ್ಸ್‌ಆ್ಯಪ್‌ ಸಂಖ್ಯೆ ನೀಡುತ್ತಾನೆ. ಇನ್‌ಸ್ಟಾಲ್‌ ಆಗುವ ಮೊದಲು ಒಟಿಪಿಯನ್ನು ಕೇಳಲಾಗುತ್ತದೆ. ಆ ಒಟಿಪಿ ನಮ್ಮ ಮೊಬೈಲ್‌ಗೆ ಬಂದಿರುತ್ತದೆ. ನಮ್ಮ ಮೊಬೈಲ್‌ ಆತನ ಎದುರು ಇದ್ದರೆ ಒಟಿಪಿ ಬರುವಾಗ ಅದು ಅವನಿಗೆ ಕಾಣಿಸುತ್ತದೆ (ಮೊಬೈಲ್‌ ಲಾಕ್‌ ತೆಗೆಯದಿದ್ದರೂ ಒಟಿಪಿ ಕಾಣಿಸುತ್ತದೆ). ಆ ಒಟಿಪಿ ಆಧಾರದಲ್ಲಿ ನಮ್ಮ ಮೊಬೈಲ್‌ನ ಸಂಖ್ಯೆಯ ವಾಟ್ಸ್‌ಆ್ಯಪ್‌ ಅವನ ಮೊಬೈಲ್‌ನಲ್ಲಿ ಕಾರ್ಯಾಚರಿಸುತ್ತದೆ!

ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್‌ನ ಚಳಿಗಾಲದ ಅಧಿವೇಶನ?

ಆ್ಯಪ್‌ ಡೌನ್‌ಲೋಡ್‌ನಿಂದಲೂ ಕನ್ನ
ನಮ್ಮ ಮೊಬೈಲ್‌ಗೆ ಬರುವ ಟೆಕ್ಸ್ಟ್ ಮೆಸೇಜ್‌ನ ಒಂದು ಪ್ರತಿ ಇನ್ನೊಬ್ಬರ ಮೊಬೈಲ್‌ಗ‌ೂ ಬರುವಂತಹ ಆ್ಯಪ್‌ ಇದ್ದು ಅದರ ಮೂಲಕವೂ ಭಾರೀ ವಂಚನೆ ನಡೆಯುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು. ಮೊಬೈಲ್‌ಗೆ ಬರುವ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿದರೆ ನಮ್ಮ ಮೊಬೈಲ್‌ಗೆ ಬರುವ ಪ್ರತಿ ಟೆಕ್ಸ್ಟ್ ಮೆಸೇಜ್‌ ಸೈಬರ್‌ ಖದೀಮರ ಮೊಬೈಲ್‌ಗ‌ೂ ರವಾನೆಯಾಗುತ್ತದೆ. ಇದೇ ರೀತಿ ಎಲ್ಲ ರೀತಿಯ ಒಟಿಪಿ ಕೂಡ ಖದೀಮರ ಮೊಬೈಲ್‌ಗೆ ಸಿಗುತ್ತದೆ.

ಆದಷ್ಟು ಎಚ್ಚರ ವಹಿಸಿ
ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹಲವಾರು ನಡೆದಿವೆ. ಇದೀಗ ನಕಲಿ ವಾಟ್ಸ್‌ ಆ್ಯಪ್‌ ಪ್ರೊಫೈಲ್‌ ಸೃಷ್ಟಿಸಿ ವಂಚಿಸಲು ಯತ್ನಿಸಿರುವ ಎರಡು ಪ್ರಕರಣಗಳೂ ಗಮನಕ್ಕೆ ಬಂದಿವೆ. ಎಚ್ಚರಿಕೆಯ ನಡೆಯಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ವಂಚಕರ ಬಗ್ಗೆ ಎಚ್ಚರ ವಹಿಸಬೇಕು.
– ಡಾ| ಅನಂತ ಪ್ರಭು ಜಿ.
ಸೈಬರ್‌ ಭದ್ರತಾ ತಜ್ಞ, ಮಂಗಳೂರು

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.