ಪಾಕಿಸ್ಥಾನಕ್ಕೆ ಯುದ್ಧ ಹಡಗು ನೀಡಿದ ಚೀನ
"ಟೈಪ್ 054ಎ/ಪಿ' ಮಾದರಿಯ ಈ ಹಡಗುಗಳ ಹಸ್ತಾಂತರ
Team Udayavani, Nov 10, 2021, 7:15 AM IST
ಬೀಜಿಂಗ್: ಹಿಂದೂ ಮಹಾಸಾಗರದಲ್ಲಿ ಹಾಗೂ ಅರಬಿ ಸಮುದ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಶತಾಯಗತಾಯ ಹವಣಿಸು ತ್ತಿರುವ ಚೀನ, ಇದಕ್ಕೆ ಪೂರಕವಾಗಿ ತಾನು ತಯಾರಿಸಿರುವ ಅತ್ಯಾಧುನಿಕ ಯುದ್ಧ ಹಡಗುಗಳನ್ನು ಪಾಕಿಸ್ಥಾನಕ್ಕೆ ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಹಡಗುಗಳನ್ನು “ಚೀನ ಸ್ಟೇಟ್ ಶಿಪ್ಬಿಲ್ಡಿಂಗ್ ಕಾರ್ಪೊರೇಶನ್’ (ಸಿಎಸ್ಎಸ್ಸಿ) ಸಂಸ್ಥೆ ನಿರ್ಮಿಸಿದೆ. ಶಾಂಘೈನಲ್ಲಿ ಇತ್ತೀಚೆಗೆ ನಡೆದಿದ್ದ ಸರಳ ಸಮಾರಂಭವೊಂದರಲ್ಲಿ ಪಾಕಿಸ್ಥಾನ ನೌಕಾ ಪಡೆಯ ಮುಖ್ಯಸ್ಥರಿಗೆ ಚೀನ ನೌಕಾಪಡೆಯ ಮುಖ್ಯಸ್ಥರು ಈ ಹಡಗುಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ. ಹೀಗೆ, ಹಸ್ತಾಂತರಗೊಂಡಿರುವ “ಟೈಪ್ 054ಎ/ಪಿ’ ಎಂಬ ಮಾದರಿಯ ಈ ಹಡಗುಗಳನ್ನು “ಪಿಎನ್ಎಸ್ ತುಘ್ರಿಲ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು “ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ಇದರ ಬೆನ್ನಲ್ಲೇ ಚೀನದಲ್ಲಿರುವ ಪಾಕಿಸ್ಥಾನ ರಾಯಭಾರಿ ಮೊಯಿಲ್ ಉಲ್ ಹಕ್ ಅವರು ಹೇಳಿಕೆ ನೀಡಿ, ಪಿಎನ್ಎಸ್ ತುಘ್ರಿಲ್ ಯುದ್ಧ ಹಡಗುಗಳ ಹಸ್ತಾಂತರದಿಂದ ಹಿಂದೂ ಮಹಾ ಸಾಗರದಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶಗಳು ಪಾಕಿಸ್ಥಾನಕ್ಕೆ ಸಮಾನ ಅವಕಾಶ ಸಿಕ್ಕಂತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಅವರ ಈ ಮಾತುಗಳು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿವೆ.
ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್
ಸಮ್ಮೇಳನಕ್ಕೆ ಬರುವುದಿಲ್ಲ; ಚೀನ ಸ್ಪಷ್ಟನೆ: ಆಫ್ಘಾನಿಸ್ಥಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗೆ ಕುರಿತಂತೆ ದಕ್ಷಿಣ ಏಷ್ಯಾ ರಾಷ್ಟ್ರ ಗಳು ಕೈಗೊಳ್ಳಬಹುದಾದ ರಾಜತಾಂತ್ರಿಕ ನಿರ್ಧಾರ ಗಳ ಕುರಿತಾಗಿ ಚರ್ಚಿಸಲು ಹೊಸದಿಲ್ಲಿಯಲ್ಲಿ ಭಾರತ ಏರ್ಪಡಿಸಿರುವ ಅಂತಾರಾಷ್ಟ್ರೀಯ ಸಮ್ಮೇ ಳನಕ್ಕೆ ಬರುವುದಿಲ್ಲ ಎಂದು ಚೀನ ಹೇಳಿದೆ. ವಾರದ ಹಿಂದೆ, ಈ ಸಮ್ಮೇಳನದಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಹೇಳಿತ್ತು. ಈಗ ಚೀನ ಕೂಡ ಅದೇ ನಿರ್ಧಾರ ತಳೆದಿದೆ.
“ಬುಧವಾರಕ್ಕೆ ಅನೇಕ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಭೆಗೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ. ಆದರೆ ದ್ವಿಪಕ್ಷೀಯ ಮಾರ್ಗದೊಂದಿಗೆ ಭಾರತದೊಂದಿಗೆ ಮಾತುಕತೆ ಯಲ್ಲಿರುತ್ತೇವೆ’ ಎಂದು ಚೀನ ಕಾರಣ ನೀಡಿದೆ.
ದಿಲ್ಲಿಯಲ್ಲಿ ನ. 10ರಂದು ಈ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಇರಾನ್, ರಷ್ಯಾ, ಕಜಕಿಸ್ಥಾನ, ಕಿರ್ಗಿಸ್ಥಾನ, ತಜಿಕಿಸ್ಥಾನ, ತುರ್ಕ್ ಮೆನಿಸ್ಥಾನ ಮತ್ತು ಉಜ್ಬೇಕಿಸ್ಥಾನದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
London: ಭಾರತೀಯ ಮೂಲದ ಮಹಿಳೆಗೆ ಬಸ್ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ
MUST WATCH
ಹೊಸ ಸೇರ್ಪಡೆ
ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ
Naxal ಶರಣಾದರೆ ಸರಕಾರದಿಂದ ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್
India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್ ಪಂದ್ಯ ಆಯೋಜನೆ
Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ
SSLC ಪರೀಕ್ಷೆ-2: ನೋಂದಣಿ ದಿನಾಂಕ ವಿಸ್ತರಣೆ