ಭೂದಾಹಿಗಳಿಗೆ ಕಾನೂನು ಬಿಸಿ: 37 ಎಕ್ರೆ ಕಂದಾಯ ಇಲಾಖೆ ವಶ
Team Udayavani, Nov 19, 2021, 3:10 AM IST
ಬೆಳ್ತಂಗಡಿ: ಅತಿಕ್ರಮಣಗೊಂಡಿದ್ದ ಕಂದಾಯ ಇಲಾಖೆಗೆ ಸೇರಿದ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿರುವ ಮಧ್ಯೆಯೇ ಬೆಳ್ತಂಗಡಿ ಕಂದಾಯ ಇಲಾಖೆಯು ಈಗಾಗಲೇ ಒಟ್ಟು 37.2 ಎಕ್ರೆ ಜಮೀನು ವಶಪಡಿಸಿಕೊಂಡು ಭೂದಾಹಕರಿಗೆ ಬಿಸಿಮುಟ್ಟಿಸಿದೆ.
ಕೋಟ್ಯಂತರ ರೂಪಾಯಿ ಬೆಳೆಬಾಳುವ ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಸಿರುವುದು ಕಂದಾಯ ಇಲಾಖೆಗೆ ಕಗ್ಗಂಟಾಗಿ ಪರಿಣಮಿಸಿತ್ತು. ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಅವರು ಕಾರ್ಯಾಚರಣೆ ನಡೆಸಿ ಭೂಮಿಯನ್ನ ಸರಕಾರದ ಸುಪರ್ದಿಗೆ ಪಡೆದಿದ್ದಾರೆ.
ದೀರ್ಘ ಸಮಯದಿಂದ ಅತಿಕ್ರಮಣ:
ಶಾಲಾ ಆಟದ ಮೈದಾನ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಿದ ಭೂಮಿ ಕಳೆದ 10 ವರ್ಷಗಳಿಂದ ಅತಿಕ್ರಮಣಗೊಂಡಿರುವ ಕುರಿತು ಕಂದಾಯ ಇಲಾಖೆಗೆ ದೂರುಗಳು ಬಂದಾಗ ಅತಿಕ್ರಣಕಾರರಿಗೆ ನೋಟಿಸ್ ನೀಡಿದರೂ ಕ್ಯಾರೇ ಮಾಡದ ಹಿನ್ನೆಲೆಯಲ್ಲಿ ಈಗ ಸ್ವಾಧೀನ ಮಾಡುವ ಕಾರ್ಯಮಾಡಲಾಗಿದೆ.
ಎಲ್ಲೆಲ್ಲಿ ಕಾರ್ಯಚರಣೆ?:
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸರ್ವೇ ನಂ. 113/1ರಲ್ಲಿ 10 ಎಕ್ರೆ, ಪುತ್ತಿಲ ಗ್ರಾಮದ ಸರ್ವೇ ನಂ. 47/1ರಲ್ಲಿ 3.5 ಎಕ್ರೆ, ಕಳಂಜ ಗ್ರಾಮದ ಸರ್ವೇ ನಂ. 29/2ರಲ್ಲಿ 1.1 ಎಕ್ರೆ ಹಾಗೂ ಸರ್ವೇ ನಂ. 30ರಲ್ಲಿ 4.75 ಎಕ್ರೆ, ಮಚ್ಚಿನ ಗ್ರಾಮದ ಸರ್ವೇ ನಂ. 188/2ರಲ್ಲಿ 2.77 ಎಕ್ರೆ ಹಾಗೂ ಸರ್ವೇ ನಂ. 199/1ರಲ್ಲಿ 2 ಎಕ್ರೆ, ಸವಣಾಲು ಗ್ರಾಮದ ಸರ್ವೇ ನಂ. 31 ಹಾಗೂ 81ರಲ್ಲಿ ಒಟ್ಟು 5 ಎಕ್ರೆ, ಕರಿಮಣೇಲು ಗ್ರಾಮದ ಸರ್ವೇ ನಂ. 114/2ರಲ್ಲಿ 2.30 ಎಕ್ರೆ ಭೂಮಿ ಅತಿಕ್ರಮಣ ತೆರವುಗೊಳಿಸಲಾಗಿದೆ.
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ