ರೈತರಿಂದ ಬಾಳೆಹಣ್ಣು ಖರೀದಿಸಿ ವಿತರಣೆ
Team Udayavani, Nov 26, 2021, 12:29 PM IST
ಆಳಂದ: ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆ ಕುಸಿದು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಬೆಂಬಲ ನೀಡಲು ತಾಲೂಕಿನ ಮದಗುಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ವೇಳೆ ಗ್ರಾಮಸ್ಥರೊಬ್ಬರು ಬಾಳೆಹಣ್ಣು ಖರೀದಿಸಿ ನೀಡಿದರು.
ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣ್ಣಮನಿ ಬಾಳೆ ಬೆಳೆಗಾರರಿಂದ ಬಾಳೆಹಣ್ಣು ಖರೀದಿಸಿ 180 ವಿದ್ಯಾರ್ಥಿಗಳಿಗೆ ತಲಾ ಎರಡು ಬಾಳೆ ಹಣ್ಣು ವಿತರಿಸಿದರು.
ಇದೇ ವೇಳೆ ಪ್ರತಿಕ್ರಿಯಿಸಿದ ಸಣ್ಣಮನಿ, ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾಗಿದೆ. ಆದ್ದರಿಂದ ರೈತರಿಂದ ಬಾಳೆಹಣ್ಣು ಖರೀದಿಸಿ ಸಭೆ, ಸಮಾರಂಭ, ವಿವಾಹ ಸಮಾರಂಭಗಳಲ್ಲಿ ನೀಡಬೇಕು ಎಂದು ಕೋರಿದರು.
ಮುಖ್ಯ ಶಿಕ್ಷಕ ಬಸಣ್ಣ ಸಿಗರಕಂಟಿ ಅವರು ಕರವೇ ಜಿಲ್ಲಾ ಸಂಚಾಲಕರ ಕಾರ್ಯವನ್ನು ಶ್ಲಾಗಿಸಿದರು. ಶಿಕ್ಷಕರಾದ ಮಹಾದೇವ ಬಂಡೆ, ಭಾರತಿ, ನಾಗೇಶ ಇಂದಾಪುರೆ, ಬಸವರಾಜ, ಸಿದ್ಧು, ಶಿವನಿಂಗಪ್ಪ, ಬಿಸಿಯೂಟದ ಶಾಂತಾಬಾಯಿ ಮಾಂಗ್, ಭೌರಮ್ಮ ಸಣ್ಣಮನಿ, ಮಹಾದೇವಿ ಜಮಾದಾರ, ಗ್ರಾಮದ ನಾಗೇಶ ಮಡಿವಾಳ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ