ಸಂಗೀತ ಭಾರತೀಯ ಸಂಸ್ಕೃತಿ ಪ್ರತೀಕ: ಶಿವಲಿಂಗಾನಂದ ಶ್ರೀ
Team Udayavani, Dec 6, 2021, 1:11 PM IST
ಚಿತ್ರದುರ್ಗ: ಸಂಗೀತವೆಂದರೆ ಕೇವಲಮನರಂಜನೆಯಲ್ಲ, ಅದು ಸಂಸ್ಕಾರನೀಡಿ ಭಾರತೀಯ ಸಂಸ್ಕೃತಿಯನ್ನುಪ್ರತಿನಿ ಧಿಸುತ್ತದೆ ಎಂದು ಕಬೀರಾನಂದಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ನಗರದ ಎಂ.ಕೆ. ಹಟ್ಟಿ ಬಸವೇಶ್ವರವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದಅಖೀಲ ಕರ್ನಾಟಕ ಗಾನಯೋಗಿಸಂಗೀತ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಂಗೀತ ಮನಸ್ಸಿಗೆ ಮುದನೀಡುವುದರ ಜತೆಗೆ ಮಾನಸಿಕನೆಮ್ಮದಿಯನ್ನೂ ನೀಡುತ್ತದೆ. ಈ ನಿಟ್ಟಿನಲ್ಲಿಅಖೀಲ ಕರ್ನಾಟಕ ಗಾನಯೋಗಿ ಸಂಗೀತಪರಿಷತ್ ಸಂಗೀತ ಕಲೆ ಹಾಗೂ ಗುರುಪರಂಪರೆಯನ್ನು ಮುಂದುವರೆಸಿಕೊಂಡುಹೋಗುತ್ತಿರುವುದು ಸಂತೋಷದ ವಿಚಾರ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಗೀತಪರಿಷತ್ತಿನ ರಾಜ್ಯಾಧ್ಯಕ್ಷ ಚನ್ನವೀರ ಶಾಸ್ತ್ರಿಹಿರೇಮಠ ಕಡಣಿ ಮಾತನಾಡಿ, ಗಾನಯೋಗಿಪಂಡಿತ್ ಪಂಚಾಕ್ಷರಿ ಗವಾಯಿಗಳು ಮತ್ತುಪಂಡಿತ್ ಪುಟ್ಟರಾಜ ಕವಿ ಗವಾಯಿಗಳಪ್ರೇರಣೆಯಿಂದ ಪ್ರಾರಂಭವಾದಸಂಗೀತ ಪರಿಷತ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟನೆಯಾಗುತ್ತಿದೆ.
ಈ ಮೂಲಕ ಸಂಗೀತಗಾರರ, ಕಲಾವಿದರಸಮಸ್ಯೆಗಳನ್ನು ಸಂಘಟನೆಯ ಮೂಲಕಬಗೆಹರಿಸಲಾಗುವುದು. ಸರ್ಕಾರದಮಟ್ಟದಲ್ಲಿ ಎಲ್ಲಾ ಪ್ರಕಾರದ ಕಲಾವಿದರಿಗೆನ್ಯಾಯ ಕೊಡಿಸಬೇಕಿದೆ ಎಂದು ತಿಳಿಸಿದರು.
ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಂಗೀತ ಸಮ್ಮೇಳನಗಳನ್ನುಮಾಡುವುದಕ್ಕೆ ಸರ್ಕಾರ ಅನುದಾನನೀಡಬೇಕು ಎಂದು ಒತ್ತಾಯಿಸಲು ನಮ್ಮಲ್ಲಿಸಂಘಟನೆಯ ಕೊರತೆಯಿದೆ. ನಾವುಕೇವಲ ಸಮಾರಂಭದಲ್ಲಿ ಹಾಡಿ ಬಂದುಬಿಡುತ್ತೇವೆ. ಸಂಘಟನೆಯ ಗೋಜಿಗೆಹೋಗದಿರುವುದು ಹಿನ್ನಡೆಗೆ ಕಾರಣ.
ಸರ್ಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿಸಂಗೀತ ಶಿಕ್ಷಕರು ಸೇರಿದಂತೆ ರಂಗಶಿಕ್ಷಕರು, ಚಿತ್ರಕಲಾ ಶಿಕ್ಷಕರನ್ನು ನೇಮಕಾತಿಮಾಡಿಕೊಳ್ಳಬೇಕು. ಲಲಿತ ಕಲೆ, ಸಂಗೀತಪರಂಪರೆಯನ್ನು ಪ್ರೋತ್ಸಾಹಿಸಬೇಕೆಂದುಒತ್ತಾಯಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ,ಸಂಗೀತ ಕಲೆ ಒತ್ತಡದಿಂದ ಬದುಕುವಮನುಷ್ಯನಿಗೆ ಮಾನಸಿಕ ನೆಮ್ಮದಿ ಮತ್ತುಆರೋಗ್ಯ ನೀಡುತ್ತದೆ.
ಆ ನಿಟ್ಟಿನಲ್ಲಿಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಯುವಂತೆಪ್ರೋತ್ಸಾಹಿಸಬೇಕು. ಕಸಾಪ, ಶಸಾಪ ಮತ್ತುಗಾನಯೋಗಿ ಸಂಗೀತ ಪರಿಷತ್ ಮೂರುಸಂಘಟನೆಗಳು ಒಟ್ಟಾಗಿ ನಾಡು, ನುಡಿಗಾಗಿಬರುವ ದಿನಗಳಲ್ಲಿ ಅರ್ಥಪೂರ್ಣಕಾರ್ಯಕ್ರಮ ಆಯೋಜಿಸೋಣ ಎಂದುಸಲಹೆ ನೀಡಿದರು.
ಅಖೀಲ ಭಾರತ ವೀರಶೆ„ವ ಮಹಾಸಭಾದಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಸಂಗೀತಪರಿಷತ್ತಿನ ಜಿಲ್ಲಾಧ್ಯಕ್ಷ ತೋಟಪ್ಪ ಉತ್ತಂಗಿಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ವಿ. ಗುರುಮೂರ್ತಿ, ಯೋಗಾಚಾರ್ಯಎಲ್.ಎಸ್. ಚಿನ್ಮಯಾನಂದ, ಜಾನಪದಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನದೇವರಮನೆ, ಬಸವೇಶ್ವರ ವಿದ್ಯಾಸಂಸ್ಥೆಯಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಗೌರವಸಲಹೆಗಾರ ಕಾಲ್ಕೆರೆ ಚಂದ್ರಪ್ಪ, ಕಲಾವಿದಹರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಡಿ.ಒ. ಮುರಾರ್ಜಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ