ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಹಣ ನೀಡಿದ ಮತದಾರರು!
Team Udayavani, Dec 7, 2021, 5:14 PM IST
ಚಿತ್ರದುರ್ಗ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆಹಣದ ಕವರ್ ಕೊಟ್ಟು ಮತ ಹಾಕಿಸಿಕೊಳ್ಳುವುದು ಎಲ್ಲರಿಗೂಗೊತ್ತಿರುವ ಸತ್ಯ. ಆದರೆ ಕೆಲವೊಮ್ಮೆ ಅಭ್ಯರ್ಥಿ, ಪಕ್ಷವನ್ನುನೋಡಿ ಮತದಾರರೇ ನೋಟು-ವೋಟು ಕೊಡುವುದನ್ನೂಕಂಡಿದ್ದೇವೆ.
ಇಂಥದ್ದೇ ಘಟನೆ ಚಿತ್ರದುರ್ಗದಲ್ಲೂ ನಡೆದಿದ್ದು, ವಿಧಾನಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್. ನವೀನ್ ಅವರಿಗೆಮತದಾರರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಚುನಾವಣೆ ವೆಚ್ಚಕ್ಕಾಗಿ ಹಣದ ಕವರ್ ನೀಡಿದ್ದಾರೆ.
ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇರುವಾಗಸೋಮವಾರ ಬೆಳಗ್ಗೆ ಚಿತ್ರದುರ್ಗದಲ್ಲಿರುವ ಕೆ.ಎಸ್.ನವೀನ್ಅವರ ಮನೆಗೆ ಆಗಮಿಸಿದ ಚಿತ್ರದುರ್ಗ ತಾಲೂಕಿನಸೊಂಡೇಕೊಳ ಹಾಗೂ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮಪಂಚಾಯಿತಿ ಸದಸ್ಯರು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೀರಿ. ನಿಮಗೆ ನೋವಿದೆ.
ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ನಮ್ಮಜವಾಬ್ದಾರಿಯಾಗಿದ್ದು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದುಹೇಳಿ ಹಣದ ಕವರ್ ಕೈಗಿಟ್ಟಿದ್ದಾರೆ.ಇದರಿಂದ ಭಾವುಕರಾದ ಕೆ.ಎಸ್. ನವೀನ್, ಮತದಾರರಿಗೆಕವರ್ ಕೊಡುವುದು ಸಾಮಾನ್ಯ ಆದರೆ ಅಭ್ಯರ್ಥಿಗೆಮತದಾರರು ಕವರ್ ನೀಡಿರುವುದು ಮನಸ್ಸು ತುಂಬಿ ಬಂದಿದೆ.
ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ಚುನಾವಣೆಯಲ್ಲಿಬೆಂಬಲಿಸಿ ಎಂದು ಕೈಮುಗಿದಿದ್ದಾರೆ.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್,ಭಾರತಿ, ವಿಶಾಲಮ್ಮ, ಮಧುಕುಮಾರ್, ಲಕ್ಷ್ಮಮ್ಮ, ಕಲ್ಲಪ್ಪ,ಓಬಮ್ಮ, ಉಮೇಶ, ಜಯಪ್ಪ, ಉಷ, ಶಿವಮ್ಮ, ಮಲ್ಲಮ್ಮ,ಎಂ.ಡಿ.ಜಗದೀಶ್, ಗೋವಿಂದನಾಯ್ಕ, ಮಂಜುನಾಥ,ರಾಜಪ್ಪ, ರಂಗಸ್ವಾಮಿ, ರವಿ ಪûಾತೀತವಾಗಿ ನವೀನ್ ಅವರಿಗೆಬೆಂಬಲ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
MUST WATCH
ಹೊಸ ಸೇರ್ಪಡೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!