ಹೆಸರು ಉಲ್ಟಾ ಮಾಡಿ ಕೇಡಿ ಅನ್ನಬಹುದು : ಡಿಕೆಶಿಗೆ ಸಿಟಿ ರವಿ ತಿರುಗೇಟು
ನನ್ನ ಮೇಲೆ ಇಡಿ ದಾಳಿಯಾಗಿಲ್ಲ,ನಾನು ಗಾಜಿನ ಮನೆಯಲ್ಲಿಲ್ಲ...
Team Udayavani, Dec 16, 2021, 3:04 PM IST
ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲೂಟಿ ರವಿ ಎಂದು ಟೀಕಿಸಿದುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಿಡಿ ಕಾರಿ ಆಕ್ರೋಶ ಹೊರ ಹಾಕಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ನನ್ನ ಮೇಲೆ ಲೂಟಿ ಹೊಡೆದ, ಲ್ಯಾಂಡ್ ಗ್ರ್ಯಾಬಿಂಗ್ ಹೊಡೆದ, ಭ್ರಷ್ಟಾಚಾರ ಮಾಡಿದ ಅನ್ನುವ ಎಫ್ ಐಆರ್ ಇಲ್ಲ.ಆದರೆ ನಾನು ಡಿಕೆ ಅನ್ನು ಕೇಡಿ ಅಂತಾ ಹೇಳುವುದಕ್ಕೆ ಹೋಗುವುದಿಲ್ಲ” ಎಂದರು.
”ನನ್ನ ಮೇಲೆ ಇಡಿ ದಾಳಿಯಾಗಿಲ್ಲ, ನನ್ನ ಆಸ್ತಿ ಪ್ರಮಾಣ ಜಾಸ್ತಿಯಾಗಿಲ್ಲ,ನೂರುಪಟ್ಟು ಜಾಸ್ತಿಯಾದವರು ಹೇಳಲಿ.ನನ್ನನ್ನ ಲೂಟಿ ರವಿ ಅನ್ನುವುದಕ್ಕೆ ಮುಂಚೆ ಯೋಚನೆ ಮಾಡಲಿ ಎಂದು ಕಿಡಿ ಕಾರಿದರು.
‘ನೀವು ಸಭ್ಯತೆಯನ್ನ ಮೀರಿದರೆ, ನಿಮ್ಮ ಭಾಷೆಯಲ್ಲೂ ಉತ್ತರಕೊಡಬೇಕಾಗುತ್ತೆ. ನನ್ನ ಮೇಲೆ ಇಡಿ ದಾಳಿಯಾಗಿಲ್ಲ,ನಾನು ಗಾಜಿನ ಮನೆಯಲ್ಲಿಲ್ಲ. ನನ್ನ ಸಾರ್ವಜನಿಕ ಬದುಕಿನ ಬಗ್ಗೆ ಮಾತನಾಡುವವರು ನಿಮ್ಮ ಸಾರ್ವಜನಿಕ ಜೀವನದ ಬಗ್ಗೆ ತಿಳಿದುಕೊಂಡು ಮಾತನಾಡಿ. ನಾನು ನಿಮ್ಮ ಹೆಸರು ಉಲ್ಟಾ ಮಾಡಿ ಕೇಡಿ ಅನ್ನಬಹುದು. ನನಗೂ ಮಾತನಾಡುವುದಕ್ಕೆ ಬರುತ್ತದೆ” ಅಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್ನಲ್ಲಿ ನಟನೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
Puttur: ಬಸ್ – ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು
IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್ ತೀಕ್ಷ್ಣ ತಿರುಗೇಟು!
Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್ನಲ್ಲಿ ನಟನೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
Puttur: ಬಸ್ – ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು
IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್ ತೀಕ್ಷ್ಣ ತಿರುಗೇಟು!
Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ