ಉತ್ತಮ ಇಳುವರಿ ಬಂದ್ರೂ ಬಾಳೆಹಣ್ಣಿಗೆ ಬರಲಿಲ್ಲ ಬೆಲೆ
Team Udayavani, Dec 17, 2021, 10:10 AM IST
ಕಲಬುರಗಿ: ಪ್ರಸಕ್ತ ವರ್ಷ ಹೆಚ್ಚಿನ ಮಳೆ ಯಾಗಿದ್ದರಿಂದ ಬಾಳೆ ಬೆಳೆ ಉತ್ತಮವಾಗಿ ಬಂದಿದ್ದು, ಆದರೆ ಬೆಲೆ ಕುಸಿತವಾಗಿದ್ದರಿಂದ ರೈತ ಪಾತಾಳಕ್ಕೆ ಇಳಿಯುವಂತಾಗಿದೆ.
ಇದಕ್ಕೂ ಮುಂಚೆ ಕೆ.ಜಿ ಬಾಳೆಹಣ್ಣಿಗೆ 8ರಿಂದ 10ರೂ. ಬೆಲೆಯಿತ್ತು. ಆದರೆ ಈಗ ಕೆಜಿಗೆ 2ರಿಂದ 3ರೂ.ಗೂ ಯಾರೂ ಕೇಳದಂತಾಗಿದೆ. ಹೀಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
ಕೆ.ಜಿಗೆಎರಡು ರೂ.ಗೆಬಾಳೆಹಣ್ಣುಇಳಿದಿದ್ದರಿಂದ ಅದರ ಕೂಲಿ ಖರ್ಚು ಬರೋದಿಲ್ಲ ಎಂದು ತಿಳಿದುಕೊಂಡು ಬಾಳೆಹಣ್ಣು ಹಾಗೆ ಬಿಟ್ಟಿದ್ದರಿಂದ ಬಾಳೆ ಗಿಡದಲ್ಲೇ ಕೊಳೆತು ಹಣ್ಣು ಕೊಳೆಯುತ್ತಿರುವುದರಿಂದ ಹುಳುಗಳಾಗಿದ್ದರಿಂದ ಗಬ್ಬೆದ್ದು ವಾಸನೆ ಬರುತ್ತಿರುವುದರಿಂದ ರೈತ ಹೊಲದತ್ತ ಹೆಜ್ಜೆ ಇಡದಂತಾಗಿದೆ.
ಇನ್ನು ಕೆಲವರು ಬಾಳೆಹಣ್ಣುಗಳನ್ನು ದನಕರುಗಳಿಗೆ ತಿನ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಆಳಂದ, ಅಫಜಲಪುರ, ಕಲಬುರಗಿ ತಾಲೂಕಿನಲ್ಲಿ ಬಾಳೆ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಹೆಕ್ಟೇರ್ದಲ್ಲಿ ಬಾಳೆ ಬೆಳೆಯಲಾಗಿದೆ. ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ನೂರಾರು ರೈತರು ಬಾಳೆ ಬೆಳೆದಿದ್ದು, ಈಗ ಬೆಲೆ ಪಾತಾಳಕ್ಕೆ ಇಳಿದಿದ್ದರಿಂದ ರೈತರೆಲ್ಲ ಕಂಗಾಲಾಗಿದ್ದಾರಲ್ಲದೇ ನಮಗೆ ಯಾರು ದಿಕ್ಕು ಎಂದು ಕಣ್ಣೀರು ಹಾಕುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಲಾಕ್ಡೌನ್ದಿಂದ ನಷ್ಟ ಅನುಭವಿಸಿದ್ದರಿಂದ ಬೆಲೆ ಇಳಿಕೆಯಿಂದ ಮತ್ತಷ್ಟು ಸಾಲ ಹೆಚ್ಚಾಗಿ ಹೊಲ ಮಾರುವ ಸ್ಥಿತಿಗೆ ಬಂದಿದ್ದೇವೆ ಎನ್ನುತ್ತಾರೆ ರೈತರು.
ಬಾಳೆಹಣ್ಣು ವರ್ಷದುದ್ದಕ್ಕೂ ಮಾರು ಕಟ್ಟೆಯಲ್ಲಿ ದೊರಕುತ್ತದೆ. ರೈತರ ಬಳಿ ಎರಡು ರೂ. ಕೆ.ಜಿಗೆ ಕೇಳದಂತಾದರೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ 30ರಿಂದ 40ರೂ.ಗೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಶೋಷಣೆಗೆ ಒಳಗಾಗುವಂತಾಗಿದೆ. ಈಗಂತೂ ಲಾಕ್ಡೌನ್ ಇಲ್ಲ. ಮಾರುಕಟ್ಟೆ ಯಥಾಸ್ಥಿತಿಯಲ್ಲಿದೆ. ಆದರೆ ಬೆಲೆ ಏಕೆ ಕುಸಿತವಾಗಿದೆ ಎಂಬುದೇ ತಿಳಿಯದಂತೆ ಆಗಿದೆ.
ಶಾಲೆಯಲ್ಲಿ ಬಾಳೆಹಣ್ಣು
ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆಯಿದೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಬೇಕಿತ್ತು. ಆದರೆ ಉಲ್ಟಾ ಎನ್ನುವಂತೆ ಬೆಲೆ ಕುಸಿತವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಳೆ ಹಣ್ಣು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.
ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ನಿಗದಿ ಮಾಡಬೇಕೆನ್ನುತ್ತಾರೆ ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.
ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ನಿಗದಿ ಮಾಡಬೇಕೆನ್ನುತ್ತಾರೆ. ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.
ಬಾಳೆಬೆಳೆ ವಿಸ್ತಾರ ಸ್ವಲ್ಪಹೆಚ್ಚಳವಾಗಿದೆ. ಜತೆಗೆ ಬೇರೆ ರಾಜ್ಯಗಳಿಗೆ ಸಾಗಾಣೆ ಆಗುತ್ತಿತ್ತು. ಆದರೆ ಮೊದಲಿನ ಹಾಗೆ ಸಾಗಾಣಿಕೆ ಆಗುತ್ತಿಲ್ಲ. ಇಷ್ಟು ದಿನ 10ರಿಂದ 12ರೂಗೆಕೆ.ಜಿ ಬಾಳೆಹಣ್ಣು ಮಾರಾಟವಾಗಿದೆ. ಆದರೀಗ ದರಕಡಿಮೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. 2ರಿಂದ 3ರೂ ಕೆ.ಜಿ ಆಗಿರುವುದು ಗಮನಕ್ಕೆ ಬಂದಿಲ್ಲ. ಎಪಿಎಂಸಿಯಲ್ಲಿ ದರದಕುರಿತು ವಿಚಾರಿಸಲಾಗುವುದು. -ಪ್ರಭುರಾಜಎಚ್.ಎಸ್., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಎರಡು ವರ್ಷ ಲಾಕ್ ಡೌನ್ದಿಂದ ಮೊದಲೇ ನಷ್ಟ ಅನುಭವಿಸಿದ್ದೇವೆ. ಈಗ ಬೆಲೆ ಕುಸಿತದಿಂದ ದಿಕ್ಕೇ ತೋಚದಂತಾಗಿದೆ. ಹೆಚ್ಚುತ್ತಿರುವ ಸಾಲದಿಂದ ಹೊಲ ಮಾರುವ ಸ್ಥಿತಿ ನಿರ್ಮಾಣವಾಗಿದೆ. -ಮಲ್ಲಿನಾಥ ಪಾಗಾ, ಬಾಳೆ ಬೆಳೆದ ರೈತ, ನಿಂಬಾಳ
-ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್