ಪ್ರಕೃತಿ ಸಮತೋಲನ ಕೃಷಿ ಮಾಡಿ: ಹೇಮಾವತಿ ಸುಲ್ಪಿ
ರೈತರು ಮುಖ್ಯವಾಗಿ ಸುಸ್ಥಿರತೆ ಕೃಷಿ ಅಳವಡಿಸಿಕೊಳ್ಳಬೇಕು
Team Udayavani, Jan 10, 2022, 2:15 PM IST
ಕಲಾದಗಿ: ತೋಟಗಾರಿಕಾ ಇಲಾಖೆಯಡಿ ಬರುವ ವಿವಿಧ ಸೌಲಭ್ಯಗಳ ಸದುಪಯೋಗವನ್ನು ರೈತರು ಪಡೆದುಕೊಂಡು ರೈತರು ಕೃಷಿ ಜೀವನದಲ್ಲಿ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖಾ ಬಾಗಲಕೋಟೆ ಹಿರಿಯ ಸಹಾಯಕ ನಿರ್ದೇಶಕಿ ಹೇಮಾವತಿ ಸುಲ್ಪಿ ಹೇಳಿದರು.
ಉದಗಟ್ಟಿ ಗ್ರಾಮದ ಮಂಜು ಯರಡ್ಡಿಯವರ ತೋಟದಲ್ಲಿ, ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ನಡೆದ ರೈತರಿಗೆ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಮುಖ್ಯವಾಗಿ ಸುಸ್ಥಿರತೆ ಕೃಷಿ ಅಳವಡಿಸಿಕೊಳ್ಳಬೇಕು, ಒಂದೇ ತೆರನಾದ ಬೆಳೆ ಬೆಳೆಯದೆ, ಮಿಶ್ರ ಬೆಳೆ ಬೆಳಯಬೇಕು, ಆರ್ಥಿಕ ಸುರಸ್ಥಿರತೆ ಕಾಪಾಡಿಕೊಳ್ಳುವ ಜತೆಗೆ ಪಾಕೃತಿಕ ಸಮತೋಲನ ಕಾಪಾಡುವ ಕೃಷಿ ಮಾಡಬೇಕು, ರೈತರು ಆರಾಮ ಇರಬೇಕು ಎನ್ನುವ ಬೆಳೆ ಬೆಳೆಯಬೇಕು ಅಂದುಕೊಂಡಿದ್ದರೆ ಎಂದರೆ ಬೇರೆಯವರ ಮುಂದೆ ಕೈ ಮುಗಿಯಬೇಕಾದ ಪರಿಸ್ಥಿತಿ ಬರಬಹುದು, ಕೃಷಿಗೆ ಪೂರಕ ದನ, ಆಡು, ಕುರಿ, ಕೋಳಿ, ಹಣ್ಣು ಮರಗಳನ್ನು ಬೆಳೆಯಬೇಕು ಎಂದರು.
ನಿವೃತ್ತ ಸಾಹಾಯಕ ಕೃಷಿ ಅಧಿ ಕಾರಿ ಎಚ್. ಎನ್.ಕಡಪಟ್ಟಿ ಮಾತನಾಡಿ, ಇಂದಿನ ಕೃಷಿಯಲ್ಲಿ ಮಾನವ ಸಂಪನ್ಮೂಲ ಕೊರತೆ ಇದೆ, ನಿರಂತರ ಆದಾಯ ಬರುವ ಬೆಳೆ ಕೃಷಿ ಮಾಡಿ ರೈತರು ಸಾಲ ಮುಕ್ತವಾಗಬೇಕು ಎಂದರು. ಚಂದ್ರಶೇಖರ ಶೆಲೆಯಪ್ಪನವರ, ಹೊಳಬಸು ಕಲ್ಲೊಳ್ಳಿ, ಯಮನಪ್ಪ ಗುಡ್ಲಾರ್, ತಿಪ್ಪಣ್ಣ ಹಡಪದ, ಮುತ್ತಪ್ಪ ಕರಡಿಗುಡ್ಡ,ಯಲ್ಲಪ್ಪ ಕರಡಿಗುಡ್ಡ, ಹನಮಂತ ಜಕ್ಕನವರ್, ಯಮನಪ್ಪ ಯರಡ್ಡಿ, ಮುಪ್ಪಣ್ಣ ಮಕಾನಿ, ಆನಂದ ಮೇಟಿ, ಮಂಜು ನಾಯ್ಕರ್, ಮಹೇಶ ಹಿರೇಮಠ, ಚಂದ್ರಶೇಖರ ಕರಡಿಗುಡ್ಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು