ಸಾಗರ: ಮೂರು ಕಣ್ಣಿನ ಅಡಿಕೆ ಪತ್ತೆ
Team Udayavani, Jan 15, 2022, 12:25 PM IST
ಸಾಗರ: ಹಸಿ ಅಡಿಕೆಯನ್ನು ಸುಲಿದಾಗ ಒಂದು ಕಣ್ಣು ಕಾಣಿಸುವುದು ಪ್ರಕೃತಿ ನಿಯಮ. ಉರುಟಾದ ಅಡಿಕೆಯ ಚಪ್ಪಟೆಯ ಭಾಗದಲ್ಲಿ ಬಿಳಿ ಮೃದು ಭಾಗದಲ್ಲಿ ಬುಗುರಿಯ ರೂಪದ ಬಿಳಿ ಕಣ್ಣಿರುತ್ತದೆ. ಪ್ರಕೃತಿಯ ವೈಚಿತ್ರದ ಆಟದಲ್ಲಿ ಇಂತಹ ಅಡಿಕೆ ಬೆಳೆಯಲ್ಲಿ ಕೆಲವೊಮ್ಮೆ ಎರಡು ಸಯಾಮಿಗಳು ಸೃಷ್ಟಿಯಾಗಿ ಎರಡು ಕಣ್ಣುಗಳಿರುವುದನ್ನೂ ಕಾಣುತ್ತೇವೆ. ಅದಕ್ಕೆ ಬೆನವ ಅಥವಾ ಬೆನಮ ಎನ್ನುತ್ತಾರೆ.
ಹಿಂದೆಲ್ಲ ಅಡಿಕೆ ಸುಲಿಯುವವರಿಗೆ ಬೆನವ ಬಂದರೆ ಅದನ್ನು ಅಡಿಕೆ ಸುಲಿಯುತ್ತಿರುವ ಇತರರಿಗೆ ತೋರಿಸಿದರೆ ಅವರು ಆಗ ತಮ್ಮ ಕೈಯಲ್ಲಿ ಇರುವ ಅಷ್ಟೂ ಸುಲಿದ ಅಡಿಕೆಯನ್ನು ಕೊಡಬೇಕಿತ್ತು. ಈ ಕೆಲಸವನ್ನು ಅಲ್ಲೇ ಆಟವಾಡುವ ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದರು.
ಪ್ರಕೃತಿ ತೀರಾ ವೈಚಿತ್ರ್ಯ ಪ್ರದರ್ಶಿಸಿದಾಗ ಮೂರು ಕಣ್ಣಿನ ಅಡಿಕೆ ಕಂಡುಬರುತ್ತದೆ! ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಸರದ ಎಸ್.ಪಿ.ಲಕ್ಷ್ಮೀನಾರಾಯಣಭಟ್ಟರ ಮನೆಯಲ್ಲಿ ಹಸಿ ಅಡಿಕೆ ಸುಲಿದಾಗ ಈ ಮೂರು ಕಣ್ಣಿನ ಬೆನವ ಕಾಣಿಸಿದೆ. ಸುಲಿಯುವಾಗಲೇ ಹೋಳಾಗಿಬಿಡುವ ಅಪಾಯವಿರುವ ಈ ಬೆನವ ಏನೂ ಘಾಸಿಯಾಗದೆ ಸುಲಿತವಾಗಿರುವುದು ಕೂಡ ಅಪರೂಪವೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ