ಬಿಸಿಎಂ ಹಾಸ್ಟೆಲ್‌ನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ಅನಾಹುತ, ತುರ್ತು ನಿರ್ಗಮನ ಇಲ್ಲದ ಕಟ್ಟಡ


Team Udayavani, Jan 15, 2022, 12:16 PM IST

ಬಿಸಿಎಂ ಹಾಸ್ಟೆಲ್‌ನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ಅನಾಹುತ, ತುರ್ತು ನಿರ್ಗಮನ ಇಲ್ಲದ ಕಟ್ಟಡ

ಕುಂದಾಪುರ : ಇಲ್ಲಿನ ತಾ.ಪಂ. ಬಳಿ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಅಗ್ನಿ ಆಕಸ್ಮಿಕ ಆಗಿದ್ದು ಸಕಾಲಿಕ ಸಮಯ ಚಾತುರ್ಯದಿಂದ ಸಂಭಾವ್ಯ ಅನಾಹುತ ತಪ್ಪಿದೆ. ಆದರೆ ತುರ್ತು ನಿರ್ಗಮನ ಇಲ್ಲದ ಈ ಹಾಸ್ಟೆಲ್‌ ಕಟ್ಟಡದಲ್ಲಿ ಇದ್ದ ಒಂದೇ ಪ್ರವೇಶ ನಿರ್ಗಮನ ದ್ವಾರದಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿನಿಯರು ಹೊರ ತೆರಳಲು ಪ್ರಯತ್ನಪಟ್ಟ ಕಾರಣ ಸಮಸ್ಯೆ, ಗೊಂದಲ ಉಂಟಾಯಿತು.

ಒಂದೇ ಬಾಗಿಲು
ಕಟ್ಟಡದಲ್ಲಿ ಸಭಾಂಗಣ ಅಥವಾ ಪ್ರಾರ್ಥನಾ ಹಾಲ್‌ ಇದೆ. ಊಟದ ಕೊಠಡಿ, ಅಡುಗೆ ಕೋಣೆ, ಸ್ಟೋರ್‌ ರೂಂ, ಬಟ್ಟೆ ಒಗೆಯಲು ಕೊಠಡಿ, ಶೌಚಾಲಯ, ಸ್ನಾನದ ಕೊಠಡಿಗಳು, ವಾರ್ಡನ್‌ ಕಚೇರಿ ಇವೆ. ವಿಶಾಲ ಗಾಳಿ ಬೆಳಕಿನ ವ್ಯವಸ್ಥೆಗೆ ಬೇಕಾದಂತೆ ಕಟ್ಟಡದ ವಿನ್ಯಾಸ ರೂಪಿಸಲಾಗಿದೆ. ಆದರೆ ಒಂದೇ ಪ್ರವೇಶ ದ್ವಾರ ಇದೆ. ಪ್ರವೇಶ ನಿರ್ಗಮನ ಎರಡೂ ಇದರಲ್ಲೇ.
ರಾಜ್ಯಾದ್ಯಂತ ಏಕವಿನ್ಯಾಸದಲ್ಲಿ ಹಾಸ್ಟೆಲ್‌ ಕಟ್ಟಡಗಳನ್ನು ಇಲಾಖೆಯ ಎಂಜಿನಿಯರ್‌ ವಿನ್ಯಾಸಗೊಳಿಸುವ ಕಾರಣ ಹೀಗಾಗಿದೆ. ವಿದ್ಯಾರ್ಥಿನಿ ನಿಲಯಗಳಾದ ಕಾರಣ ಭದ್ರತೆಯ ದೃಷ್ಟಿಯಿಂದ ಒಂದೇ ಬಾಗಿಲು ಮಾಡಲಾಗುತ್ತದೆ.

ಗೊಂದಲ
ಒಂದೇ ಬಾಗಿಲು ಮಾಡಿರುವುದು ಭದ್ರತೆ ದೃಷ್ಟಿಯಿಂದ ಸೂಕ್ತ. ಆದರೆ ಅಡುಗೆ ಸಾಮಗ್ರಿ, ಅಡುಗೆ ಅನಿಲ ಸೇರಿದಂತೆ ವಸ್ತುಗಳು ಬಂದಾಗ ಲಾರಿ ಕಟ್ಟಡದ ಹಿಂದೆ ವರೆಗೆ ಹೋಗಲು ವ್ಯವಸ್ಥೆ ಇದೆ. ಬಾಗಿಲ ಬಳಿ ಲಾರಿ ನಿಲ್ಲಿಸಲು, ಲಾರಿ ತಲುಪಲು ಅವಕಾಶವೇ ಇಲ್ಲ. ಒಂದೋ ಕಾಂಪೌಂಡ್‌ನ‌
ಹೊರಗೆ ರಸ್ತೆಯಲ್ಲಿ ನಿಲ್ಲಿಸಬೇಕು ಅಥವಾ ಕಾಂಪೌಂಡ್‌ ಒಳಗೆ ತಂದರೆ ಕಟ್ಟಡದ ಹಿಂದೆವರೆಗೆ ಹೋಗಬೇಕು. ಆದರೆ ಮುಂಬಾಗಿಲವರೆಗೆ ಹೊತ್ತು ತರಬೇಕು. ಇದು ಹೆಚ್ಚುವರಿ ಕೆಲಸ.

ಅಗ್ನಿ ಆಕಸ್ಮಿಕ
ಕಟ್ಟಡದಲ್ಲಿ ಒಳಗೆ ಮೇನ್‌ ಸ್ವಿಚ್‌ ಬಳಿ ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಉಂಟಾಯಿತು. ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತು. ಆಗ ಹಾಸ್ಟೆಲ್‌ ಒಳಗಿದ್ದ 130 ಮಂದಿ (10 ಮಂದಿ ಇರಲಿಲ್ಲ) ವಿದ್ಯಾರ್ಥಿನಿಯರು ಕಟ್ಟಡದ ಹೊರಹೋಗಲು ಪಡಿಪಾಟಲು ಪಡಬೇಕಾಯಿತು. ಒಂದೇ ಬಾಗಿಲು ಇದ್ದ ಕಾರಣ ನೂಕು ನುಗ್ಗಲಾಯಿತು. ಈ ಮಧ್ಯೆಯೇ ಅದನ್ನು ಸರಿಪಡಿಸುವ, ಆರಿಸುವ ಕೆಲಸವೂ ನಡೆಯಬೇಕಿತ್ತು. ಕಾಲು¤ಳಿತವೂ ಆಯಿತು. ಇಂತಹ ಸಂದರ್ಭದಲ್ಲಿ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರ ಒಂದು ಇರಬೇಕು ಎಂಬ ಅಭಿಪ್ರಾಯ ಕೇಳಿ ಬಂತು. ಸ್ಥಳೀಯರು ಸೇರಿ ಬೆಂಕಿ ನಂದಿಸುವ, ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರುವ ಕೆಲಸ ಮಾಡಿದರು.

ಇಲಾಖೆ ನಿರ್ಲಕ್ಷ್ಯ
ಕಟ್ಟಡಕ್ಕೆ ತಾಗಿಕೊಂಡೇ ವಿದ್ಯುತ್‌ ಹೈ ಟೆಂಷನ್ ಲೈನ್‌ ಹಾದು ಹೋಗಿತ್ತು. ವಿದ್ಯುತ್‌ ಕಂಬ ಸ್ಥಳಾಂತರಿಸಬೇಕಿತ್ತು. ಶಾಸಕರು ಮೆಸ್ಕಾಂಗೆ ಪತ್ರ ಬರೆದಾಗ ಸ್ವಂತ ಅನುದಾನದಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ ಬಿಸಿಎಂ ಇಲಾಖೆ ಹಣ ಕಟ್ಟಿದರೆ ಕಂಬ ಸ್ಥಳಾಂತರಿಸಲಾಗುವುದು ಎಂದು ಮೆಸ್ಕಾಂ ಇಲಾಖೆ ಉತ್ತರಿಸಿತ್ತು. ಎರಡು ವರ್ಷಗಳಾದರೂ ಇಲಾಖೆ ಹಣವೂ ಕಟ್ಟಿರಲಿಲ್ಲ, ಸ್ಥಳಾಂತರಕ್ಕೆ ಕ್ರಮವೂ ಕೈಗೊಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಮರ ಬಿದ್ದು ಕಂಬ ತುಂಡಾಯಿತು. ಅದೃಷ್ಟವಶಾತ್‌ ತಂತಿ ಹಾಸ್ಟೆಲ್‌ ಮೇಲೆ ಬೀಳಲಿಲ್ಲ. ಮೆಸ್ಕಾಂನವರು ಮಾನವೀಯತೆ ನೆಲೆಯಲ್ಲಿ ಕಂಬವನ್ನು ತುಸು ದೂರ ಹಾಕಿದ್ದಾರಾದರೂ ಪೂರ್ಣ ಸುರಕ್ಷಿತವಲ್ಲ. ಹಾಗಿದ್ದರೂ ಬಿಸಿಎಂ ಇಲಾಖೆ ಮೌನಕ್ಕೆ ಶರಣಾಗಿದೆ. ಈಗ ತುರ್ತುನಿರ್ಗಮನ ದ್ವಾರದ ಸರದಿ. ಇಲಾಖೆ ಸ್ಥಳೀಯವಾಗಿ ಇದನ್ನು ಸರಿಪಡಿಸುವಂತಿಲ್ಲ. ಬಾಗಿಲು ಅಳವಡಿಸುವಂತಿಲ್ಲ. ಮೇಲಧಿಕಾರಿಗಳು ಮುತುವರ್ಜಿ ವಹಿಸಬೇಕು. ಹಿರಿಯ ಅಧಿಕಾರಿಗಳಿಂದ ಅನುಮತಿ ಬರಬೇಕು. ಆಗಷ್ಟೇ ಸಾಧ್ಯ. ಇಂತಹ ನಿರ್ಲಕ್ಷ್ಯ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ತೊಡಕೆಂದು ಯಾಕೆ ಅನಿಸುವುದಿಲ್ಲ.

ಭೇಟಿ ನೀಡಿದ್ದೇನೆ
ವಿದ್ಯಾರ್ಥಿನಿ ನಿಲಯದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆ. ಅಗ್ನಿ ಆಕಸ್ಮಿಕ ನಡೆದ ಬಳಿಕ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಏಕರೂಪದ ವಿನ್ಯಾಸ ಇರುವ ಕಾರಣ ಸ್ಥಳೀಯವಾಗಿ ನಾವು ಕಟ್ಟಡದ ವಿನ್ಯಾಸ ಬದಲಿಸುವಂತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

-ದೇವೀಂದ್ರ ಎಸ್‌. ಬಿರಾದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಉಡುಪಿ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.