ಶ್ರೀ ಕೃಷ್ಣಾಪುರ ಶ್ರೀಗಳಿಗೆ ಗೌರವಾರ್ಪಣೆ
ಕೆನರಾ ಬ್ಯಾಂಕ್ ಕಚೇರಿಯಲ್ಲಿ ಭಾವೀ ಪರ್ಯಾಯ ಶ್ರೀಗಳು
Team Udayavani, Jan 16, 2022, 2:10 AM IST
ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಪೀಠಾ ಧೀಶರಾದ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಮಣಿಪಾಲ ವೃತ್ತ ಕಚೇರಿಯಲ್ಲಿ ಗೌರವಾರ್ಪಣೆ ಸಮರ್ಪಿಸಲಾಯಿತು.
ಶ್ರೀಪಾದರು ಸಂಸ್ಥೆಯ ಕಾರ್ಯ ವೈಖರಿ, ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬಂದಿಗೆ ಫಲ ಮಂತ್ರಾಕ್ಷತೆ ನೀಡಿ ಪರ್ಯಾಯ ಮಹೋತ್ಸವಕ್ಕೆ ಎಲ್ಲರನ್ನೂ ಸ್ವಾಗತಿಸಿದರು.
ಬ್ಯಾಂಕ್ನ ಜನರಲ್ ಮ್ಯಾನೇಜರ್ ರಾಮಾ ನಾಯ್ಕ ಅವರು ಶ್ರೀಪಾದರಿಗೆ ಗೌರವಾರ್ಪಣೆ ಸಲ್ಲಿಸಿದರು. ಜಿಎಂ ಡಾ| ಅನಿಲ್ ಕುಮಾರ್ ಪಾಂಡೆ, ಡಿಜಿಎಂ ಧರಮ್ವೀರ್ ಸಿಂಗ್, ಮಿನ್ನಿ ಕೆ., ಪದ್ಮಾವತಿ ಮೊದಲಾದವರು ಉಪಸ್ಥಿತರಿದ್ದರು.