ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ
Team Udayavani, Jan 21, 2022, 12:42 PM IST
ಬೆಂಗಳೂರು: ಮಣಿಂದರ್ ಸಿಂಗ್ ಮತ್ತು ಪವನ್ ಸೆಹ್ರಾವತ್ ನಡುವಿನ ಪಂದ್ಯಾಟದಲ್ಲಿ ಮಣಿಂದರ್ ಪಡೆಗೆ ಜಯವಾಗಿದೆ. ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಬೆಂಗಳೂರು ಬುಲ್ಸ್ ತಂಡ ನಬಿ ಬಕ್ಷ್ ಮಾಡಿದ ಒಂದೇ ಒಂದು ರೈಡ್ ನಿಂದ ಪಂದ್ಯ ಕಳೆದುಕೊಂಡಿತು.
ಸೆಕೆಂಡ್ ಹಾಫ್ ನಲ್ಲಿ ಬೆಂಗಳೂರು ಬುಲ್ಸ್ ತಂಡ 27-20 ಅಂಕಗಳೊಂದಿಗೆ ಮುನ್ನಡೆಯಲ್ಲಿತ್ತು. ಬೆಂಗಾಳ್ ಪಾಳಯದಲ್ಲಿ ಇದ್ದಿದ್ದು, ನಬಿ ಬಕ್ಷ್ ಒಬ್ಬರೇ. ಬುಲ್ಸ್ ನಲ್ಲಿ ಎಲ್ಲಾ ಆಟಗಾರರು ಮ್ಯಾಟ್ ನಲ್ಲಿದ್ದರು. ರೈಡ್ ಗೆ ಬಂದ ಆತ ಬೆಂಗಳೂರು ತಂಡದ ಎಲ್ಲಾ ಆಟಗಾರರನ್ನು ಔಟ್ ಮಾಡಿ ಎಂಟು ಅಂಕ ಪಡೆದರು.
ರೈಡ್ ಗೆ ಬಂದ ನಬಿಬಕ್ಷ್ ಲೆಫ್ಟ್ ಕಾರ್ನರ್ ಗೆ ಓಡಿದಾಗ ಬುಲ್ಸ್ ನ ಎಲ್ಲಾ ಆಟಗಾರರು ಹಿಡಿಯಲು ಬಂದರು. ನಬಿ ಬಕ್ಷ್ ಮಧ್ಯ ಗೆರೆ ಮುಟ್ಟುವ ಮೊದಲೇ ಅವರನ್ನು ಔಟ್ ಮಾಡಿದರು. ಅಂಪೈರ್ ಕೂಡಾ ಬುಲ್ಸ್ ಗೆ ಬೋನಸ್ ಪಾಯಿಂಟ್ ಮತ್ತು ಬೆಂಗಳೂರಿಗೆ ಒಂದು ಟ್ಯಾಕಲ್ ಅಂಕ ಮತ್ತು ಆಲೌಟ್ ನ ಎರಡು ಅಂಕ ಕೊಟ್ಟಿದ್ದರು.
ಆದರೆ ಬೆಂಗಾಲ್ ಕೋಚ್ ಕೂಡಲೇ ರಿವೀವ್ ಪಡೆದರು. ರಿವೀವ್ ನಲ್ಲಿ ನೋಡಿದಾಗ ರೈಡರ್ ನಬಿ ಯಾವುದೇ ಆಟಗಾರರನ್ನು ಮುಟ್ಟುವ ಮೊದಲೇ ಲಾಬಿ ಟಚ್ ಮಾಡಿದ್ದು ಗೊತ್ತಾಗಿತ್ತು. ಯಾವುದೇ ಡಿಫೆಂಡರನ್ನು ಮುಟ್ಟದೆ ರೈಡರ್ ಲಾಬಿ ಮುಟ್ಟಿದರೆ ರೈಡರ್ ಔಟಾಗುತ್ತಾನೆ, ಅಲ್ಲದೆ ಈ ವೇಳೆ ಆತನೊಂದಿಗೆ ಯಾರೇ ಡಿಫೆಂಡರ್ ಲಾಬಿ ಪ್ರವೇಶಿಸಿದರೆ ಆ ಡಿಫೆಂಡರ್ ಕೂಡಾ ಔಟಾಗುತ್ತಾರೆ. ಈ ರೈಡ್ ನಲ್ಲಿ ನಬಿ ಬಕ್ಷ್ ನೊಂದಿಗೆ ಆರು ಮಂದಿ ಡಿಫೆಂಡರ್ ಲಾಬಿ ಪ್ರವೇಶಿಸಿದ್ದರು. ಬುಲ್ಸ್ ನ ಚಂದ್ರನ್ ರಂಜಿತ್ ರೈಡರ್ ಟಚ್ ಗೂ ಮೊದಲೇ ಲಾಬಿ ಪ್ರವೇಶಿಸಿದ್ದರಿಂದ ಸೆಲ್ಫ್ ಔಟಾದರು. ಹೀಗಾಗಿ ಬೆಂಗಾಲ್ ಗೆ ಬೋನಸ್ ಮತ್ತು ಏಳು ಅಂಕ ನೀಡಲಾಯಿತು.
<insert a mind-blown emoji>
This 8-point raid for the @BengalWarriors was our Moment of the Day – no questions asked!#SuperhitPanga #BLRvBEN @BengaluruBulls pic.twitter.com/GYpD2sMmKZ
— ProKabaddi (@ProKabaddi) January 21, 2022
ಒಂದೇ ರೈಡ್ ನಲ್ಲಿ ಮುನ್ನಡೆ ಸಾಧಿಸಿದ ಬೆಂಗಾಲ್ ವಾರಿಯರ್ಸ್ ತಂಡ ಕೊನೆಗೆ 40-39ರ ಅಂತರದಿಂದ ಗೆಲುವು ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand Open: ಚಿರಾಗ್ ಶೆಟ್ಟಿ-ಸಾತ್ವಿಕ್ ಚಾಂಪಿಯನ್ಸ್
Italian Open ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್
KKR vs RR ಪಂದ್ಯ ಮಳೆಯಿಂದಾಗಿ ರದ್ದು: ಆರ್ ಸಿಬಿಗೆ ರಾಜಸ್ಥಾನ್ ಎಲಿಮಿನೇಟರ್ ಎದುರಾಳಿ
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ