ರಾಯಪುರದಲ್ಲಿ ಕಾಂಗ್ರೆಸ್ “ಅಮರ ಜವಾನ್ ಜ್ಯೋತಿ’: ಭೂಪೇಶ್ ಬಘೇಲ್
Team Udayavani, Jan 30, 2022, 9:30 PM IST
ರಾಯಪುರ: ಕೇಂದ್ರ ಸರ್ಕಾರವು ನವದೆಹಲಿಯಲ್ಲಿರುವ ಅಮರ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಿದ ಬೆನ್ನಲ್ಲೇ ಚತ್ತೀಸ್ಗಢದ ಕಾಂಗ್ರೆಸ್ ಸರ್ಕಾರ, ರಾಜ್ಯ ರಾಜಧಾನಿ ರಾಯು³ರದಲ್ಲಿ “ಅಮರ ಜವಾನ್ ಜ್ಯೋತಿ’ ನಿರ್ಮಿಸುವುದಾಗಿ ಘೋಷಿಸಿದೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್, “ಜ್ಯೋತಿಯನ್ನು ವಿಲೀನಗೊಳಿಸುವ ಮೂಲಕ ಕೇಂದ್ರ ಸರ್ಕಾರ ಜನರ ಭಾವನೆಗಳೊಂದಿಗೆ ಆಟವಾಡಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು
ಹಾಗಾಗಿ ನಾವು ರಾಯಪುರದಲ್ಲಿ ಯುದ್ಧ ಸ್ಮಾರಕವೊಂದನ್ನು ನಿರ್ಮಿಸಲಿದ್ದೇವೆ. ಅಲ್ಲಿಯೇ ಅಮರ ಜವಾನ್ ಜ್ಯೋತಿ ಬೆಳಗಿಸಲಿದ್ದೇವೆ. ಫೆ.3ರಂದು ಅದರ ಕೆಲಸಕ್ಕೆ ರಾಹುಲ್ ಗಾಂಧಿಯವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ’ ಎಂದು ಹೇಳಿದ್ದಾರೆ.