ಅಂಗವಿಕಲರ ಬಸ್ ಪಾಸ್ ನಿಯಮ ಸರಳೀಕರಿಸಿ
Team Udayavani, Feb 5, 2022, 12:33 PM IST
ಚಿತ್ತಾಪುರ: ಅಂಗವಿಕಲರ ಬಸ್ ಪಾಸ್ ನವೀಕರಣ ವೇಳೆ ಹಳೆ ಪಾಸ್ ಪಡೆದು ಹೊಸ ಪಾಸ್ ನೀಡುವಂತೆ ನಿಯಮ ಸರಳೀಕರಣ ಮಾಡಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ಧೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಅಶ್ವತ್ಥ್ ನಾರಾಯಣ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂಗವಿಕಲರು ವಾಸ ಮಾಡುವ ಸ್ಥಳದಿಂದ 100 ಕಿ.ಮೀ ವರೆಗೆ ಉಚಿತವಾಗಿ ಬಸ್ನಲ್ಲಿ ಸಂಚರಿಸಲು ಪ್ರತಿವರ್ಷ ಜನವರಿಯಲ್ಲಿ ಬಸ್ ಪಾಸ್ ನೀಡುತ್ತದೆ. ಡಿಸೆಂಬರ್ನಲ್ಲಿ ಪಾಸ್ ಕೊನೆಗೊಳ್ಳುತ್ತದೆ. ಆದರೆ ಇದುವರೆಗೆ ಕೇವಲ ಶೇ.10ರಷ್ಟು ಅಂಗವಿಕಲರಿಗೆ ಮಾತ್ರ ಬಸ್ ಪಾಸ್ ನೀಡಲಾಗಿದೆ. ಅನೇಕ ಅಂಗವಿಕಲರು ಬಸ್ ಪಾಸ್ಗಾಗಿ ಅಲೆದಾಡುತ್ತಿದ್ದಾರೆ ಎಂದರು.
ಹಳೆ ಪಾಸ್ ನೋಡಿ ನವೀಕರಣಗೊಳಿಸಿ ಹೊಸ ಪಾಸ್ ನೀಡುವ ವ್ಯವಸ್ಥೆಯಿದೆ. ಅಂಗವಿಕಲರು ಆರೋಗ್ಯ ಇಲಾಖೆ ವೈದ್ಯರು ತಪಾಸಣೆ ಮಾಡಿ, ನೀಡಿರುವ ಗುರುತಿನ ಚೀಟಿ ನೋಡಿ ಬಸ್ ಪಾಸ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅರ್ಜಿ ಸಲ್ಲಿಸಲು ಯುಡಿಐಡಿ ಗುರುತಿನ ಚೀಟಿ ಕಡ್ಡಾಯವೆಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಿಕಲರು ಅರ್ಜಿ ಸಲ್ಲಿಸಲು ಬಸ್ ನಿಲ್ದಾಣವಿರುವ ನಗರ, ಪಟ್ಟಣಗಳಿಗೆ ಅಲೆದಾಡಲು ಹಣದ ಖರ್ಚಿನ ಜತೆಗೆ ಮಾನಸಿಕ ಹಿಂಸೆಯಾಗುತ್ತಿದೆ. ಆದ್ದರಿಂದ ನಿಯಮ ಸರಳೀಕರಣಗೊಳಿಸಿ ಅಂಗವಿಕಲರಿಗೆ ಕೂಡಲೇ ಬಸ್ ಪಾಸ್ ನೀಡಬೇಕು. ಪಾಸ್ ನೀಡುವ ಸಮಯ ಮಾರ್ಚ್ ತಿಂಗಳ ಕೊನೆ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹೇಶ ಜಾಯಿ, ಭಾಗಣ್ಣ ಧನಶೆಟ್ಟಿ, ಶರಬಣ್ಣ ಸನ್ನತಿ, ನಾಗಪ್ಪ ಅಳ್ಳೋಳ್ಳಿ, ಮಲ್ಲೇಶಿ ಹುಂಡೇಕಾರ, ಸಾಬಣ್ಣ ದೊಡ್ಮನಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ