ನಾಗಪುರವನ್ನು ಹಾವಿನಪುರ ಎಂದ ಹರಿಪ್ರಸಾದ್ : ಪರಿಷತ್ತಿನಲ್ಲಿ ಗದ್ದಲ
Team Udayavani, Feb 16, 2022, 12:43 PM IST
ಬೆಂಗಳೂರು : ತಾಯಿ ಎದೆ ಹಾಲು ಕುಡಿದಿದ್ದರೆ ಐವತ್ತು ವರ್ಷಗಳ ಕಾಲ ಹಾವಿನಪುರದಲ್ಲಿ ಬಿಜೆಪಿಯವರು ಏಕೆ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿರುವುದು ಪರಿಷತ್ ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ.
ನಾಗಪುರವನ್ನು ಹಾವಿನಪುರ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದು ಬಿಜೆಪಿ ಶಾಸಕರನ್ನು ಕೆರಳಿಸಿತು. ಉಭಯ ಪಕ್ಷದ ಸದಸ್ಯರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದರು.
ಇದರಿಂದ ಸಿಟ್ಟಿಗೆದ್ದ ಸಭಾಪತಿ ಹೊರಟ್ಟಿ ಸಭಾಪತಿ ಪೀಠಕ್ಕೆ ಕಿಮ್ಮತ್ತಿಲ್ಲವೇ ? ಇದೇನು ಮುನ್ಸಿಪಾಲಿಟಿನಾ ಎಂದು ಪ್ರಶ್ನಿಸಿದರು.
ಆದರೆ ಹರಿಪ್ರಸಾದ್ ಪದೇ ಪದೇ ಬಿಜೆಪಿಯವರನ್ನು ಕೆರಳಿಸುತ್ತಿರುವುದನ್ನು ಮುಂದುವರಿಸಿದರು.ತಾಯಿ ಎದೆ ಹಾಲು ಕುಡಿದಿದ್ದರೆ ಯಾಕೆ ೫೦ ವರ್ಷ ಹಾವಿನಪುರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದರು.
ಇದಕ್ಕೆ ಮತ್ತೆ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಹರಿಪ್ರಸಾದ್ ವಿರುದ್ಧ ಆರೋಪ ನಡೆಸಿದರು.ನಾಗಪುರವನ್ನ ಅವಹೇಳನಕಾರಿಯಾಗಿ ಹಾವಿನಪುರ ಅಂತಾ ಹೇಳಿದ್ದಾರೆ.ಇದು ಸರಿಯಲ್ಲ ಎಂದ ಕೋಟಾ ಶ್ರೀನಿವಾಸ್ ಪೂಜಾರಿ ಎಂದಾಗ ಉತ್ತರಿಸಿದ ಪ್ರಕಾಶ್ ರಾಥೋಡ್, ನಮ್ಮ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ಕನ್ನಡ ಅಭಿಮಾನಿ.ಅವರು ನಾಗಪುರವನ್ನ ಕನ್ನಡದಲ್ಲಿ ಹಾವಿನಪುರ ಎಂದಿದ್ದಾರೆ. ತಪ್ಪೇನಿದೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ
CM ವಿರುದ್ಧ ನಕಲಿ ಪೋಸ್ಟ್: ವಿಕ್ರಮ್ ಹೆಗ್ಡೆ, ಗಿಳಿಯಾರ್ ಬಂಧನಕ್ಕೆ ತಾತ್ಕಾಲಿಕ ತಡೆ
Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್
MUST WATCH
ಹೊಸ ಸೇರ್ಪಡೆ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್