ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಬಂಗಾರ ದಾನ
ಗರ್ಭಗುಡಿಯ ಒಳ ಗೋಡೆಗೆ ಚಿನ್ನದ ಲೇಪನ ಮಾಡಿರುವುದು ಗಮನ ಸೆಳೆಯುವಂತಿತ್ತು ಎಂದು ವರದಿ ತಿಳಿಸಿದೆ.
Team Udayavani, Mar 1, 2022, 2:55 PM IST
ನವದೆಹಲಿ: ಅನಾಮಧೇಯ ದಾನಿಯೊಬ್ಬರು ಕಾಶಿ ವಿಶ್ವನಾಥ ದೇವಸ್ಥಾನ(ಕೆವಿಟಿ)ಕ್ಕೆ ಬರೋಬ್ಬರಿ 60 ಕೆಜಿ ಚಿನ್ನವನ್ನು ದಾನವಾಗಿ ನೀಡಿದ್ದು, ಇದರಲ್ಲಿ 37 ಕೆಜಿ ಬಂಗಾರವನ್ನು ದೇವಾಲಯದ ಗರ್ಭಗುಡಿಯ ಒಳ ಗೋಡೆಗಳಿಗೆ ಬಳಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನು ಘೋಷಿಸಲು ಆರ್ಸಿಬಿ ಯಾಕೆ ವಿಳಂಬ ಮಾಡುತ್ತಿದೆ?
ಭಕ್ತರು ದೇವಾಲಯವನ್ನು ಪ್ರವೇಶಿಸಿದಾಗ ಝೋರೊಖಾ ದರ್ಶನ್ (ಹೊರಗಿನ ಬಾಗಿಲಿನಿಂದ ದರ್ಶನ ಪಡೆಯುವುದು) ಪಡೆಯುವ ವೇಳೆ ಭಕ್ತರಿಗೆ ಚಿನ್ನದ ಲೇಪನದ ಗೋಡೆಗಳನ್ನು ನೋಡಬಹುದಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ದೃಶ್ಯವನ್ನು ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಮಂಡಳಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಗರ್ಭಗುಡಿಯ ಒಳ ಗೋಡೆಗೆ ಚಿನ್ನದ ಲೇಪನ ಮಾಡಿರುವುದು ಗಮನ ಸೆಳೆಯುವಂತಿತ್ತು ಎಂದು ವರದಿ ತಿಳಿಸಿದೆ.
ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ದಾನಿಯೊಬ್ಬರು 60ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಡಿವಿಷನಲ್ ಕಮಿಷನರ್ ದೀಪಕ್ ಅಗರ್ವಾಲ್ ತಿಳಿಸಿದ್ದಾರೆ. ಸುಮಾರು 37 ಕೆಜಿ ಚಿನ್ನವನ್ನು ಗರ್ಭಗುಡಿಯ ಒಳಗೋಡೆಗೆ ಬಳಸಿಕೊಳ್ಳಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯ ಗರ್ಭಗುಡಿಯ ಕೆಳಭಾಗದ ಗುಮ್ಮಟಕ್ಕೆ ಬಳಸಲಾಗುವುದು ಎಂದು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 13ರಂದು ಕಾಶಿ ವಿಶ್ವನಾಥ್ ಧಾಮ್ ಅನ್ನು ಔಪಚಾರಿಕವಾಗಿ ತೆರೆಯುವ ಒಂದು ತಿಂಗಳ ಮೊದಲು ಈ ದಾನಿ ದೇವಾಲಯದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. 60 ಕೆಜಿ ಚಿನ್ನ ದೇಣಿಗೆಯಾಗಿ ನೀಡಲಿದ್ದು, ತನ್ನ ಹೆಸರನ್ನು ಬಹಿರಂಗಪಡಿಸಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ