ಇಂದಿನಿಂದ ಮಾ. 29ರವರೆಗೆ ರೈಲು ಸಂಚಾರ ವ್ಯತ್ಯಯ
Team Udayavani, Mar 23, 2022, 7:35 AM IST
ಬೆಂಗಳೂರು: ಸಾಮರ್ಥ್ಯ ಮತ್ತು ಸುರಕ್ಷಿತೆಯನ್ನು ಸುಧಾರಿಸಲು ಹಾಗೂ ರೈಲ್ವೇ ಮೂಲಸೌಕರ್ಯ ವೃದ್ಧಿ ಹಿನ್ನೆಲೆ ಕೆಲವು ಮಾರ್ಗಗಳಲ್ಲಿ ದ್ವಿಪಥ ಹಾಗೂ ವಿದ್ಯುದೀಕರಣಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು ಮುಂದಿನ ಎಂಟು ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಸೌಕರ್ಯ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ|ಅನೂಪ್ ದಯಾನಂದ್ ಸಾಧು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಿಂದ 29ರವರೆಗೆ ಯಲಹಂಕದ ಹಿಂದೂಪುರ-ಪೆನುಕೊಂಡ, ಹೊಸದುರ್ಗ-ಚಿಕ್ಕಜಾಜೂರು, ಅಳ್ನಾವರ-ಅಂಬೆವಾಡಿ, ಯಲವಿಗಿ -ಸವಣೂರು, ಸವಣೂರು-ಹಾವೇರಿ, ಗದಗ- ಹೊಳೆಆಲೂರು, ಸೌಂಶಿ-ಯಲವಿಗಿ, ಕುಡಚಿ-ಘಟಪ್ರಭಾ, ಲೋಂಡಾ-ತಿನೈಘಾಟ್ ಮಾರ್ಗದ ರೈಲು ಹಳಿಗಳಲ್ಲಿ ಕೆಲವು ಕಡೆ ದ್ವಿಪಥ ಮಾರ್ಗ ಹಾಗೂ ಇನ್ನೂ ಕೆಲವು ಕಡೆ ವಿದ್ಯುದೀಕರಣಗೊಳಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಹತ್ತು ರೈಲುಗಳನ್ನು ರದ್ದುಗೊಳಿಸಲಾಗಿದ್ದು, 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ವಾಪಾಸು ನೀಡಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ
CM ವಿರುದ್ಧ ನಕಲಿ ಪೋಸ್ಟ್: ವಿಕ್ರಮ್ ಹೆಗ್ಡೆ, ಗಿಳಿಯಾರ್ ಬಂಧನಕ್ಕೆ ತಾತ್ಕಾಲಿಕ ತಡೆ
Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್