ಐಪಿಎಲ್‌ 2022: ಬೆಂಗಳೂರು ವಿರುದ್ಧ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ಗಳ ಭರ್ಜರಿ ಗೆಲುವು


Team Udayavani, Mar 27, 2022, 11:28 PM IST

ಪಂಜಾಬ್‌ “ಕಿಂಗ್ಸ್‌’; ಶಿಖರ್‌, ರಾಜಪಕ್ಸ, ಸ್ಮಿತ್‌ ಬ್ಯಾಟಿಂಗ್‌ ಆರ್ಭಟ

ಮುಂಬಯಿ: ಆರಂಭಿಕರ ಉತ್ತಮ ಆಟ ಮತ್ತು ಕೊನೆ ಹಂತದಲ್ಲಿ ಒಡೀನ್‌ ಸ್ಮಿತ್‌ ಸಿಡಿಸಿದ ಸ್ಫೋಟಕ ಆಟದಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

ಕೊನೆ ಹಂತದಲ್ಲಿ ಶಾರುಖ್‌ ಖಾನ್‌ ಮತ್ತು ಸ್ಮಿತ್‌ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಪಂಜಾಬ್‌ ತಂಡವು 19 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್‌ ಪೇರಿಸಿ ವಿಜಯಿಯಾಯಿತು. ಈ ಮೊದಲು ಆರ್‌ಸಿಬಿ 20 ಓವರ್‌ಗಳಲ್ಲಿ 2 ವಿಕೆಟಿಗೆ 205 ರನ್‌ ಗಳಿಸಿತ್ತು.

ಶಾರುಖ್‌ ಮತ್ತು ಸ್ಮಿತ್‌ ಮುರಿಯದ ಆರನೇ ವಿಕೆಟಿಗೆ 52 ರನ್‌ ಪೇರಿಸಿ ತಂಡದ ಗೆಲುವನ್ನು ಸಾರಿದರು. ಸಿರಾಜ್‌ ಎಸೆದ 18ನೇ ಓವರಿನಲ್ಲಿ ಅವರಿಬ್ಬರು ಮೂರು ಸಿಕ್ಸರ್‌ ಸಿಡಿಸಿದ್ದರು. ಸ್ಮಿತ್‌ ಕೇವಲ 8 ಎಸೆತಗಳಿಂದ 1 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 25 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಗೆಲ್ಲಲು 206 ರನ್‌ ಗಳಿಸುವ ಗುರಿ ಪಡೆದ ಪಂಜಾಬ್‌ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಶಿಖರ್‌ ಧವನ್‌ ಮತ್ತು ಮಯಾಂಕ್‌ ಅಗರ್ವಾಲ್‌ ಮೊದಲ ವಿಕೆಟಿಗೆ 71 ರನ್‌ ಪೇರಿಸಿ ಬೇರ್ಪಟ್ಟರು. ಸರಾಸರಿ ಓವರೊಂದಕ್ಕೆ 10ರಂತೆ ರನ್‌ ತೆಗೆದ ಅವರಿಬ್ಬರು ಉತ್ತಮ ಅಡಿಪಾಯ ಹಾಕಿಕೊಟ್ಟರು. 7.1 ಓವರ್‌ಗಳಲ್ಲಿ 71 ರನ್‌ ತಲುಪಿದಾಗ ತಂಡ ಅಗರ್ವಾಲ್‌ ಅವರನ್ನು ಕಳೆದುಕೊಂಡಿತು. ಆಬಳಿಕ ಧವನ್‌ ಅವರನ್ನು ಸೇರಿಕೊಂಡ ಭಾನುಕ ರಾಜಪಕ್ಷ ಬಿರುಸಿನ ಆಟವಾಡಿ ತಂಡದ ಒತ್ತಡವನ್ನು ಕಡಿಮೆ ಮಾಡಿದರು.

ಮೊಹಮ್ಮದ್‌ ಸಿರಾಜ್‌ ದುಬಾರಿ
ಈ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ದುಬಾರಿ ಆಗಿರುವುದು ಆರ್‌ಸಿಬಿ ಸೋಲಿಗೆ ಕಾರಣವೆನ್ನಬಹುದು. ತನ್ನ 4 ಓವರ್‌ಗಳ ದಾಳಿಯಲ್ಲಿ ಅವರು 14 ವೈಡ್‌ ಸೇರಿದಂತೆ 59 ರನ್‌ ಬಿಟ್ಟುಕೊಟ್ಟಿದ್ದರು. ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಪಡೆದಿದ್ದರೂ ಅವರ ಬೌಲಿಂಗ್‌ ತೀಕ್ಷ್ಣವಾಗಿರಲಿಲ್ಲ. ಸಿರಾಜ್‌ ತನ್ನ ನಾಲ್ಕನೇ ಓವರಿನಲ್ಲಿ ಮೂರು ಸಿಕ್ಸರ್‌ ಸಹಿತ 25 ರನ್‌ ನೀಡಿದ್ದರು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ಫಾ ಡು ಪ್ಲೆಸಿಸ್‌ ಶಾರೂಖ್‌ ಬಿ ಆರ್ಷದೀಪ್‌ 88
ಅನುಜ್‌ ರಾವತ್‌ ಬಿ ರಾಹುಲ್‌ 21
ವಿರಾಟ್‌ ಕೊಹ್ಲಿ ಔಟಾಗದೆ 41
ದಿನೇಶ್‌ ಕಾರ್ತಿಕ್‌ ಔಟಾಗದೆ 32
ಇತರ 23
ಒಟ್ಟು (2 ವಿಕೆಟಿಗೆ) 205
ವಿಕೆಟ್‌ ಪತನ: 1-50, 2-168.
ಬೌಲಿಂಗ್‌: ಸಂದೀಪ್‌ ಶರ್ಮ 4-0-37-0
ಆರ್ಷದೀಪ್‌ ಸಿಂಗ್‌ 4-0-31-1
ಒಡೀನ್‌ ಸ್ಮಿತ್‌ 4-0-52-0
ರಾಹುಲ್‌ ಚಹರ್‌ 4-0-22-1
ಹರ್‌ಪ್ರೀತ್‌ ಬ್ರಾರ್‌ 3-0-38-0
ಲಿಯಮ್‌ ಲಿವಿಂಗ್‌ಸ್ಟೋನ್‌ 1-0-14-0

ಪಂಜಾಬ್‌ ಕಿಂಗ್ಸ್‌
ಮಯಾಂಗ್‌ ಅಗರ್ವಾಲ್‌ ಸಿ ಶಾಬಾಜ್‌ ಬಿ ಹಸರಂಗ 32
ಶಿಖರ್‌ ಧವನ್‌ ಸಿ ರಾವತ್‌ ಬಿ ಪಟೇಲ್‌ 43
ಭಾನುಕ ರಾಜಪಕ್ಷ ಸಿ ಶಾಬಾಜ್‌ ಬಿ ಸಿರಾಜ್‌ 43
ಲಿಯಮ್‌ ಲಿವಿಂಗ್‌ಸ್ಟೋನ್‌ ಸಿ ರಾವತ್‌ ಬಿ ಆಕಾಶ್‌ದೀಪ್‌ 19
ರಾಜ್‌ ಬಾವ ಎಲ್‌ಬಿಡಬ್ಲ್ಯು ಬಿ ಸಿರಾಜ್‌ 0
ಶಾರುಖ್‌ ಖಾನ್‌ ಔಟಾಗದೆ 24
ಒಡೀನ್‌ ಸ್ಮಿತ್‌ ಔಟಾಗದೆ 25
ಇತರ 22
ಒಟ್ಟು (19 ಓವರ್‌ಗಳಲ್ಲಿ 5 ವಿಕೆಟಿಗೆ) 208
ವಿಕೆಟ್‌ ಪತನ: 1-71, 2-118, 3-139, 4-139, 5-156
ಬೌಲಿಂಗ್‌: ಡೇವಿಡ್‌ ವಿಲ್ಲೆ 3-0-28-0
ಮೊಹಮ್ಮದ್‌ ಸಿರಾಜ್‌ 4-0-59-2
ಶಾಬಾಜ್‌ ಅಹ್ಮದ್‌ 1-0-6-0
ಆಕಾಶ್‌ದೀಪ್‌ 3-0-38-1
ವನಿಂದು ಹಸರಂಗ 4-0-40-1
ಹರ್ಷಲ್‌ ಪಟೇಲ್‌ 4-0-36-1

ಪಂದ್ಯಶ್ರೇಷ್ಠ: ಒಡೀನ್‌ ಸ್ಮಿತ್‌

ಟಾಪ್ ನ್ಯೂಸ್

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.