ಕಾಲಕ್ಕೆ ತಕ್ಕಂತೆ ಸಾಹಿತಿಗಳ ಆಸಕ್ತಿಯೂ ಬದಲು

21ನೇ ಶತಮಾನದ ಸಾಹಿತಿಗಳಲ್ಲಿ ಬದ್ಧತೆ ಕೊರತೆ

Team Udayavani, Mar 28, 2022, 10:03 AM IST

1

ಧಾರವಾಡ: ಈಗಿನ ಕಾಲಮಾನಕ್ಕೆ ತಕ್ಕಂತೆ ಸಾಹಿತಿಗಳ ಆಸಕ್ತಿಯೂ ಬದಲಾಗುತ್ತಾ ಸಾಗಿದ್ದು, 21ನೇ ಶತಮಾನದ ಸಾಹಿತಿಗಳಲ್ಲಿ ಬದ್ಧತೆಯ ಕೊರತೆ ಕಾಣುವಂತಾಗಿದೆ ಎಂದು ಸಮ್ಮೇಳನಾಧ್ಯಕ್ಷ ಡಾ| ರಮಾಕಾಂತ ಜೋಶಿ ಹೇಳಿದರು.

ಕಸಾಪ ಸಾಹಿತ್ಯ ಭವನದ ಆವರಣದಲ್ಲಿ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಸಾಹಿತಿಗಳಲ್ಲಿ ಇದ್ದ ಆಸಕ್ತಿ ಈಗಿಲ್ಲ. ಆಗ ಹಣಕ್ಕಾಗಿ ಎಂದಿಗೂ ಸಾಹಿತ್ಯ ಬರೆಯಲಿಲ್ಲ. ಆದರೆ ಈಗ ದುಡ್ಡಿಗಾಗಿಯೇ ಸಾಹಿತ್ಯ ಬರೆಯುವ ಸ್ಥಿತಿಯಿದ್ದು, ಹಣಕ್ಕಾಗಿ ಸಾಹಿತ್ಯ ಬರೆಯುವಂತಾಗಿದೆ. ಬರೆದ ಸಾಹಿತ್ಯಕ್ಕೆ ಎಷ್ಟು ಹಣ ಕೊಡುತೀರಾ? ಎಂಬ ಪ್ರಶ್ನೆಯೇ ಎದುರಾಗಿದ್ದು, ಹೀಗಾಗಿ ಬದ್ಧತೆಯ ಕೊರತೆ ಎದ್ದು ಕಾಣುವಂತಾಗಿದೆ. ಸರ್ವರ ಹಿತ ಕಾಪಾಡುವವನೇ ಸಾಹಿತಿ ಹೊರತು ಸ್ವಹಿತ ಕಾಪಾಡುವವನಲ್ಲ ಎಂದರು.

ಈಗಿನ ಯುವ ಪೀಳಿಗೆಗೆ ಸಂದೇಶ ಕೊಡುವಷ್ಟು ದೊಡ್ಡವ ನಾನಲ್ಲ. ಒಂದು ವೇಳೆ ಸಂದೇಶ ನೀಡಿದರೂ ಆ ಸಂದೇಶ ಕೇಳುವ ಮನಸ್ಥಿತಿಯಲ್ಲಿ ಯುವ ಪೀಳಿಗೆಯಿಲ್ಲ. ಹೀಗಿರುವಾಗ ಅನುಕರಣೆ, ಸಂದೇಶಗಳ ಆಲಿಸುವತ್ತ ಯುವ ಪೀಳಿಗೆ ಮುಂದಾಗುವ ಬದಲು ತಾವೇ ಆತ್ಮ ಸಾಕ್ಷಾತ್ಕಾರ ಮಾಡುವುದು ಒಳಿತು. ಈ ಆತ್ಮ ಸಾಕ್ಷಾತ್ಕಾರದಿಂದ ಯುವ ಪೀಳಿಗೆ ಏಳ್ಗೆ ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಬರೀ ಪ್ರಕಾಶನದಿಂದ ಹೊಟ್ಟೆ ತುಂಬುವುದಿಲ್ಲ, ಲಗ್ನವೂ ಆಗಲ್ಲ ಎಂಬ ಹಿರಿಯರ ಮಾತಿಗಾಗಿ ನಾನೂ ಪದವಿ ಪಡೆದೆ. ಆ ಬಳಿಕ ತಂದೆ ಜಿ.ಬಿ. ಜೋಶಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿಗೂ ಈ ಪ್ರಕಾಶನ ಕಾಯಕ ಮುಂದುವರಿಸಿದ್ದೇನೆ. ಈ ಪ್ರಕಾಶನ ಹವ್ಯಾಸವಲ್ಲ. ಬದಲಾಗಿ ವ್ಯವಸಾಯ ಎಂದು ನಂಬಿದ್ದೇನೆ. ನನಗೀಗ 86 ವರ್ಷ, ಆದರೆ ಮನೋಹರ ಗ್ರಂಥಮಾಲೆಗೆ 90 ವರ್ಷವಾಗಿದ್ದು, ಶತಮಾನ ಕಾಣಲಿದೆ. ಮಗ ಸಮೀರ ಕೂಡ ನನಗಿಂತ ಸಮರ್ಥವಾಗಿ ಮುಂದುವರಿಸಿಕೊಂಡು ಹೊರಟಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಕಾಶನ ನಿಲ್ಲಿಸುವ ಬಗ್ಗೆ ಅಥವಾ ಪ್ರಕಾಶನದಿಂದ ಮನೆಯಲ್ಲಿ ಕಿರಿಕಿರಿಯಿಂದ ಉಂಟಾದ ಅನುಭವ ಇದೆಯೇ? ಎಂಬ ಹ.ವೆಂ. ಕಾಖಂಡಕಿ ಪ್ರಶ್ನೆಗೆ ಉತ್ತರಿಸಿದ ಸಮ್ಮೇಳನಾಧ್ಯಕ್ಷರು, ಅಪ್ಪ ಜಿ.ಬಿ. ಜೋಶಿ ಮತ್ತು ನನ್ನ ಮಧ್ಯೆ ಸಣ್ಣಪುಟ್ಟ ಜಗಳ ಇತ್ತೇ ವಿನಃ ಪ್ರಕಾಶನ ನಿಲ್ಲಿಸುವ ವಿಚಾರ ಎಂದಿಗೂ ತಲೆಯಲ್ಲಿ ಸುಳಿಯಲೇ ಇಲ್ಲ ಎಂದರು.

ಸಂವಾದದಲ್ಲಿ ಡಾ| ವಿ.ಟಿ. ನಾಯಕ, ಡಾ| ಶಶಿಧರ ನರೇಂದ್ರ, ಡಾ| ಪ್ರಕಾಶ ಗರುಡ, ಡಾ| ಶಂಭು ಹೆಗಡಾಳ, ಡಾ| ಕೃಷ್ಣ ಕಟ್ಟಿ, ರಾಜಶೇಖರ ಮಾಳವಾಡ, ಡಾ| ಪ್ರಭು ಸಂಕನಗೌಡಸಾನೆ, ಬಸವರಾಜ ಕರಿಮಲ್ಲಣ್ಣವರ, ಮಂಜುನಾಥ ತಿರ್ಲಾಪುರ ಸೇರಿದಂತೆ ಹಲವರು ಇದ್ದರು.

ಪುರುಷರ ಕವಿಗೋಷ್ಠಿ: ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ಹೊಸದಾಗಿ ಪರಿಚಯಿಸಿದ್ದ ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆಯ ಪುರುಷರ ಕವಿಗೋಷ್ಠಿಯಲ್ಲಿ ಯುವ-ಹಿರಿಯ ಕವಿಗಳು ತಮ್ಮ ಕವಿತೆ ವಾಚಿಸಿದರು. ಶ್ರೀಧರ ಪಿಸೆ, ಬಿ.ಕೆ. ಹೊಂಗಲ್‌, ಶೇಖರ ಹಾದಿಮನಿ, ಎಚ್‌.ಬಿ. ಪೂಜಾರ ಸೇರಿದಂತೆ ಹಲವರು ತಮ್ಮ ಕವಿತೆ ವಾಚಿಸಿದರು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ| ಬಸು ಬೇವಿನಗಿಡದ ಆಶಯ ನುಡಿಗಳನ್ನಾಡಿದರು

ಧಾರವಾಡ ಮಣ್ಣಿನಲ್ಲಿ ಶ್ರೇಷ್ಠತೆ, ವಿಶಿಷ್ಟತೆ ಇದೆ. ಈ ಕಾರಣದಿಂದಲೇ ಸಾಹಿತಿಗಳು-ಸಾಹಿತ್ಯಾಸಕ್ತರನ್ನು ಈ ಮಣ್ಣು ಸದಾ ಸಳೆಯುತ್ತಲೇ ಬಂದಿದೆ. ಅದಕ್ಕಾಗಿ ಎಲ್ಲೋ ಇದ್ದವರು ಇಲ್ಲಿ ಬಂದು ನೆಲೆಸಿದ್ದು, ಈ ಮಣ್ಣಿನ ಶಕ್ತಿಯಿಂದ ಸಾಧನೆ ಮಾಡಿದವರು ಸಾಕಷ್ಟು. ಈ ಮಣ್ಣಿನ ಈ ಅದ್ಬುತ ಶಕ್ತಿ ಮಹಿಮೆಯಿಂದಲೇ ಸಾಹಿತ್ಯ, ಸಂಗೀತ, ಕಲೆಗಳಿಂದ ಧಾರವಾಡ ವಿಶ್ವದಲ್ಲೇ ಗಮನ ಸೆಳೆದಿದೆ. ಅದರಲ್ಲೂ ಧಾರವಾಡಿಗರು ರಸಿಕ ಹಾಗೂ ವಿಮರ್ಶಕ ಮನಸ್ಸುವುಳ್ಳವರು. ಹೀಗಾಗಿ ಧಾರವಾಡ ಜನರ ಮನಸ್ಸು ಗೆದ್ದವರು ದೇಶ, ವಿಶ್ವವನ್ನೇ ಗೆದ್ದಂತೆ ಎಂಬ ಹಿರಿಯರ ಮಾತು ಎಂದಿಗೂ ಸುಳ್ಳಲ್ಲ.

ಡಾ| ರಮಾಕಾಂತ ಜೋಶಿ

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.