ಅಪ್ಪಾಜಿ ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು: ಯತ್ನಾಳ್ ಟೀಕಾಸ್ತ್ರಕ್ಕೆ ಯಾರು ಗುರಿ?
ರಾಜಕೀಯ ಹದೆಗೆಟ್ಟು ಹೈದರಾಬಾದ್ ಆಗಿದೆ
Team Udayavani, Mar 30, 2022, 7:35 PM IST
ಬೆಂಗಳೂರು : ರಾಜಕೀಯದಲ್ಲಿ ಮಹತ್ವದ ಹುದ್ದೆ ಸಿಗಬೇಕಾದರೆ ನಾವು ಹೊಗಳು ಭಟರಾಗಬೇಕು.ಅಪ್ಪಾಜಿ ಅಪ್ಪಾಜಿ ಎಂದರಷ್ಟೇ ಸ್ಥಾನಮಾನ ಸಿಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಬುಧವಾರ ವಾಗ್ಬಾಣ ಎಸೆದಿದ್ದಾರೆ.
ಚುನಾವಣಾ ಸುಧಾರಣೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ” ಅಪ್ಪಾಜಿ, ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು ” ಎಂಬ ಶಬ್ದವನ್ನು ಒತ್ತಿ ಹೇಳಿದ್ದು ಯಾರನ್ನು ಉದ್ದೇಶಿಸಿ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.
ಈ ಪಕ್ಷವಾದರೂ ಒಂದೇ ಆ ಪಕ್ಷವಾದರೂ ಒಂದೆ ಒಟ್ಟಾರೆಯಾಗಿ ರಾಜಕೀಯ ಹದೆಗೆಟ್ಟು ಹೈದರಾಬಾದ್ ಆಗಿದೆ ಎಂದು ಅವರು ವ್ಯಂಗ್ಯವಾಡಿದಾಗ, ” ನೀವು ಯಾರಿಗೆ ಅಪ್ಪಾಜಿ ಎನ್ನುತ್ತಿದ್ದೀರಿ ? ” ಎಂದು ರಮೇಶ್ ಕುಮಾರ್ ಕಾಲೆಳೆದರು. ನಾನು ಜೀವನದಲ್ಲಿ ನನ್ನ ಅಪ್ಪನ ಬಿಟ್ಟರೆ ಬೇರೆ ಯಾರಿಗೂ ಅಪ್ಪಾಜಿ ಅಂದ ಮಗ ಅಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದರು.
ಪ್ರಜಾಪ್ರಭುತ್ವದ ಎಲ್ಲ ಅಂಗಗಳ ಬಗ್ಗೆಯೂ ನಾವು ಮಾತನಾಡಬೇಕಾಗುತ್ತದೆ. ರಾಜಾಹುಲಿ, ಮರಿಹುಲಿ ಇತ್ಯಾದಿ ಬಿರುದುಗಳನ್ನು ನೀಡಿ ಮಾಧ್ಯಮಗಳು ಪ್ರಕಟಿಸುವ ವರದಿಗಳತ್ತಲೂ ಅನುಮಾನದಿಂದ ನೋಡುವಂತಾಗಿದೆ. ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕು. ನಮ್ಮ ಪಕ್ಷದಲ್ಲಿರುವ ಮಾಜಿ ಮುಖ್ಯಮಂತ್ರಿಗಳನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸಿ ಕಾಗೇರಿಯವರನ್ನು ಮಂತ್ರಿ ಮಾಡಬೇಕು ಎಂದು ಹೇಳಿದಾಗ ಸದನ ನಗೆಗಡಲಲ್ಲಿ ಮುಳುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್