ಬೈಗುಳ ಹಬ್ಬದಲ್ಲಿ ಯುವಕರ ದಂಡು; ನಕ್ಕ ಮಾನಿನಿಯರು


Team Udayavani, Apr 11, 2022, 2:54 PM IST

Untitled-1

ಕಿಕ್ಕೇರಿ: ಮಡಿಕೇರಿಯ ಬುಂಡೆ ಹಬ್ಬದ ತದ್ರೂಪದಂತೆ ಬೈದಾಡುವ ಬೈಗುಳ ಹಬ್ಬವಾದ ಕಿಕ್ಕೇರಮ್ಮನ ವಸಂತನ ಹಬ್ಬಕ್ಕೆ ಎತ್ತ ನೋಡಿದರೂ ಜನವೋ ಜನ.

ಸತತವಾಗಿ 2ವರ್ಷದಿಂದ ಕೊರೊನಾ ಭರಾ ಟೆಯಿಂದ ನಡೆಯದ ವಸಂತನ ಹಬ್ಬ ಕಣ್ತುಂಬಿ ಕೊಳ್ಳಲು ಈ ಬಾರಿ ದಾರಿಯುದ್ಧಕ್ಕೂ ಜನವೋ ಜನ. ಯುವ ಜೋಡಿಗಳು ಹಬ್ಬದ ವಿಶೇಷತೆ ತಿಳಿದುಕೊಳ್ಳಲು ಕುತೂಹಲದಿಂದ ಕಾದಿದ್ದರು.

ಕಿಕ್ಕೇರಮ್ಮ ಗುಡಿಯಿಂದ ಆರಂಭವಾದ ವಸಂತನ ಹಬ್ಬಕ್ಕೆ ರಂಗೇನಹಳ್ಳಿಯ ಕೊಂತಪ್ಪ ಗುಡ್ಡಧಾರಿ ಹಾಗೂ ಪರಿವಾರದವರೇ ಪ್ರಮುಖ ಪಾತ್ರ ವಹಿಸಿದ್ದರು. ಕೊಂತದಾರಿ ಗುಡ್ಡಪ್ಪ ತಲೆಗೆ ರಂಗಿನ ಪೇಟ, ಹೊದೆಯಲು ಸುಂದರ ಶಾಲು, ಕಾಲಿಗೆ ಗೆಜ್ಜೆ ಕಟ್ಟಿ ಮರದಲ್ಲಿ ಮಾಡಿದ ಪುರುಷ ಗುಪ್ತಾಂಗವನ್ನು ದೇವಿ ಮುಂದೆ ಪೂಜೆ ಮಾಡಿ ಸೊಂಟಕ್ಕೆ ಕಟ್ಟಿಕೊಂಡರು. ಸಹ ಗುಡ್ಡಪ್ಪರು ಗುಡ್ಡಪ್ಪನ ಕುಣಿತಕ್ಕೆ ಚಕ್ರವಾದ್ಯ ಮೇಳವಾದರು. ಆರಂಭದಲ್ಲಿ ದೇವಿ ಗುಡಿ ಮುಂದೆ ಕೊಂತಪ್ಪ ಗುಡ್ಡಪ್ಪ ಕುಣಿಯುತ್ತ “ಡುಮ್ಮಿ ಸಾಲಿರೆನ್ನಿರೇ’ ಎಂದು ಕೊಂತಪ್ಪನನ್ನು ತೋರಿಸಿ ಎಗರಿ ಕುಣಿದರು.

ಇದೇ ರೀತಿ ದೇವಿ ಮೆರವಣಿಗೆ ಮುಂದೆ ಸಾಗುತ್ತ ಹೊಸಬೀದಿ, ಅಂಗಡಿಬೀದಿ, ಕೋಟೆ ಆಂಜನೇಯ ಬೀದಿಗಳಲ್ಲಿ ನರ್ತಿಸಿದರು. ಅಂತಿಮವಾಗಿ ಮೆರವಣಿಗೆ ಪಟ್ಟಣದ ದೊಡ್ಡ ನರಸಿಂಹಸ್ವಾಮಿ ಗುಡಿ ಬಳಿ ಸಾಗಿತು. ಈ ಬೈಗುಳ ಹಬ್ಬದ ಕೊಂತಪ್ಪಧಾರಿಯನ್ನು ನೋಡಲು ಯುವಕರು ಗುಂಪು, ಮಹಿಳೆಯರ ಗುಂಪು ಗುಡಿ ಅಕ್ಕಪಕ್ಕದ ಮಹಡಿ ಮೇಲೆ ಜಮಾಯಿಸಿದ್ದರು.

ಕೊಂತಪ್ಪಧಾರಿಯನ್ನು ನೋಡಲು ಯುವಕರು ತಳ್ಳಾಟ ನಡೆಸಿದರೆ, ಮಹಿಳೆಯರು ವೀಕ್ಷಣೆ ಮಾಡಲು ಕದ್ದು ಮುಚ್ಚಿ ಇಣುಕು ನೋಟದ ಪ್ರಸಂಗ ನಡೆಯಿತು.

ಹಳೆಯ ಸಾಂಪ್ರದಾಯಿಕ ಪೂಜೆಯಂತೆ ದೇವರು, ಕಿಕ್ಕೇರಮ್ಮ(ಮಹಾಲಕ್ಷ್ಮೀ) ದೇವಿಯನ್ನು ನರಸಿಂಹ ಸ್ವಾಮಿಯೊಂದಿಗೆ ಸಮಾಗಮ ಮಾಡಿಸುವಂತೆ ವಿವಿಧ ಜನಾಂಗದವರ ಗುಪ್ತಾಂಗ ಹೋಲಿಕೆ ಮಾಡುತ್ತ ಬೈದಾಡಿದರು. ನೆರದಿದ್ದ ಸಮೂಹ ನಕ್ಕು ನಕ್ಕು ಹುಣ್ಣಾದರು. ಅಂತಿಮವಾಗಿ ಆರತಿ ಎತ್ತಿ ಗುಡಿ ಬಾಗಿಲು ತೆಗೆದು ಆರತಿ ಎತ್ತಿ ಬೈಗುಳಕ್ಕೆ ಇತಿಶ್ರೀ ಹಾಡಲಾಯಿತು. ನಂತರ ದೇವಿ ಉತ್ಸವ ಹರಕೆ ಹೊತ್ತು ರಸ್ತೆಯಲ್ಲಿ ಅಡ್ಡಲಾಗಿ ಮಲಗಿದ್ದ ಭಕ್ತರ ಮೇಲೆ ಸಾಗಿತು. ಮುಂದುವರೆದು ಜನಾರ್ಧನ ಬೀದಿಯ ಲಕ್ಷ್ಮೀದೇವಿ ಗುಡಿ, ಅಮಾನಿಕೆರೆಯ ಗಂಗೆ ಕಡೆಗೆ ಸಾಗಿತು. ಸೊಳ್ಳೇಪುರ ಗ್ರಾಮಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮೀಪುರ ಗ್ರಾಮಕ್ಕೆ ದೇವಿ ಮೆರವಣಿಗೆ ಸಾಗಿತು.  ಉಪವಾಸ ವ್ರತಾಚರಣೆಯಲ್ಲಿದ್ದ ಗ್ರಾಮದ ಪ್ರತಿ ಮನೆಯವರು ದೇವಿಗೆ ಆರತಿ ಎತ್ತಿ ಕೃತಾರ್ಥರಾದರು.

ಜನ ಕಾತರದಿಂದ ಕಾದಿದ್ದರು… : ರಂಗೇನಹಳ್ಳಿಯ ಗುಡ್ಡಪ್ಪ ಕಿಕ್ಕೇರಿಗೌಡ, ಚಿಕ್ಕೇಗೌಡ, ಅಪ್ಪಾಜಿಗೌಡ, ರಾಮೇಗೌಡ ಬೈಗುಳ ಹಬ್ಬದ ಪ್ರಮುಖಧಾರಿಗಳಾಗಿದ್ದರು. ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ಮುಖಂಡರು ಇದ್ದರು. ಬುಂಡೆ ಹಬ್ಬವನ್ನು ನಾಚಿಸುವ ಈ ಬೈಗುಳ ಹಬ್ಬ ಸತತ ಕೊರೊನಾದಿಂದ 2ವರ್ಷ ವೀಕ್ಷಿಸಲು ಸಾಧ್ಯವಾಗದೆ ಜನತೆ ಬಲು ಕಾತುರದಿಂದ ಇದ್ದರು. ಹಬ್ಬ ವೀಕ್ಷಿಸಲು ಹೆಣ್ಣು ಮಕ್ಕಳು, ನವಜೋಡಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

11-mandya

Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.