ಯಾವುದೇ ಹುದ್ದೆಗೆ ಅಂಟಿ ಕುಳಿತವನಲ್ಲ
ಪಕ್ಷಕ್ಕಾಗಿ ದುಡಿದವರನ್ನು ಜವಾಬ್ದಾರಿಯುತ ಹುದ್ದೆಯಲ್ಲಿ ನೋಡಲು ಬಯಸುವೆ: ಭೀಮಣ್ಣ ನಾಯ್ಕ
Team Udayavani, Apr 15, 2022, 3:31 PM IST
ಶಿರಸಿ: ನಾನು ಯಾವುದೇ ಹುದ್ದೆಗೆ ಅಂಟಿಕೊಂಡವನಲ್ಲ. ಪಕ್ಷದಲ್ಲಿ ಪ್ರಾಮಾಣಿಕರಾಗಿ ಕೆಲಸ ಮಾಡಿದವರನ್ನು ಜವಾಬ್ದಾರಿಯುತ ಹುದ್ದೆಗಳಲ್ಲಿ ನೋಡುವ ಮನಸ್ಥಿತಿಯವನು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರತಿಪಾದಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬದಲಾವಣೆ ಆಗಲಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅವರು ಗುರುವಾರ ‘ಉದಯವಾಣಿ’ ಜೊತೆ ತಮ್ಮ ಮನದಾಳದ ಮಾತು ಹಂಚಿಕೊಂಡರು.
ಪಕ್ಷದಲ್ಲಿ ಸಾಮಾಜಿಕ ನ್ಯಾಯ ನೋಡಿ ಹುದ್ದೆ ಕೊಡಬೇಕು. ಜಿಲ್ಲಾ ವರಿಷ್ಠರ, ಹಿರಿಯರ, ಪದಾಧಿ ಕಾರಿಗಳ ಜೊತೆ ಸಮಾಲೋಚಿಸಿ ಎಲ್ಲ ವರ್ಗದವರ ವಿಶ್ವಾಸ ಪಡೆದು ಕೆಲಸ ಮಾಡಬೇಕು. ಪಕ್ಷದಲ್ಲಿ ಕೆಲಸ ಮಾಡಿದ ಹಿರಿಯರಿಗೆ, ಸಕ್ರೀಯರಿಗೆ ಹುದ್ದೆ ನೀಡಬೇಕು ಎಂದೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.
ನನ್ನನ್ನೂ ಕೇಳದೇ ನನಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಇದರ ಬಗ್ಗೆ ಅಸಮಧಾನ ಇಲ್ಲ. ಆದರೆ, ಕೆಲಸ ಮಾಡಿದ ಬ್ರಾಹ್ಮಣ, ಮರಾಠ ವರ್ಗಕ್ಕೂ ನ್ಯಾಯ ಕೊಡಬೇಕಿತ್ತು. ಕೇವಲ ಒಂದೇ ಕಡೆ ನೀಡುವುದು ಸರಿಯಲ್ಲ ಎಂದರು.
ಭೀಮಣ್ಣ ಜನ ಸಾಮಾನ್ಯರ ಜೊತೆ ಬೆಳೆದವ. ಜಿಲ್ಲಾ ಪಂಚಾಯತದಲ್ಲೂ ಕೆಲಸ ಮಾಡಿದ್ದೇನೆ. ಪಕ್ಷದ ಹುದ್ದೆ ಇರಲಿ, ಬಿಡಲಿ ಸದಾ ಜನರ ಜೊತೆ ಕೆಲಸ ಮಾಡುವೆ. ನಾನು ಅಂಥ ಜಾಗದಲ್ಲಿ ಕುಳಿತು ಕೊಳ್ಳುವದಕ್ಕಿಂತ ಇನ್ನೊಬ್ಬನನ್ನು ಆ ಹುದ್ದೆಯಲ್ಲಿ ನೋಡುವ ಆಸೆ ಪಡುವೆ. ಸ್ವಾರ್ಥದ ರಾಜಕಾರಣಿ ನಾನಲ್ಲ ಎಂದರು.
ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕೊಡುವಂತಿದ್ದರೆ ಎಲ್ಲರೂ ಕೈ ಜೋಡಿಸುತ್ತಾರೆ. ಜಿಲ್ಲೆಯಲ್ಲಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿದ್ದವರು, ವಿವಿಧ ಹಂತದ ಜನಪ್ರತಿನಿ ಧಿಗಳೂ ಇದ್ದಾರೆ. ಎಲ್ಲರ ವಿಶ್ವಾಸ ಪಡೆದು ನೇಮಕಾತಿ ಆದರೆ ಪಕ್ಷದ ಬಲವರ್ಧನೆ ಹೆಚ್ಚು ಆಗುತ್ತದೆ ಎಂದರು.
ನನಗೆ ಹುದ್ದೆ ಕೊಡದಿದ್ದರೂ ಕೆಲಸ ಮಾಡುವೆ. ಪಕ್ಷಕ್ಕಾಗಿ ದುಡಿದು ಅವಕಾಶ ಸಿಗದೇ ಇರುವವರಿಗೆ ಆದ್ಯತೆ ಮೇಲೆ ಹುದ್ದೆ ಕೊಡಬೇಕು. -ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಬದಲಾವಣೆ ಅಥವಾ ಮುಂದುವರಿಕೆ!
ಜಿಲ್ಲಾ ಕಾಂಗ್ರೆಸ್ನ್ನು ಕಳೆದ ಮೂರು ಅವಧಿಗೂ ಹೆಚ್ಚುಕಾಲ ಸಕ್ರಿಯವಾಗಿ ಮುನ್ನಡೆಸಿಕೊಂಡು ಬಂದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಅವರ ಬದಲಿಸಿ ಆ ಸ್ಥಾನಕ್ಕೆ ವೆಂಕಟೇಶ ಹೆಗಡೆ ಹೊಸಬಾಳೆ, ಸಾಯಿ ಗಾಂವಕರ್, ಶಿವಾನಂದ ಕಡತೋಕ, ರವೀಂದ್ರ ನಾಯ್ಕ ಹೆಸರು ಪ್ರಸ್ತಾಪ ಇದೆ. ಇನ್ನೊಂದು ಮೂಲದ ಪ್ರಕಾರ ಬರಲಿರುವದು ತಾ.ಪಂ., ಜಿ.ಪಂ, ವಿಧಾನಸಭೆ ಚುನಾವಣೆ ಆಗಿರುವದರಿಂದ ಅನುಭವಿ ಭೀಮಣ್ಣ ಅವರನ್ನೇ ಮುಂದುವರಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ. ಆದರೆ, ರಾಜ್ಯ ಕಾರ್ಯದರ್ಶಿ ನೀಡಿದ್ದೇ ಬದಲಾಯಿಸಲು ಎಂಬ ಮಾತೂ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ