ಪ್ರಿಯಕರನ ಜತೆ ಸಿಕ್ಕಿಬಿದ್ದದ್ದಕ್ಕೆ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಪತ್ನಿ.!
Team Udayavani, Apr 17, 2022, 1:33 PM IST
ಸಾಂದರ್ಭಿಕ ಚಿತ್ರ
ಎಚ್.ಡಿ.ಕೋಟೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೊಡನೆ ಮಾತಿನ ಚಕಮಕಿ ನಡೆದು ಪ್ರಿಯಕರನ ಜೊತೆ ಗೂಡಿ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಆರೋಪದಡಿಯಲ್ಲಿ ಪತ್ನಿ ಮತ್ತು ಪ್ರಿಯಕರ ಜೈಲು ಸೇರಿದ್ದಾರೆ.
ತಾಲೂಕಿನ ಬೂದನೂರು ಗ್ರಾಮದ ವೀರಭದ್ರ ಅವರ ಮರ್ಮಾಂಗ ಹಿಸುಕಿ ಸಾಯಿಸುವ ಯತ್ನ ನಡೆಸಿದ ಆರೋಪದಲ್ಲಿ ಪತ್ನಿ ಕವಿತ (ಹೆಸರು ಬದಲಿಸಲಾಗಿದೆ) ಮತ್ತು ಆಕೆಯ ಪ್ರಿಯಕರ ಅಭಿಲಾಶ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಪತಿ ಸಾವಿನ ಸುದ್ದಿ ಕೇಳಿ ಮಗನೊಂದಿಗೆ ಪತ್ನಿ ನೇಣಿಗೆ ಶರಣು!
ಕವಿತ ಕೇರಳ ಮೂಲದ ಅಭಿಲಾಶ್ ಎಂಬ ವ್ಯಕ್ತಿಯೊಡನೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದರೆಂದು ಪತಿ ವೀರಭದ್ರ ಅವರಿಗೆ ಅನುಮಾನ ಇತ್ತು. ಅದರಂತೆಯೇ ಮದ್ಯ ಸೇವಿಸಿದ ಪತಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕೇರಳ ಮೂಲದ ಪ್ರಿಯಕರ ಅಭಿಲಾಶ್ ವೀರಭದ್ರನ ಮನೆಯಲ್ಲಿ ಪತ್ನಿಯೊಡನಿದ್ದ, ಈ ವೇಳೆ ಎಚ್ಚರಗೊಂಡ ಪತಿ, ಪತ್ನಿ ಪ್ರಿಯಕರನೊಡನೆ ದೃಶ್ಯಕಂಡು ಕೆಂಡಾಮಂಡಲನಾಗಿದ್ದಾನೆ. ಮೂವರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಪ್ರಿಯಕರನೊಡ ಗೂಡಿದ ಪತ್ನಿ ಪತಿಯ ಮರ್ಮಾಂಗ ಹಿಸುಕಿ ಸಾಯಿಸಲು ಯತ್ನಿಸಿದಾಗ ಚೀರಾಟ ಆಲಿಸಿ ಮನೆಯಲ್ಲಿದ್ದ ಮಕ್ಕಳು ಮತ್ತು ನೆರೆಹೊರೆಯವರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಘಟನೆ ಕುರಿತು ಪತಿ ವೀರಭದ್ರ ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ