ಕಿಡ್ನಾಪ್ ಆಗಿದ್ದ ಬೇಕರಿ ಮಾಲೀಕಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಮನವಿ
Team Udayavani, Apr 21, 2022, 3:10 PM IST
ಇಂಡಿ: ಇತ್ತೀಚೆಗೆ ಕಿಡ್ನಾಪ್ ಆಗಿದ್ದ ಪಟ್ಟಣದ ಅರ್ಬುದಾ ಬೇಕರಿ ಮಾಲೀಕ ಮಾಪಸಿಂಗ್ ಪರಮಾರ್ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಂಜೀವ ಚವ್ಹಾಣ, ವಿಜಯ್ ರಾಠೊಡ ಮತ್ತಿತರರು ಮಾತನಾಡಿ, ಎರಡು ತಿಂಗಳ ಹಿಂದೆ ಸಿನಿಮೀಯ ಶೈಲಿಯಲ್ಲಿ ಬೇಕರಿ ಮಾಲೀಕನನ್ನು ಕಿಡ್ನಾಪ್ ಮಾಡಲಾಗಿತ್ತು. ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕೇಸ್ ದಾಖಲಿಸಿದ್ದರು. ಆದರೆ ಆರೋಪಿಗಳು ಬೇಲ್ ಮೇಲೆ ಹೊರಗಡೆ ಬಂದಿದ್ದು ಮತ್ತೆ ಬೇಕರಿ ಹತ್ತಿರ ಅಡ್ಡಾಡುತಿದ್ದಾರೆ. ಹೀಗಾಗಿ ಬೇಕರಿ ಮಾಲೀಕನ ಪ್ರಾಣಕ್ಕೆ ಅಪಾಯವಿದೆ. ಕೂಡಲೇ ಪೊಲೀಸ್ ಇಲಾಖೆಯವರಿಗೆ ನಿರ್ದೇಶನ ನೀಡಿ ಬೇಕರಿ ಮಾಲೀಕನ ಪ್ರಾಣ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮೋಹನ್ ಲಮಾಣಿ, ಬಾಬು ರಾಠೊಡ, ರಂಗು ಚವ್ಹಾಣ, ಧನರಾಜ ರಾಠೊಡ, ಪಂಡಿತ ರಾಠೊಡ, ವಿಲಾಸ ರಾಠೊಡ, ಅಶೋಕ ಚವ್ಹಾಣ, ಸಂತೋಶ ರಾಠೊಡ, ವಿಲಾಸ ರಾಠೊಡ, ಅವಿನಾಶ ರಾಠೊಡ, ಶಿವಲೀಲಾ ರಾಠೊಡ, ಕವಿತಾ ರಾಠೊಡ, ಶೋಭಾ ಪವಾರ, ರಾಜಶ್ರೀ ಚವ್ಹಾಣ,. ನಿಖೀತಾ ಪವಾರ, ಅಂಕಿತಾ ಪವಾರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ