ಶಾಲಾ ಪಠ್ಯದಲ್ಲಿ ಭಗವದ್ಗೀತೆ: ಎಚ್ಚರಿಕೆಯ ಹೆಜ್ಜೆ ಅಗತ್ಯ
Team Udayavani, May 1, 2022, 6:20 AM IST
ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿಕೊಳ್ಳುವ ಬಗ್ಗೆ ರಾಜಕೀಯದಲ್ಲಿ ಇರುವವರಲ್ಲಿ ಕೂಡ ಆಶ್ಚರ್ಯಕರವೆನಿಸುವಂತೆ ಅತ್ಯಂತ ಉತ್ಸಾಹ ಮೂಡಿಬಂದಿದೆ.
ಗುಜರಾತ್ ಸರಕಾರ ಇಂತಹ ಒಂದು ಧನಾತ್ಮಕವಾದ ಚಿಂತನೆಯನ್ನು ಕ್ರಿಯಾರೂಪಕ್ಕೆ ತಂದಿರುವುದೇ ಈ ಬೆಳವಣಿಗೆಗೆ ಮುಖ್ಯ ಕಾರಣ. ಆದರೆ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಹೇಗೆ ಅಳ ವಡಿಸಬೇಕು ಎನ್ನುವುದು ನಾಜೂಕಾದ ಮತ್ತು ಗಂಭೀರವಾದ ಮಂಥನಕ್ಕೆ ಒಳಗಾಗಬೇಕಾದ ವಿಷಯ.
ಅದು ದೈನಂದಿನ ಪಾಠ ಪಠ್ಯಗಳಲ್ಲಿ ಸೇರಿಕೊಳ್ಳಬೇಕೇ / ಅವಿಸ್ತರಣ (non detailed) ಪಠ್ಯದಲ್ಲಿ ಸೇರಿಸಬೇಕೇ ಅಲ್ಲ ಪ್ರತ್ಯೇಕ ವಾದ ಒಂದು ನೈತಿಕ ಶಿಕ್ಷಣದ ಅಂಗವಾಗಿ ಅದನ್ನು ಉಪಯೋಗಿಸಿಕೊಳ್ಳಬೇಕೇ?- ಯೋಚಿಸ ಬೇಕು.
ಇಂತಹ ವಿಷಯಗಳಲ್ಲಿ ಅಭಿಮಾನ, ಪ್ರತಿಷ್ಠೆ ಇತ್ಯಾದಿಗಳು ಸಹಜವಾಗಿ ಮುಂದೆ ನಿಲ್ಲಬಹುದು. ಭಾವಾವೇಶದ ಉದ್ಘೋಷಗಳೂ ಕೇಳಿಬರಬಹುದು. ಸಾಮಾನ್ಯವಾಗಿ ನಮಗೆ ಪ್ರಿಯವಾದ¨ªೆಲ್ಲ ನಮ್ಮ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎನ್ನುವ ಬೇಡಿಕೆ ಬೇರೆ ಬೇರೆ ಸಂದರ್ಭಗಳಲ್ಲಿ ಮುನ್ನೆಲೆಗೆ ಬರುವುದಿದೆ. ಯಕ್ಷಗಾನ, ಭರತನಾಟ್ಯ ಮೊದಲಾದ ಕಲೆಗಳ ಕುರಿತು ಮತ್ತು ಬೇರೆ ಬೇರೆ ಭಾಷೆಗಳ ಕುರಿತು ಈಗಾಗಲೇ ಅಂತಹ ಅಪೇಕ್ಷೆಗಳು ಕಾಣಿಸಿಕೊಂಡಿವೆ.
ಭಗವದ್ಗೀತೆ ಹಿಂದೂಗಳ ಪವಿತ್ರವಾದ ಆರಾಧನಾ ಗ್ರಂಥ. ಪ್ರಸ್ಥಾನತ್ರಯಗಳಲ್ಲಿ ಒಂದು. ಆಚಾರ್ಯತ್ರಯರ ಭಾಷ್ಯ ಗೌರವಕ್ಕೆ ಪಾತ್ರವಾದ ಧರ್ಮಗ್ರಂಥವೂ ಹೌದು. ಭಗವದ್ಗೀತೆಯಲ್ಲಿ ಮನುಷ್ಯ ಜೀವನಕ್ಕೆ ಅತ್ಯವಶ್ಯವಾಗಿರುವ ಅನೇಕ ಸದ್ಗುಣಗಳು ಸಾದರಗೊಂಡಿವೆ. ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಅತ್ಯಂತ ಪ್ರಬಲವಾದ ಶಕ್ತಿಯಾಗಿ ಪರಿಣಮಿಸಬಲ್ಲ ಮೌಲ್ಯವಿಶೇಷಗಳು ಅದರಲ್ಲಿ ಹಾಸುಹೊಕ್ಕಾಗಿವೆ. ಮಾನಸಿಕವಾದ ಅನೇಕ ಪ್ರಶ್ನೆಗಳಿಗೆ ಉತ್ತರವಿದೆ. ಮಾತ್ರವಲ್ಲ ಅದೊಂದು ಮನಃಶಾಸ್ತ್ರ ಕೃತಿಯೆಂದೂ ಜಾಗತಿಕವಾಗಿ ಅಂಗೀಕರಿಸಲ್ಪಟ್ಟಿದೆ.
ಏನಿದ್ದರೂ ಮೂಲದಲ್ಲಿ ಅದು ಧರ್ಮಗ್ರಂಥ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಪಠ್ಯಕ್ಕೆ ಸಂಬಂಧಿಸಿ ಅದರಲ್ಲಿರುವ ಅಂಶಗಳನ್ನು ಪಾರ ಮಾರ್ಥಿಕ ಚೌಕಟ್ಟಿಗೆ ತೊಡಕಾಗದಂತೆ ಎಷ್ಟನ್ನು ಹೇಗೆ ಸಂಯುಕ್ತಗೊಳಿಸಬೇಕು ಎನ್ನುವುದನ್ನು ಶಿಕ್ಷಣ ತಜ್ಞರು, ಸಮಾಜಶಾಸ್ತ್ರಜ್ಞರು ಮಾತ್ರವಲ್ಲ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರಗಳ ಆಚಾರ್ಯ ಪುರುಷರು ಕೂಲಂ ಕಷವಾಗಿ ವಿಮರ್ಶಿಸಿಯೇ ಮುಂದುವರಿಯಬೇಕು. ಲೌಕಿಕವಾಗಿ ಸಮಾಜವನ್ನು ಕಟ್ಟಲು ಅದರಿಂದ ಪ್ರಯೋಜನವಾಗಬೇಕೇ ಹೊರತು ಅನಗತ್ಯ ತಪ್ಪು ಕಲ್ಪನೆಗಳಿಂದ ವಿವಾದಕ್ಕೆ ಕಾರಣವಾಗಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.
-ಡಾ| ರಮಾನಂದ ಬನಾರಿ, ಮಂಜೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ