ಕೊಲ್ಲೊಟ್ಟು ಬಳಿ ಅಪಾಯಕಾರಿ ತಿರುವು
ಕೆಂಜಾರು - ಅದ್ಯಪಾಡಿ - ಕೈಕಂಬ ರಸ್ತೆ
Team Udayavani, May 7, 2022, 12:11 PM IST
ಬಜಪೆ: ಕೆಂಜಾರು -ಅದ್ಯಪಾಡಿ- ಕೈಕಂಬ ಲೋಕೋ ಪಯೋಗಿ ಇಲಾಖೆ ರಸ್ತೆಯ ಅದ್ಯಪಾಡಿ ಕೊಲ್ಲೊಟ್ಟು ಬಳಿ ಅಪಾಯಕಾರಿ ತಿರುವು ಹಲವಾರು ಅಪಘಾತ ಹಾಗೂ ಸಾವಿಗೆ ಕಾರಣವಾಗಿದೆ. ಈ ತಿರುವಿನ ಬಳಿ ದೊಡ್ಡದಾದ ಬಂಡೆ, ಗುಡ್ಡ ಇದೆ. ಹಾಗಾಗಿ ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಇಲ್ಲಿ ಈಗಾಗಲೇ 8 ಅಪಘಾತಗಳು ಸಂಭವಿಸಿದೆ. ಅದರಲ್ಲಿ 2 ಸಾವು 5 ವಿವಿಧ ಅಪಘಾತದಲ್ಲಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕಂಡು ಬಂದಿದೆ. ತಿರುವಿನಲ್ಲಿ ಎದುರಿನಿಂದ ಬಂದ ವಾಹನಗಳಿಗೆ ಗೊತ್ತಾಗುವಂತೆ ಕನ್ನಡಿಯನ್ನು ಇಡಲಾಗಿದೆ. ಆದರೆ ಏಕಾಏಕೀ ತಿರುವು ಇದ್ದಕಾರಣ ವಾಹನಗಳು ನಿಯಂತ್ರಣ ಸಾಧ್ಯವಾಗದೇ ಅಪಘಾತಕ್ಕೊಳಗಾಗುವುದು ಸಾಮಾನ್ಯವಾಗಿದೆ.
ಈಗ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದೆ. ವಿಮಾನ ನಿಲ್ದಾಣ, ಕೆಂಜಾರು, ಕೈಕಂಬಕ್ಕೆ ಹೋಗಲು ಈ ರಸ್ತೆಯನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ.
ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ
ಈ ತಿರುವಿನ ಕೆಳಗಡೆ ಕೊಲ್ಲೊಟ್ಟಿಗೆ ಹೋಗುವ ರಸ್ತೆ ಇದೆ. ಲೋಕೋಪಯೋಗಿ ರಸ್ತೆಯಿಂದ ಕೊಲ್ಲೊಟ್ಟು ರಸ್ತೆ 15 ಅಡಿ ಕೆಳಗಡೆ ಇದೆ. ಇದರಿಂದ ವಾಹನಗಳು ಹತೋಟಿ ತಪ್ಪಿದರೆ 15 ಅಡಿ ಕೆಳಗಡೆ ಇರುವ ಕೊಲ್ಲೊಟ್ಟು ರಸ್ತೆಗೆ ಬಂದು ಬೀಳುತ್ತಾರೆ. ಇದು ಪ್ರಾಣಾಪಾಯಕ್ಕೆ ಕಾರಣವಾಗಿದೆ. ಈ ತಿರುವಿನಲ್ಲಿ ತಡೆಗೋಡೆ ನಿರ್ಮಿಸಬೇಕಾಗಿದೆ. ಇದರಿಂದ ಅಪಘಾತವನ್ನು ತಪ್ಪಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
U. T. Khader ಮಂಗಳೂರಿನಿಂದ ಹಜ್ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?