ಬುಮ್ರಾ ಪ್ರಯತ್ನ ವ್ಯರ್ಥ; ಮುಂಬೈ ಇಂಡಿಯನ್ಸ್‌ಗೆ ಸೋಲು


Team Udayavani, May 9, 2022, 11:54 PM IST

ಬುಮ್ರಾ ಪ್ರಯತ್ನ ವ್ಯರ್ಥ; ಮುಂಬೈಗೆ ಸೋಲು

ಮುಂಬಯಿ: ಜಸ್‌ಪ್ರೀತ್‌ ಬುಮ್ರಾ ಫೈವ್‌ಸ್ಟಾರ್‌ ಸಾಧನೆ ಮಾಡಿದರೂ ಮುಂಬೈ ಇಂಡಿಯನ್ಸ್‌ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲೇ ಇಲ್ಲ. ಎದುರಾಳಿ ಕೋಲ್ಕತಾ ನೈಟ್‌ರೈಡರ್ ದಾಳಿಗೆ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ 52 ರನ್ನುಗಳಿಂದ ಸೋಲನ್ನು ಕಂಡಿದೆ.

ಇಶಾನ್‌ ಕಿಶನ್‌ ಅವರ 51 ರನ್ನುಗಳ ಪ್ರಯತ್ನದ ಹೊರತಾಗಿಯೂ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಮುಂಬೈ ಇಂಡಿಯನ್ಸ್‌ ತಂಡವು 17.3 ಓವರ್‌ಗಳಲ್ಲಿ ಕೇವಲ 113 ರನ್ನಿಗೆ ಆಲೌಔಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಬುಮ್ರಾ ಮಾರಕ ದಾಳಿಗೆ ಕುಸಿದ ಕೆಕೆಆರ್‌ ತಂಡವು 9 ವಿಕೆಟಿಗೆ 165 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಸೋಲಿನಿಂದ ಮುಂಬೈ ಪ್ಲೇ ಆಫ್ನಿಂದ ಹೊರಬಿತ್ತು.

ರೋಹಿತ್‌ ಅವರನ್ನು ಬೇಗನೇ ಕಳೆದುಕೊಂಡ ಮುಂಬೈ ತಂಡವನ್ನು ಇಶಾನ್‌ ಕಿಶನ್‌ ಆಧರಿಸಿದರು. ಆದರೆ ಇತರ ಯಾವುದೇ ಆಟಗಾರ ಅವರಿಗೆ ಉತ್ತಮ ಜತೆಯಾಟ ನೀಡಲು ವಿಫ‌ಲರಾದರು. ತಿಲಕ್‌ ವರ್ಮ, ರಮಣದೀಪ್‌, ಟಿಮ್‌ ಡೇವಿಡ್‌, ಕೈರನ್‌ ಪೊಲಾರ್ಡ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದರಿಂಧ ಮುಂಬೈ ಅಲ್ಪ ಮೊತ್ತಕ್ಕೆ ಕುಸಿಯಿತು.

ಬುಮ್ರಾ ಫೈವ್‌ಸ್ಟಾರ್‌ ಸಾಧನೆ


ಈ ಮೊದಲು ಬಹಳ ವಿಳಂಬವಾಗಿ ಲಯ ಕಂಡುಕೊಂಡ ಮುಂಬೈ ಇಂಡಿಯನ್ಸ್‌ನ ಸ್ಟಾರ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಫೈವ್‌ಸ್ಟಾರ್‌ ಸಾಧನೆಯಿಂದ ಸುದ್ದಿಯಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಕೇವಲ 10 ರನ್‌ ವೆಚ್ಚದಲ್ಲಿ 5 ವಿಕೆಟ್‌ ಉಡಾಯಿಸಿದ್ದರಿಂದ ಕೆಕೆಆರ್‌ 9 ವಿಕೆಟ್‌ ನಷ್ಟದಲ್ಲಿ 165 ರನ್‌ ಗಳಿಸಿತ್ತು.

ಶ್ರೇಯಸ್‌ ಅಯ್ಯರ್‌ ಬಳಗದ ಪಾಲಿಗೆ ಇದು ಅಳಿವು ಉಳಿವಿನ ಪಂದ್ಯವಾಗಿದೆ. ಈ ಪಂದ್ಯ ಸೋತರೆ ಅದು ಕೂಟದಿಂದ ಹೊರಬೀಳಲಿದೆ. ಹಾಗೆಯೇ ಮುಂಬೈ ಗೆದ್ದರೂ ಅದಕ್ಕೆ ಲಾಭವೇನೂ ಇಲ್ಲ. ರವಿವಾರ ಆರ್‌ಸಿಬಿ ಜಯ ಸಾಧಿಸಿದ್ದರಿಂದ ರೋಹಿತ್‌ ಪಡೆ ಮೊದಲ ತಂಡವಾಗಿ ಪಂದ್ಯಾವಳಿಯಿಂದ ನಿರ್ಗಮಿಸಿದೆ.

 

ಅಯ್ಯರ್‌ ಅಬ್ಬರ
ಹಾರ್ಡ್‌ ಹಿಟ್ಟರ್‌ ವೆಂಕಟೇಶ್‌ ಅಯ್ಯರ್‌ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿದರು. ಪವರ್‌ ಪ್ಲೇ ಅವಧಿಯಲ್ಲಿ ಅಯ್ಯರ್‌ ಅವರ ಬ್ಯಾಟಿಂಗ್‌ ಅಬ್ಬರದಿಂದಾಗಿ ಕೆಕೆಆರ್‌ಗೆ ಉತ್ತಮ ಆರಂಭ ಲಭಿಸಿತು. ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅಯ್ಯರ್‌ 24 ಎಸೆತಗಳಿಂದ 43 ರನ್‌ ಬಾರಿಸಿದರು. ಸಿಡಿಸಿದ್ದು 4 ಸಿಕ್ಸರ್‌ ಹಾಗೂ 3 ಫೋರ್‌. ಅಯ್ಯರ್‌ ನಿರ್ಗಮನದ ಬೆನ್ನಲ್ಲೇ ಕೆಕೆಆರ್‌ ರನ್‌ರೇಟ್‌ನಲ್ಲಿ ಸಹಜವಾಗಿಯೇ ಕುಸಿತ ಸಂಭವಿಸಿತು. ಅಜಿಂಕ್ಯ ರಹಾನೆ-ನಿತೀಶ್‌ ರಾಣಾ ಕ್ರೀಸಿನಲ್ಲಿದ್ದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 87ಕ್ಕೆ ಏರಿತು. ಇದೇ ಲಯದಲ್ಲಿ ಸಾಗಿದ್ದೇ ಆದಲ್ಲಿ ಕೆಕೆಆರ್‌ 175-180ರ ತನಕ ಸಾಗಬಹುದಿತ್ತು. ಆದರೆ ಬುಮ್ರಾ ಇದಕ್ಕೆ ಅಡ್ಡಗಾಲಿಕ್ಕಿದರು.

ಕೋಲ್ಕತಾ ನೈಟ್‌ರೈಡರ್
ವೆಂಕಟೇಶ್‌ ಅಯ್ಯರ್‌ ಸಿ ಸ್ಯಾಮ್ಸ್‌ ಬಿ ಕಾರ್ತಿಕೇಯ 43
ಅಜಿಂಕ್ಯ ರಹಾನೆ ಬಿ ಕಾರ್ತಿಕೇಯ 25
ನಿತೀಶ್‌ ರಾಣಾ ಸಿ ಇಶಾನ್‌ ಬಿ ಬುಮ್ರಾ 43
ಶ್ರೇಯಸ್‌ ಅಯ್ಯರ್‌ ಸಿ ಇಶಾನ್‌ ಬಿ ಅಶ್ವಿ‌ನ್‌ 6
ಆ್ಯಂಡ್ರೆ ರಸೆಲ್‌ ಸಿ ಪೊಲಾರ್ಡ್‌ ಬಿ ಬುಮ್ರಾ 9
ರಿಂಕು ಸಿಂಗ್‌ ಔಟಾಗದೆ 23
ಶೆಲ್ಡನ್‌ ಜಾಕ್ಸನ್‌ ಸಿ ಸ್ಯಾಮ್ಸ್‌ ಬಿ ಬುಮ್ರಾ 5
ಪ್ಯಾಟ್‌ ಕಮಿನ್ಸ್‌ ಸಿ ತಿಲಕ್‌ ಬಿ ಬುಮ್ರಾ 0
ಸುನೀಲ್‌ ನಾರಾಯಣ್‌ ಸಿ ಮತ್ತು ಬಿ ಬುಮ್ರಾ 0
ಟಿಮ್‌ ಸೌಥಿ ಸಿ ಪೊಲಾರ್ಡ್‌ ಬಿ ಸ್ಯಾಮ್ಸ್‌ 0
ವರುಣ್‌ ಚಕ್ರವರ್ತಿ ಔಟಾಗದೆ 0
ಇತರ 11
ಒಟ್ಟು (9 ವಿಕೆಟಿಗೆ) 165
ವಿಕೆಟ್‌ ಪತನ: 1-60, 2-87, 3-123, 4-136, 5-139, 6-156, 7-156, 8-156,
ಬೌಲಿಂಗ್‌: ಡೇನಿಯಲ್‌ ಸ್ಯಾಮ್ಸ್‌ 4-0-26-0
ಮುರುಗನ್‌ ಅಶ್ವಿ‌ನ್‌ 4-0-35-1
ಜಸ್‌ಪ್ರೀತ್‌ ಬುಮ್ರಾ 4-1-10-5
ರಿಲೀ ಮೆರಿಡಿತ್‌ 3-0-35-0
ಕುಮಾರ ಕಾರ್ತಿಕೇಯ 3-0-32-2
ಕೈರನ್‌ ಪೊಲಾರ್ಡ್‌ 2-0-26-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಜಾಕ್ಸನ್‌ಬಿ ಸೌಥಿ 2
ಇಶಾನ್‌ ಕಿಶನ್‌ ಸಿ ಸಿಂಗ್‌ ಬಿ ಕಮಿನ್ಸ್‌ 51
ತಿಲಕ್‌ ವರ್ಮ ಸಿ ರಾಣಾ ಬಿ ರಸೆಲ್‌ 6
ರಮಣದೀಪ್‌ ಸಿಂಗ್‌ ಸಿ ರಾಣಾ ಬಿ ರಸೆಲ್‌ 12
ಟಿಮ್‌ ಡೇವಿಡ್‌ ಸಿ ರಹಾನೆ ಬಿ ವರುಣ್‌ 13
ಕೈರನ್‌ ಪೊಲಾರ್ಡ್‌ ರನೌಟ್‌ 15
ಡೇನಿಯಲ್‌ ಸ್ಯಾಮ್ಸ್‌ ಸಿ ಜಾಕ್ಸನ್‌ ಬಿ ಕಮಿನ್ಸ್‌ 1
ಮುರುಗನ್‌ ಅಶ್ವಿ‌ನ್‌ ಸಿ ವರುಣ್‌ ಬಿ ಕಮಿನ್ಸ್‌ 0
ಕುಮಾರ ಕಾರ್ತಿಕೇಯ ರನೌಟ್‌ 3
ಜಸ್‌ಪ್ರೀತ್‌ ಬುಮ್ರಾ ರನೌಟ್‌ 0
ರಿಲೆ ಮೆರೆಡಿತ್‌ ಔಟಾಗದೆ 0
ಇತರ: 10
ಒಟ್ಟು (17.3 ಓವರ್‌ಗಳಲ್ಲಿ ಆಲೌಟ್‌) 113
ವಿಕೆಟ್‌ ಪತನ: 1-2, 2-32, 3-69, 4-83, 5-100, 6-102, 7-102, 8-112, 9-113
ಬೌಲಿಂಗ್‌:
ಟಿಮ್‌ ಸೌಥಿ 3-0-10-1
ಪ್ಯಾಟ್‌ ಕಮಿನ್ಸ್‌ 4-0-22-3
ಆ್ಯಂಡ್ರೆ ರಸೆಲ್‌ 2.3-0-22-2
ಸುನೀಲ್‌ ನಾರಾಯಣ್‌ 4-0-21-0
ವರುಣ್‌ ಚಕ್ರವರ್ತಿ 3-0-22-1
ವೆಂಕಟೇಶ್‌ ಅಯ್ಯರ್‌ 1-0-8-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.