ಮಂಗಳೂರು: ಅನುಮಾನಸ್ಪದ ವರ್ತನೆ: ಓರ್ವ ಪೊಲೀಸರ ವಶಕ್ಕೆ
Team Udayavani, May 10, 2022, 9:49 PM IST
ಮಂಗಳೂರು: ನಗರದ ಚಿಲಿಂಬಿ ಬಳಿ ಮುಂಜಾವ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೇ 10ರಂದು ಮುಂಜಾವ ಬೆಳಗ್ಗೆ 3ರ ಸುಮಾರಿಗೆ ಉರ್ವ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಚಿಲಿಂಬಿಯ ಬ್ಯಾಂಕ್ವೊಂದರ ಬಳಿ ಮರದ ಬದಿಯಲ್ಲಿ ಓರ್ವ ವ್ಯಕ್ತಿ ಮರೆಮಾಚಿಕೊಂಡು ನಿಂತಿದ್ದ. ಆತನನ್ನು ಹಿಡಿದು ವಿಚಾರಿಸಿದಾಗ ಆತ ಮುಂಬಯಿಯ ಪ್ರೇಮ್ಲಾಲ್ ದಿಂಗ್ವಾನಿ(24) ಎಂದು ತಿಳಿದುಬಂದಿದ್ದು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ.
ಆತ ಯಾವುದೋ ಕೃತ್ಯ ಮಾಡುವ ಉದ್ದೇಶ ಹೊಂದಿರುವ ಬಗ್ಗೆ ಬಲವಾದ ಸಂಶಯ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.