ಸೌರ ವಿದ್ಯುತ್ ಉತ್ಪಾದನೆ ಪರಿಸರಕ್ಕೆ ಪೂರಕ: ಉಮಾಕಾಂತ್
Team Udayavani, May 23, 2022, 4:12 PM IST
ಗುಂಡ್ಲುಪೇಟೆ: ಸೌರ ವಿದ್ಯುತ್ನಿಂದ ಅಪಾರವಾದ ಲಾಭವಿದ್ದು, ಪರಿಸರಸ್ನೇಹಿ ಹಾಗೂ ಇಂಗಾಲದ ಡೈಆಕ್ಸೈಡ್ ಕಡಿಮೆಯಾಗುವ ಜೊತೆಗೆ ಹಸಿರು ಪರಿಣಾಮದ ಮೇಲೆ ಪ್ರಭಾವ ಬೀರುವ ಮೂಲಕಸಮಾಜದ ಆರೋಗ್ಯ ಸ್ವಾಸ್ಥಕ್ಕೆ ನಾಂದಿಯಾಗುತ್ತದೆ ಎಂದು ಜೆಎಸ್ಎಸ್ ತಾಂತ್ರಿಕ ಮಹಾ ವಿದ್ಯಾಲಯದ ಜಂಟಿ ನಿರ್ದೇಶಕ ಆರ್.ಉಮಾಕಾಂತ್ ತಿಳಿಸಿದರು.
ಪಟ್ಟಣದ ಜೆಎಸ್ಎಸ್ ಕಾಲೇಜಿಗೆ ಜೆಎಸ್ಎಸ್ ತಾಂತ್ರಿಕ ಮಹಾವಿದ್ಯಾಲಯ, ಎಸ್ಆರ್ಟಿಪಿ ಅಧಿಕಾರಿಗಳ ತಂಡ ಭೇಟಿ ನೀಡಿ ಸೌರ ಸ್ಥಾವರವನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಸೌರ ವಿದ್ಯತ್ ಪರಿಸರಕ್ಕೆ ಪೂರಕ ಎಂದು ಹೇಳಿದರು.
ಶೇ.40 ಸಹಾಯ ಧನ: ಡಾ.ಎಚ್.ನಾಗಣ್ಣಗೌಡ ಮಾತನಾಡಿ, ಸೌರವಿದ್ಯುತ್ನಿಂದ ಪರಿಸರದಸಮತೋಲನದ ಜೊತೆಗೆ ರಾಷ್ಟ್ರೀಯ ವಿದ್ಯುತ್ಸಮಸ್ಯೆಯನ್ನು ಕೂಡ ಕಡಿಮೆ ಮಾಡಬಹುದು. ಇಲ್ಲಿ ಒಂದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಿಂದಕಲ್ಲಿದ್ದಲು, ನೀರನ್ನು ಸಾಕಷ್ಟು ಉಳಿತಾಯ ಮಾಡಬಹುದು. ಇದರಿಂದ ಜನರ ಆರೋಗ್ಯನೈರ್ಮಲೀಕರಣವನ್ನು ವೃದ್ಧಿಗೊಳಿಸಲು ಅನುಕೂಲವಾಗುತ್ತದೆ, ಸೋಲಾರ್ ವಿದ್ಯುತ್ ಪ್ಲಾಂಟ್ಗಳಿಗೆ ಸರ್ಕಾರದಿಂದ ಶೇ.40 ಧನಸಹಾಯವಿದೆ ಎಂದು ತಿಳಿಸಿದರು.
ಈ ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳಿಗೂ ಈ ರೀತಿ ಪ್ಲಾಂಟ್ಗಳನ್ನು ಅಳವಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ಒಂದು ಕಾರ್ಯಾಗಾರಮಾಡಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತವೆಂಬ ಅಂಶಗಳನ್ನು ಮನವರಿಕೆ ಮಾಡಿಕೊಟ್ಟರು.
ಪ್ರಾಚಾರ್ಯ ಮರಿಸ್ವಾಮಪ್ಪ ಮಾತನಾಡಿ, ದೇಶದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಬಿಲ್ ದರ ಕೂಡ ಗಗನಮುಖವಾಗಿದೆ. ಇದೆಲ್ಲವನ್ನು ಗಮನಿಸಿದ ನಮ್ಮಜೆಎಸ್ಎಸ್ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸೌರವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಮೂಲಕಸಂಸ್ಥೆಯ 21 ಶಾಲಾ-ಕಾಲೇಜು, ಕಲ್ಯಾಣಮಂಟಪಗಳಲ್ಲಿ ಅಳವಡಿಸಲು ತಾಂತ್ರಿಕಮಹಾವಿದ್ಯಾಲಯದ ಮೂಲಕ ಕಾರ್ಯಾರಂಭ ಮಾಡಿಸಿದ್ದಾರೆ ಎಂದು ತಿಳಿಸಿದರು.
ಸೌರವಿದ್ಯುತ್ ಬಗ್ಗೆ ಈಗಾಗಲೇ ಜನರಿಗೆ ಮಾಹಿತಿ ನೀಡುವುದರ ಜೊತೆಗೆ ವಿಚಾರ ಸಂಕಿರಣ ಏರ್ಪಡಿಸಿಸಾರ್ವಜನಿಕರಿಗೆ ಇದರ ಪ್ರಯೋಜನ ತಿಳಿಸಲು ಈಗಾಗಲೇ ತೀರ್ಮಾನಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸುರೇಂದ್ರ ಪಿ.ನಾಯರ್,ಸಂಯೋಜಕ ಬಿ.ಎಂ.ಚಂದ್ರಶೇಖರ್, ಟಿ.ಎಂ.ಮರಿಸ್ವಾಮಿ, ಅಧೀಕ್ಷಕ ಶಂಭುಲಿಂಗಯ್ಯ, ಶಿವಪ್ರಸಾದ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ