ಪಶುಗಳ ಪರ್ಯಾಯ ಆಹಾರ ಅಜೋಲ್ಲಾ ಪರ್ನ್

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಅಶೋಕ ಪಿ. ಮಾಹಿತಿ

Team Udayavani, May 26, 2022, 4:29 PM IST

21

ರಾಣಿಬೆನ್ನೂರ: ಪಶುಗಳಿಗೆ ಪರ್ಯಾಯ ಆಹಾರವೆಂದರೆ ಅಜೋಲ್ಲಾ ಪರ್ನ್ ಜಾತಿಗೆ ಸೇರಿದ ಚಿಕ್ಕ ಸಸ್ಯ. ನೀರಿನ ಮೇಲೆ ಚೌಕಾಕಾರದ ಚಿಕ್ಕ ಎಲೆಗಳು ಹರಡಿದ್ದರೆ, ಗೊಂಚಲಾದ ಇದರ ಬೇರುಗಳು ನೀರಿನಲ್ಲಿ ಇಳಿಬಿದ್ದಿರುತ್ತವೆ. ಅಸಂಖ್ಯಾತ ಅಜೋಲ್ಲಾ ಸಸ್ಯಗಳು ಒಂದಕ್ಕೊಂದು ಹೆಣೆದುಕೊಂಡು, ನೀರಿನ ಮೇಲೆ ತೇಲಾಡುವ ಒಂದು ಚಾಪೆಯ ರೂಪ ಪಡೆದಿರುತ್ತದೆ ಎಂದು ಹಿರಿಯ ವಿಜ್ಞಾನಿ ಡಾ| ಅಶೋಕ ಪಿ. ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಜೋಲ್ಲಾ ಬಳಕೆಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಜೋಲ್ಲಾ ಸಹ ಜೀವಿಯಾಗಿರುವುದರಿಂದ ಇದರ ಸಂಗಾತಿ ಅನಬೇನಾ ಅಜೋಲ್ಲಾ ಒಂದು ನೀಲಿ ಹಸಿರು ಪಾಚಿ. ಅನಬೇನಾಗೆ ಪೌಷ್ಟಿಕಾಂಶಗಳನ್ನು ಒದಗಿಸಿ ತನ್ನ ಎಲೆಯ ಪದರುಗಳಲ್ಲಿರುವ ಈ ಪಾಚಿಗೆ ವಾಸಿಸಲು ಸ್ಥಳ ದೊರಕಿಸುತ್ತದೆ. ಜಾನುವಾರುಗಳಿಗೆ ಆಹಾರವಾಗಿ ಅಜೋಲ್ಲಾ ಪಾತ್ರ ಒಳ್ಳೆಯ ಪೋಷಕಾಂಶಗಳಿಂದ ಕೂಡಿರುತ್ತದೆ ಎಂದರು.

ಅಜೋಲ ಹೆಚ್ಚಿನ ಪ್ರೊಟೀನ್‌ (ಶೇ.25 ರಿಂದ ಶೇ.35), ಕಡಿಮೆ ಲಿಗ್ನಿಂಗ್‌ ಹೊಂದಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಹೈನು ರಾಸುಗಳಿಗೆ ಅಗತ್ಯವಾದ ಕಚ್ಚಾ ನಾರು (ಶೇ.9), ಪಿಷ್ಟ (ಶೇ.5 ರಿಂದ ಶೇ.6) ಕೊಬ್ಬು (ಶೇ.5), ಇದಲ್ಲದೇ ಮ್ಯಾಂಗನೀಸ್‌ ಮತ್ತು ಮೆಗ್ನಿàಷಿಯಂ, ವಿಟಮಿನ್‌ 3, ವಿಟಮಿನ್‌ ಬಿ ಇತ್ಯಾದಿ ಪೌಷ್ಟಿಕಾಂಶಗಳು ಅಜೋಲದಲ್ಲಿ ಅಡಕವಾಗಿವೆ. ಪ್ರತ್ಯೇಕವಾಗಿ ನೀರಿನಲ್ಲಿ ಬೆಳೆಸಬಹುದು. ಇತರ ಮೇವಿನ ಹಾಗೆ ಒಕ್ಕಲು ಮಾಡಿ ಕತ್ತರಿಸುವ ಅಗತ್ಯವಿಲ್ಲ. ರಾಸುಗಳಿಗೆ ಪಶು ಆಹಾರದೊಂದಿಗೆ 1.5 ರಿಂದ 2 ಕೆಜಿ ಅಜೋಲಾ ಕೊಡುವುದರಿಂದ ಶೇ.10 ರಿಂದ ಶೇ.15 ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಜೊತೆಗೆ ಶೇ.15 ರಿಂದ ಶೇ.25 ರಷ್ಟು ಪಶು ಆಹಾರ ಬಳಕೆಯಲ್ಲಿ ಕಡಿಮೆ ಮಾಡುತ್ತದೆ ಎಂದರು.

ಅಜೋಲ್ಲಾ ಬೆಳೆಸುವ ವಿಧಾನವೆಂದರೆ, ಪ್ರಥಮವಾಗಿ ನೆರಳಿರುವ ಜಾಗವನ್ನು ಆಯ್ಕೆ ಮಾಡಿ, ನೆರಳಿಲ್ಲದಿದ್ದಲ್ಲಿ ಚಪ್ಪರ ಹಾಕಿ ಅಥವಾ ಶೇಡ್‌ ನೆಟ್‌ ಬಳಸಿ ಅಜೋಲ್ಲಾಕ್ಕೆ ನೆರಳು ಒದಗಿಸಬೇಕು. ಹೊಂಡ ತಯಾರಿಸಿ (ಎರಡು ಮೀಟರ್‌ ಉದ್ದ, 1 ಮೀ. ಅಗಲ ಹಾಗೂ 20 ಸೆಂ.ಮೀ. ಆಳ) ಸಮತಟ್ಟು ಮಾಡಿ ಹಳೆಯ ಪ್ಲಾಸ್ಟಿಕ್‌ ಚೀಲ ಹಾಸಿ ಅಥವಾ 4ಮೀ. ವೃತ್ತಾಕಾರ-ಚೌಕಾಕಾರದ ಸಿಮೆಂಟ್‌ ತೊಟ್ಟಿ ಮಾಡಿ ಅಥವಾ ಸಿದ್ಧವಾದ ಅಜೋಲ್ಲಾ ತೊಟ್ಟಿಗಳನ್ನು ಬಳಸಬಹುದು. 8 ರಿಂದ 10 ಕೆಜಿ ಪುಡಿ ಮಾಡಿ ಜರಡಿ ಮಾಡಿದ ಫಲವತ್ತಾದ ಮಣ್ಣನ್ನು ಪ್ಲಾಸ್ಟಿಕ್‌ ಹಾಳೆಯ ಮೇಲೆ ಸಮನಾಗಿ ಹರಡಿ ಒಂದರಿಂದ ಎರಡು ಕೆಜಿ ಸಗಣಿಯನ್ನು 10 ಲೀಟರ್‌ ನೀರಿನೊಡನೆ ಬೆರೆಸಿ ಹೊಂಡಕ್ಕೆ ಸುರಿಯಬೇಕು. ಸಗಣಿ ಬಗ್ಗಡಕ್ಕೆ 10 ಗ್ರಾಂ ಸೂಪರ್‌ ಫಾಸ್ಪೇಟ್ ಅಥವಾ ರಾಕ್‌ ಫಾಸ್ಪೇಟ್ ಅನ್ನು ಬೆರೆಸಬೇಕು. ನೀರಿನ ಮಟ್ಟ ಕನಿಷ್ಟ 10 ಸೆಂ. ಮೀ. ವರೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಮಿಶ್ರಣಕ್ಕೆ 0.5 ರಿಂದ 1 ಕೆಜಿ ತಾಜಾ ಅಜೋಲಾವನ್ನು ಹೊಂಡದಲ್ಲಿ ಬಿಡಬೇಕು ಎಂದರು.

ಅಜೋಲ್ಲಾ ಬೆಳೆಯಲು ಬೇಕಾದ ಅವಶ್ಯಕ ಅಂಶಗಳೆಂದರೆ, ಸ್ವತ್ಛವಾದ ನೀರಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ನೀರು ಹೆಚ್ಚಾದರೆ ತೇಲಿ ಹೋಗುವ ಸಾಧ್ಯತೆ ಇರುತ್ತದೆ. ಅಜೋಲ್ಲಾ ನಿರ್ವಹಣೆಗಾಗಿ ನೇರ ಸೂರ್ಯನ ಕಿರಣಗಳು ಬಿದ್ದು, ಅಜೋಲ ಕೆಂಪು ಬಣ್ಣಕ್ಕೆ ತಿರುಗಿ ಸರಿಯಾಗಿ ಬೆಳೆಯದೆ ಇರಬಹುದು. ಅದಕ್ಕೆ ನೆರಳು ಮಾಡುವ ಬಲೆಯನ್ನು ಉಪಯೋಗಿಸಿ ನೆರಳು ಮಾಡಿ. ಹೀಗೆ ಬೆಳೆದ ಅಜೋಲ್ಲಾ ಸಗಣಿ ವಾಸನೆ ಹೊಂದಿರುವುದರಿಂದ ಅದನ್ನು ಚೆನ್ನಾಗಿ ತೊಳೆದು ಜರಡಿ ಬಳಸಿ ನೀರನ್ನು ಬಸಿದು ಅಜೋಲ್ಲಾ ಮತ್ತು ಪಶು ಆಹಾರವನ್ನು ಮಿಶ್ರಣ ಮಾಡಿ ರಾಸುಗಳಿಗೆ ಕೊಡಬೇಕು. ವಾರಕ್ಕೊಮ್ಮೆ ಅರ್ಧ ಭಾಗ ನೀರನ್ನು ಬದಲಾಯಿಸಿ ಹೊಸದಾಗಿ ನೀರು ತುಂಬಿಸಿ ಯಾವಾಗಲೂ 10 ಸೆಂ.ಮೀ. ಇರುವ ಹಾಗೆ ನೋಡಿಕೊಳ್ಳಿ ಮತ್ತು ತಿಂಗಳಿಗೊಮ್ಮೆ 4ನೇ ಭಾಗ ಮಣ್ಣನ್ನು ತೆಗೆದು ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 20 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.