ಜಾನಕಿ ಟೀಚರ್ ಕೊಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 1.25 ಲಕ್ಷ ರೂ. ದಂಡ
Team Udayavani, Jun 1, 2022, 11:34 PM IST
ಕಾಸರಗೋಡು : ಚೀಮೇನಿ ಪುಲಿಯನ್ನೂರಿನ ಜಾನಕಿ ಟೀಚರ್(68) ಅವರನ್ನು ಕೊಲೆಗೈದ ಪ್ರಕರಣದ ಒಂದನೇ ಹಾಗೂ ಮೂರನೇ ಆರೋಪಿಗಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಒಂದನೇ ಆರೋಪಿ ಚೀಮೇನಿ ಪುಲಿಯನ್ನೂರು ಮಕ್ಲಿ ಕೊಂಡು ಅಳ್ಳಾರಾಡ್ ವೀಟಿಲ್ನ ಅರುಣಿ ಯಾನೆ ಅರುಣ್ ಕುಮಾರ್ (27) ಮತ್ತು ಮೂರನೇ ಆರೋಪಿ ಪುಲಿಯನ್ನೂರು ಚೇರ್ಕಳಂ ನಿವಾಸಿ ವಿಶಾಖ್(26)ಗೆ ಜೀವಾವಧಿ ಸಜೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿದೆ.
ಎರಡನೇ ಆರೋಪಿ ಪುಲಿಯ ನ್ನೂರು ಚೇರ್ಕಳಂ ನಿವಾಸಿ ಕೆ. ರೆನೀಶ್ (28) ನನ್ನು ಖುಲಾಸೆ ಗೊಳಿಸಿದೆ.
ಮುಖವಾಡ ಧರಿಸಿ ಕೊಲೆ
2017 ಡಿ.13ರಂದು ರಾತ್ರಿ 9.30 ರ ವೇಳೆ ಮುಖವಾಡ ಧರಿಸಿದ ಮೂವರ ತಂಡ ಜಾನಕಿ ಅವರ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆಗೈದು, ಅವರ ಪತಿ ಕೃಷ್ಣನ್ ಅವರನ್ನು ಇರಿದು ಗಾಯಗೊಳಿಸಿ ಕೊಲೆಗೈಯ್ಯಲೆತ್ನಿಸಿತ್ತು. ಈ ತಂಡ ಮನೆಯಿಂದ 13 ಪವನ್ ಚಿನ್ನಾಭರಣ ಹಾಗೂ 92 ಸಾವಿರ ರೂ. ದರೋಡೆ ಮಾಡಿತ್ತು. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್