ರಸ್ತೆ ಅತಿಕ್ರಮಣ ತೆರವಿಗೆ ಅಡ್ಡಿ -ವಾಗ್ವಾದ
Team Udayavani, Jun 10, 2022, 3:41 PM IST
ಮುದ್ದೇಬಿಹಾಳ: ಪಟ್ಟಣದ ಎಂಜಿಎಂಕೆ ಶಾಲೆ ಮುಂಭಾಗದ ಬಿದರಕುಂದಿ-ತಾರನಾಳ ಸಂಪರ್ಕ ರಸ್ತೆ ಅತಿಕ್ರಮಣ ತೆರವಿಗೆ ಮುಂದಾದ ಪುರಸಭೆ ಸಿಬ್ಬಂದಿ ಜೊತೆ ಅತಿಕ್ರಮಣದಾರರು ಗುರುವಾರ ವಾಗ್ವಾದ ನಡೆಸಿದರು.
ರಸ್ತೆಯ ಎರಡೂ ಬದಿ ಹೋಟೆಲ್, ಖಾನಾವಳಿ ಮುಂತಾದ ಅಂಗಡಿ ಹಾಕಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದನ್ನು ಮತ್ತು ಈ ರಸ್ತೆಯಲ್ಲಿ ಕುಡಿವ ನೀರಿನ ಪೈಪ್ಲೈನ್ ಅಳವಡಿಸಬೇಕಿರುವುದರಿಂದ ಅತಿಕ್ರಮಣ ತೆರವಿಗೆ ಪುರಸಭೆ ಅಧಿಕಾರಿ ವರ್ಗ ಮುಂದಾಗಿತ್ತು. ಆದರೆ 103 ಮತ್ತು 104 ಸಂಖ್ಯೆಯ ಆಸ್ತಿಗಳ ಮಾಲೀಕರು ತಕರಾರು ತೆಗೆದು ರಸ್ತೆ ಜಾಗ ಕುರಿತು ಮೊದಲಿನಿಂದಲೂ ಗೊಂದಲ ಇದೆ. ಆ ಗೊಂದಲ ಬಗೆಹರಿಯುವವರೆಗೂ ಅತಿಕ್ರಮಣ ತೆರವು ಅಥವಾ ಇತರೆ ಕಾಮಗಾರಿ ನಡೆಸದಂತೆ ಒತ್ತಾಯಿಸಿದರು.
ಆದರೆ ಶಾಲೆ ಮುಂದೆ ಮೊದಲಿನಿಂದಲೂ ರಸ್ತೆ ಇದೆ, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಬೇರೆಯವರು ಖರೀದಿಸಿದ್ದರಿಂದ ರಸ್ತೆ ಬಿಡುವ ಮತ್ತು ಕಟ್ಟಡ ನಿರ್ಮಿಸುವ ಕುರಿತು ತಕರಾರು ಇದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡ ಪುರಸಭೆ ಅಧಿಕಾರಿ ವರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ಕೈ ಬಿಟ್ಟು ಪೈಪ್ಲೈನ್ ಕಾಮಗಾರಿ ಬದಲಾಯಿಸಿ ರಸ್ತೆ ಮಧ್ಯೆ ಅಗೆದು ಪೈಪ್ಲೈನ್ ಅಳವಡಿಸಲು ಕ್ರಮ ಕೈಗೊಂಡರು.
ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ, ಪುರಸಭೆ ಸಿಬ್ಬಂದಿ ಮತ್ತು ನಿವಾಸಿಗಳಾದ ಮುಖೇಶ ಓಸ್ವಾಲ್, ಜಗದೀಶ ಕಂಚ್ಯಾಣಿ, ವಿನಾಯಕ ಝಿಂಗಾಡೆ, ಗಂಗನಗೌಡರ, ಗೋಪಿ ಮಡಿವಾಳರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?