ಹರಿಕಥೆ ಅಲ್ಲ ಗಿರಿ ಕಥೆ ಟ್ರೈಲರ್ ರಿಲೀಸ್: ಮತ್ತೆ ಪ್ರೇಕ್ಷಕರ ಹುಬ್ಬೇರಿಸಿದ ರಿಷಬ್-ಪ್ರಮೋದ್
ರಿಷಬ್ ಶೆಟ್ಟಿ ಅವರ ಪಾತ್ರ ಹಾಗೂ ನಟನಾ ವೈಖರಿ ನೋಡುಗರ ಗಮನ ಸೆಳೆದಿದೆ.
Team Udayavani, Jun 15, 2022, 3:19 PM IST
ಬೆಂಗಳೂರು:ಸಿನಿಮಾದಲ್ಲಿ ನಾಯಕನೇ ಸಿನಿಮಾ ನಿರ್ದೇಶಕನಾಗಿರುವ ಸಾಕಷ್ಟು ವಿಭಿನ್ನ ಚಿತ್ರಕತೆಯ ಸಿನಿಮಾಗಳು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಂದಿವೆ. ಅಂತಹದ್ದೇ ಒಂದು ಕಥೆಯ ಎಳೆಯೊಂದಿಗೆ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿರುವ ಡಿಫರೆಂಟ್ ಸ್ಕ್ರಿಪ್ಟ್ ನ ಬಹುನಿರೀಕ್ಷಿತ ಸಿನಿಮಾ ಹರಿಕಥೆ ಅಲ್ಲ ಗಿರಿ ಕಥೆ.
ರಿಷಬ್ ಶೆಟ್ಟಿ ಸಿನಿಮಾಗಳು ಅಂದ ಮೇಲೆ ಆ ಚಿತ್ರದ ಕಥೆ ಹಾಗೂ ಅವರ ಪಾತ್ರದಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತೆ ಅನ್ನೋದು ಈ ಸಿನಿಮಾ ಮೂಲಕ ಮತ್ತೆ ಪ್ರೂವ್ ಆಗಿದೆ. ಸದ್ಯ ಚಿತ್ರದ ಟ್ರೈಲರ್ ಹೊರಬಂದಿದ್ದು, ಸಖತ್ ಸೌಂಡ್ ಮಾಡ್ತಿದೆ. ಈ ಚಿತ್ರ ಜೂನ್ 23ರಂದು ತೆರೆ ಕಾಣಲಿದೆ.
ಟೀಸರ್, ಸಾಂಗ್ಸ್ ನೋಡಿ ಖುಷಿಪಟ್ಟಿದ್ದ ಸಿನಿ ಪ್ರೇಮಿಗಳು ಟ್ರೈಲರ್ ಗಾಗಿ ಎದುರು ನೋಡ್ತಿದ್ರು.. ಅದರಂತೆಯೇ ಇದೀಗ ಚಿತ್ರತಂಡ ಕೂಡ ತಮ್ಮ ಸಿನಿಮಾದ ಟ್ರೈಲರ್ ನ್ನು ರಿಲೀಸ್ ಮಾಡಿದೆ. ನಿರ್ದೇಶಕನಾಗೋ ಅಪಾರವಾದ ಕನಸು, ಆಸೆ, ಹಠ, ಛಲ ಹೊತ್ತ ನಾಯಕ ತನ್ನ ಗುರಿಯನ್ನು ಸಾಧಿಸ್ತಾನಾ..? ಅದು ಹೇಗೆ..? ಎಂಬ ಪ್ರಶ್ನೆಗಳಿಗೆ ಇದೀಗ ಹೊರಬಂದಿರೋ ಟ್ರೈಲರ್ ಝಲಕ್ ಲೈಟಾಗಿ ಸುಳಿವು ನೀಡಿದೆ. ರಿಷಬ್ ಶೆಟ್ಟಿ ಅವರ ಪಾತ್ರ ಹಾಗೂ ನಟನಾ ವೈಖರಿ ನೋಡುಗರ ಗಮನ ಸೆಳೆದಿದೆ.
ನಾಯಕಿಯರಾಗಿ ತಪಸ್ವಿನಿ ಹಾಗೂ ರಚನಾ ಇಂದರ್ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು, ಚಿತ್ರಕಥೆಯಲ್ಲಿ ಯಾವುದೋ ಟ್ವಿಸ್ಟ್ ಇದೆ ಅನ್ನೋದ್ರಲ್ಲಿ ಸಂದೇಹ ಇಲ್ಲ. ಅಷ್ಟೇ ಅಲ್ಲ ರಿಷಬ್ ಹಾಗೂ ಪ್ರಮೋದ್ ಜೋಡಿ ಇಲ್ಲೂ ಕಾಮಿಡಿ ಕಮಾಲ್ ಮಾಡಿದ್ದಾರೆ. ನೋಡೋಕೆ ಹರಿಕಥೆ ತರಹ ಇರೋ ಈ ನಾಯಕ ಗಿರಿಯ ರಿಯಲ್ ಕಥೆ ಏನು ಅನ್ನೋದನ್ನು ಟ್ರೈಲರ್ ನಲ್ಲಿ ಕೊಂಚ ಗೊಂದಲ ಮಾಡಿ ಹೇಳಲಾಗಿದೆ.
ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸಂದೇಶ್ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ವಾಸುಕಿ ವೈಭವ್ ಮ್ಯೂಸಿಕ್ ನಲ್ಲಿ ಮೂಡಿಬಂದಿರೋ ಹರಿಕಥೆ ಅಲ್ಲಾ ಗಿರಿ ಕಥೆ ಸಿನಿಮಾದ ಹಾಡುಗಳು ಈಗಾಗ್ಲೇ ಹಿಟ್ ಆಗಿವೆ. ಸದ್ಯ ಹೊರಬಂದಿರೋ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು, ತನ್ನದೇ ಹವಾ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ