ಚಾರ್ಲಿ ಕಲೆಕ್ಷನ್‌ 150 ಕೋಟಿ!: ಲಾಭದಲ್ಲಿ ಶ್ವಾನಗಳಿಗೂ ಪಾಲು


Team Udayavani, Jul 5, 2022, 12:32 PM IST

777 charlei

ನಟ ರಕ್ಷಿತ್‌ ಶೆಟ್ಟಿ ಅಭಿನಯದ “777 ಚಾರ್ಲಿ’ ಸಿನಿಮಾ ಇದೀಗ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ “777 ಚಾರ್ಲಿ’ಗೆ ವಿದೇಶಗಳಲ್ಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸದ್ಯ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿರುವ “777 ಚಾರ್ಲಿ’ ಚಿತ್ರತಂಡ, “25 ದಿನಗಳ ಯಶಸ್ವಿ ಸಂಭ್ರಮ’ವನ್ನು ಆಚರಿಸಿತು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಚಿತ್ರತಂಡ “777 ಚಾರ್ಲಿ’ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಗಳಿಕೆಯ 5% ಶ್ವಾನ ಸಂರಕ್ಷಣೆ ಕಾರ್ಯಕ್ಕೆ ಮೀಸಲು!: “777 ಚಾರ್ಲಿ’ ಸಿನಿಮಾದ ಒಟ್ಟು ಲಾಭದಲ್ಲಿ ಬಂದ 5% ರಷ್ಟು ಹಣವನ್ನು ಬೀದಿ ನಾಯಿಗಳ ಸಂರಕ್ಷಣೆಗಾಗಿ ತೆಗೆದಿಡಲು ಚಿತ್ರತಂಡ ನಿರ್ಧರಿಸಿದೆ. “777 ಚಾರ್ಲಿ’ ಸಿನಿಮಾದ 25 ದಿನದ ಸಂಭ್ರಮದಲ್ಲಿ ಚಿತ್ರತಂಡ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ:ನಾಗದೇವರ ಆರಾಧಕಿ ಮಿಸ್ ಇಂಡಿಯಾ ಸಿನಿ‌ ಶೆಟ್ಟಿ

ಈ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ಮಾಪಕ ರಕ್ಷಿತ್‌ ಶೆಟ್ಟಿ, “ಬೀದಿ ನಾಯಿಗಳನ್ನು ಸಂರಕ್ಷಿಸಬೇಕು ಎಂಬ ವಿಷಯವನ್ನು ನಮ್ಮ ಸಿನಿಮಾದಲ್ಲಿ ಹೇಳಿದ್ದೇವೆ. ಅದರಂತೆ ನಾವು ಕೂಡ ಅದಕ್ಕೆ ಬದ್ಧರಾಗಿದ್ದೇವೆ. “777 ಚಾರ್ಲಿ’ ಸಿನಿಮಾದ ಲಾಭಾಂಶದಲ್ಲಿ ಬಂದಿರುವ ಶೇಕಡ 5ರಷ್ಟು ಹಣವನ್ನು “ಚಾರ್ಲಿ’ ಹೆಸರಿನಲ್ಲಿ ಭಾರತದಾದ್ಯಂತ ಇರುವ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಬೀದಿ ನಾಯಿಗಳ ಆರೈಕೆ ಮತ್ತು ಸಂರಕ್ಷಣೆಗಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಲಾಭಾಂಶದ 10% ಚಿತ್ರತಂಡಕ್ಕೆ ಬೋನಸ್‌: ಇನ್ನು “777 ಚಾರ್ಲಿ’ ಸಿನಿಮಾದ ಲಾಭಾಂಶದಲ್ಲಿ ಬಂದಿರುವ 10% ಹಣವನ್ನು ಚಿತ್ರದಲ್ಲಿ ದುಡಿದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗಾಗಿ ತೆಗೆದಿರಿಸಲಾಗಿದೆ. ಈ ವಿಷಯವನ್ನು ಕೂಡ ಅಧಿಕೃತವಾಗಿ ಘೋಷಿಸಿರುವ ನಟ ಕಂ ನಿರ್ಮಾಪಕ ರಕ್ಷಿತ್‌ ಶೆಟ್ಟಿ, “”777 ಚಾರ್ಲಿ’ ಸಿನಿಮಾಕ್ಕೆ ಪ್ರತಿಯೊಬ್ಬರೂ ಕೂಡ ಅವರದ್ದೇ ಆದ ಪರಿಶ್ರಮ ಹಾಕಿದ್ದಾರೆ. ಎಲ್ಲರ ಪರಿಶ್ರಮದಿಂದಾಗಿಯೇ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಸಿನಿಮಾದ ಯಶಸ್ಸಿಗೆ ಅವರೆಲ್ಲರೂ ಪಾಲುದಾರರಾಗಿದ್ದಾರೆ. “777 ಚಾರ್ಲಿ’ಯ ಸಕ್ಸಸ್‌ ಸಿನಿಮಾ ತಂಡದ ಪ್ರತಿಯೊಬ್ಬರ ಜೊತೆಯೂ ಹಂಚಿಕೊಳ್ಳಬೇಕು. ಹೀಗಾಗಿ ನನ್ನನ್ನು ಹೊರತುಪಡಿಸಿ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರು, ಕೆಲಸ ಮಾಡಿದ ತಂತ್ರಜ್ಞರು ಮತ್ತು ಕಾರ್ಮಿಕರಿಗಾಗಿ “777 ಚಾರ್ಲಿ’ ಸಿನಿಮಾದ ಲಾಭಾಂಶದಲ್ಲಿ ಬಂದಿರುವ ಶೇಕಡ 10ರಷ್ಟು ಹಣವನ್ನು ತೆಗೆದಿಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ ರಕ್ಷಿತ್‌ ಶೆಟ್ಟಿ.

150 ಕೋಟಿ ಗಳಿಕೆ?: ಇನ್ನು ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “777 ಚಾರ್ಲಿ’ ಸಿನಿಮಾ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಇದೀಗ “777 ಚಾರ್ಲಿ’ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವುದರಿಂದ, ಸಹಜವಾಗಿಯೇ ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್‌ ಎಷ್ಟಾಗಿರಬಹುದು ಎಂಬ ಕುತೂಹಲ ಸಿನಿಮಾ ಮಂದಿಯಲ್ಲಿ ಮತ್ತು ಪ್ರೇಕ್ಷಕರಲ್ಲಿತ್ತು. ಆದರೆ “777 ಚಾರ್ಲಿ’ ಸಿನಿಮಾದ ಅಧಿಕೃತ ಗಳಿಕೆಯ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಇಲ್ಲಿಯವರೆಗೆ ಆಗಿರುವ ಒಟ್ಟು ಗಳಿಕೆಯ ಬಗ್ಗೆ ಒಂದಷ್ಟು ಸುಳಿವನ್ನು ಬಿಟ್ಟುಕೊಟ್ಟಿದೆ. ಕನ್ನಡ ಮತ್ತು ಇತರ ಭಾಷೆಗಳ ಒಟ್ಟು ಥಿಯೇಟರಿಕಲ್‌ ಕಲೆಕ್ಷನ್‌ ಮತ್ತು ವಿದೇಶಿ ಗಳಿಕೆ ಸೇರಿದಂತೆ, 25 ದಿನಗಳವರೆಗೆ “777 ಚಾರ್ಲಿ’ ಬರೋಬ್ಬರಿ 150 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ.

25 ದಿನ ಸಂಭ್ರಮ ದಲ್ಲಿ ನಿರ್ದೇಶಕ ಕಿರಣ್‌ ರಾಜ್‌, ನಾಯಕ ನಟಿ ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌, ವಿತರಕ ಕಾರ್ತಿಕ್‌ ಗೌಡ ಮತ್ತಿತರರು ಚಿತ್ರದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ಟಾಪ್ ನ್ಯೂಸ್

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ

Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4N6 Movie Review: ಕೊಲೆಯ ಜಾಡು ಹಿಡಿದು…

4N6 Movie Review: ಕೊಲೆಯ ಜಾಡು ಹಿಡಿದು…

8

Kantara Prequel: ಕೋಟಿ ಕೋಟಿ ಕೊಟ್ಟು ʼಕಾಂತಾರ -1ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ಪ್ರೈಮ್

Sandalwood: ಲಂಡನ್‌ನಿಂದ ʼಲವ್‌ ಲೀʼ ರಿಟರ್ನ್

Sandalwood: ಲಂಡನ್‌ನಿಂದ ʼಲವ್‌ ಲೀʼ ರಿಟರ್ನ್

Cyber ​​thieves: ರೂಪಾ ಅಯ್ಯರ್‌ಗೆ ವಂಚಿಸಲು ಸೈಬರ್‌ ಕಳರ ಯತ್ನ

Cyber ​​thieves: ರೂಪಾ ಅಯ್ಯರ್‌ಗೆ ವಂಚಿಸಲು ಸೈಬರ್‌ ಕಳರ ಯತ್ನ

Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ

Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.