ಸೈಕಲ್‌ ಸಂಚಾರದ “ಓಣಿ ರಸ್ತೆ’ಗೆ ಕೆಂಪು ಡಾಮರು!

ಆಕರ್ಷಕವಾಗಿ ಕಾಣಿಸಲಿವೆ ನಗರದ ಒಳ ರಸ್ತೆಗಳು

Team Udayavani, Jul 14, 2022, 2:05 PM IST

10

ಓಣಿಕೆರೆ: ಕಪ್ಪು ಟಾರು ರಸ್ತೆ, ಮಣ್ಣಿನ ಕಚ್ಚಾ ರಸ್ತೆ, ಕಾಂಕ್ರೀಟ್‌ ರಸ್ತೆ ಇವೆಲ್ಲ ನೋಡಿದ್ದೇವೆ. ಈಗ ಮಂಗಳೂರಿನ ಕೆಲವೆಡೆ ಜನರಿಗೆ ಇನ್ನು ಮುಂದೆ ಕೆಂಪು ಬಣ್ಣದ ಡಾಮರು ರಸ್ತೆಯನ್ನೂ ಕಾಣಬಹುದು!

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೆಲವು ಓಣಿಗಳಲ್ಲಿರುವ ಡಾಮರು ರಸ್ತೆಯು ಕೆಂಪು ಬಣ್ಣದಿಂದ ಕಂಗೊಳಿಸಲಿದೆ. ಯಾಕೆಂದರೆ; ಸ್ಮಾರ್ಟ್‌ಸಿಟಿಯಲ್ಲಿ ಸೈಕಲ್‌ ಟ್ರ್ಯಾಕ್‌ ಯೋಜನೆಗೆ ಗುರುತಿಸಲಾದ ರಸ್ತೆ ಕೆಂಪು ಬಣ್ಣದಲ್ಲಿರಲಿದೆ. ನಗರದ ಮೋರ್ಗನ್ಸ್‌ಗೇಟ್ ನ ಓಣಿಕೆರೆಯಲ್ಲಿ ಕೆಲವು ಮೀಟರ್‌ವರೆಗೆ ಸದ್ಯ ಇಂತಹ ಡಾಮರು ಹಾಕಲಾಗಿದೆ.

ಸೈಕಲ್‌ ಟ್ರ್ಯಾಕ್‌ಗೆ ಸಂಬಂಧಿಸಿ ಅಂತಾರಾಷ್ಟ್ರೀಯ ನಿಯಮಾವಳಿಯ ಪ್ರಕಾರ ಬಣ್ಣದ ರಸ್ತೆಗೆ ಉದ್ದೇಶಿಸಲಾಗಿದೆ. ಇದನ್ನು ʼಪಿಗ್ಮೆಂಟೆಡ್‌ ಸೈಕಲ್‌ ಟ್ರ್ಯಾಕ್‌ ‘ ಎಂದು ಕರೆಯುತ್ತಾರೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಡೈರಕ್ಟರೇಟ್‌ ಆಫ್‌ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ವತಿಯಿಂದ ಮಂಗಳೂರಿನಲ್ಲಿ ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

ನಗರದ ಓಣಿಗಳು, ರಸ್ತೆ ಬದಿಗಳಲ್ಲಿ ಟ್ರ್ಯಾಕ್‌ ಸಾಗಲಿದೆ. ಬೋಳಾರ ಬೋಟ್‌ ರಿಪೇರಿ ಯಾರ್ಡ್‌ನಿಂದ ಟಿಎಂಎ ಪೈ ಕನ್ವೆನ್ಶನ್‌ ಸಭಾಂಗಣದವರೆಗೆ ಹಾಗೂ ಮಾರ್ನಮಿಕಟ್ಟೆಯಿಂದ ಮತ್ತೂಂದು ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ.

ಕೆಂಪು, ಹಳದಿ ಎಂಬ ಎರಡು ಪ್ರತ್ಯೇಕ ಪಥವಿರಲಿವೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ.

ʼಓಣಿ’ಗಳಿಗೆ ಹೊಸ ರೂಪ

ಹಳದಿ ಪಥ ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆ ಬದಿಯಲ್ಲಿ ಸಾಗಲಿದೆ. ನಗರದೊಳಗೆ ಅಲ್ಲಲ್ಲಿ ಇರುವ ಓಣಿಗಳನ್ನೇ ಸೈಕಲ್‌ ಪಥಗಳಾಗಿ ಮಾಡ ಲಾಗುತ್ತದೆ. ಈ ಪರಿಕಲ್ಪನೆಯಲ್ಲಿ ಮೂಡಿರುವುದೇ ಸೈಕಲ್‌ ಓಣಿ ಯೋಜನೆ. ನಮ್ಮಲ್ಲಿರುವ ಹಳೆಯ, ಜನರು ಕಾಲ್ನಡಿಗೆಗೆ ಬಳಸುವಂತಹ ಸುವ್ಯವಸ್ಥಿತ ಓಣಿಗಳು ಅದೃಷ್ಟವಷಾತ್‌ ಇನ್ನೂ ಉಳಿದುಕೊಂಡಿವೆ. ಇಲ್ಲಿ ಹೆಚ್ಚು ವಾಹನಗಳ ಭರಾಟೆಯಿಲ್ಲ; ಅವುಗಳನ್ನು ಬಳಸಿದರೆ ಸುರಕ್ಷಿತವಾಗಿ ಸೈಕಲ್‌ನಲ್ಲಿ ತೆರಳುವುದು ಸಾಧ್ಯ.

ಸೈಕಲ್‌ ಲೇನ್‌ಗಳನ್ನು ವಿದ್ಯಾರ್ಥಿಗಳೂ ಸಹಿತ ನಾಗರಿಕರು ಬಳಸಬಹುದಾಗಿದೆ. ಈ ಮೂಲಕ ನಗರದ ವಾಹನದಟ್ಟಣೆ ಕಡಿಮೆಗೊಳಿಸುವುದು, ಪರಿಸರ ಮಾಲಿನ್ಯ ಮುಕ್ತಗೊಳಿಸುವುದು ಗುರಿ.

ಉದ್ದೇಶಿತ ಸೈಕಲ್‌ ಟ್ರ್ಯಾಕ್‌ ರೂಟ್‌

*ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌-ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌-ರೈಲ್ವೇ ನಿಲ್ದಾಣ-ಪುರಭವನ-ಸೆಂಟ್ರಲ್‌ ಮಾರುಕಟ್ಟೆ-ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌-ಶ್ರೀ ದೇವಿ ಕಾಲೇಜು

*ಮಾರ್ನಮಿಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್- ಸೈಂಟ್‌ ಜೋಸೆಫ್‌ ಕಾಲೇಜು-ರೋಶನಿ ನಿಲಯ-ಹೈಲ್ಯಾಂಡ್‌ ಕಾಫಿ ವರ್ಕ್‌-ತೆರಿಗೆ ಕಚೇರಿ.

ಏನಿದು ಬಣ್ಣದ ರಸ್ತೆ?

ಡಾಮರು ಸಿದ್ಧಪಡಿಸುವಾಗಲೇ ಅದಕ್ಕೆ  ʼಪಿಗ್ಮೆಂಟೆಡ್‌ʼಎಂಬ ಕೆಮಿಕಲ್‌ ಸೇರಿಸಲಾಗುತ್ತದೆ. ಈ ಮೂಲಕ ಡಾಮರಿನ ಬಣ್ಣ ಬದಲಾಗುತ್ತದೆ. ಈ ಬಣ್ಣ ಮಳೆ-ಬಿಸಿಲಿಗೂ ಹೋಗುವುದಿಲ್ಲ. ಶಾಶ್ವತವಾಗಿ ಇರುತ್ತದೆ. ಈ ರಸ್ತೆಗಳು ಇತರ ರಸ್ತೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಸದ್ಯ ಓಣಿಕೆರೆಯಲ್ಲಿ ಇಂತಹ ರಸ್ತೆ ನಿರ್ಮಿಸಲಾಗಿದೆ. ಮುಂದೆ ಇದನ್ನು ಉಳಿದ ಕಡೆಯಲ್ಲಿಯೂ ಜಾರಿ ಮಾಡಲಾಗುತ್ತದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಅರಣ್‌ ಪ್ರಭ.

ಆಕರ್ಷಕ ರಸ್ತೆ: ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನದ ಭರಾಟೆಯಲ್ಲಿ ಸೈಕಲ್‌ ಬಳಸುವವರಿಗೆ ಜಾಗವಿಲ್ಲದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎರಡು ಕಡೆಗಳಲ್ಲಿ ಪ್ರತ್ಯೇಕ ಸುಸಜ್ಜಿತ ಸೈಕಲ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಆಕರ್ಷಕವಾಗಿ ಮಾಡುವ ಕಾರಣದಿಂದ ರಸ್ತೆಗೆ ಕೆಂಪು ಬಣ್ಣ ಇರುತ್ತದೆ.  – ಪ್ರೇಮಾನಂದ ಶೆಟ್ಟಿ, ಮೇಯರ್‌ ಪಾಲಿಕೆ

 

ಟಾಪ್ ನ್ಯೂಸ್

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

covid

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!

Modi 2

3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ

BJP 2

BJP 296-300 ಸ್ಥಾನ: ಫ‌ಲೋಡಿ ಜೂಜು ಅಡ್ಡೆ ಭವಿಷ್ಯ!

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

HDK SPark

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಆಧಾರ್‌-ಪಹಣಿ ಸೀಡಿಂಗ್‌ ಮಂದಗತಿ; ಕಡ್ಡಾಯವಲ್ಲದ ಕಾರಣ ರೈತರ ನಿರಾಸಕ್ತಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಕ್ರಿಕೆಟಿಗರಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.