ಬಜಪೆ: ಜಡಿ ಮಳೆಗೆ ತರಕಾರಿ ಬೆಳೆ ನಾಶ

ನಾಗರಪಂಚಮಿ,ಅಷ್ಟಮಿ ಹಬ್ಬಕ್ಕೆ ತರಕಾರಿ ಕೊರತೆ, ಚಿಂತೆಯಲ್ಲಿ ಕೃಷಿಕರು

Team Udayavani, Jul 18, 2022, 11:18 AM IST

5

ಬಜಪೆ: ಜಡಿಮಳೆ ಎಲ್ಲ ಕೃಷಿಯನ್ನು ಭಾದಿಸಿ,ನಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಒಮ್ಮೆ ಬಿತ್ತನೆ ಮಾಡಿದ ಬೆಳೆಗಳು ಮಳೆಗೆ ಕೊಳೆತು ನಾಶವಾಗಿದೆ. ಕೆಲ ಕೃಷಿಕರು ಬೆಳೆ ಹಾನಿ, ನಷ್ಟವನ್ನು ಅನುಭವಿಸಿದರೂ ತಮ್ಮ ಕಾಯಕವನ್ನು ಬಿಡದೇ ಮತ್ತೆ ಪ್ರಯತ್ನ ಮುಂದುವರಿಸಿದ್ದು ಅವರ ಕಾಯಕಕ್ಕೆ ಭೇಷ್‌ ಎನ್ನಲೇ ಬೇಕು. ಬಜಪೆ ಊರಿನ ತರಕಾರಿಗೆ ಪ್ರಸಿದ್ಧವಾಗಿದೆ. ತಮ್ಮ ಹಿರಿಯರಿಂದ ನಡೆದು ಕೊಂಡು ಬಂದಿರುವ ಬೆಂಡೆ, ಹೀರೆ, ಮೆಣಸು, ಮುಳ್ಳುಸೌತೆ ತರಕಾರಿಗಳನ್ನು ಇಂದಿಗೂ ಎಕರೆ ಗಟ್ಟಲೆ ಪ್ರದೇಶಗಳಲ್ಲಿ ಬೆಳೆಸುತ್ತಾರೆ.

ಬಜಪೆ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಪಡುಪೆರಾರ ಪಡೀಲ್‌ ಪ್ರದೇಶಗಳಲ್ಲಿ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಅದರೆ ಮಾಡಿದ ತರಕಾರಿ ಬೆಳೆಗಳು ಜಡಿಮಳೆ ಈಗಾಗಲೇ ಕರಗಿ ಹೋಗಿವೆ. ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಬ್ಬವನ್ನು ಗಮನ ದಲ್ಲಿಟ್ಟು ಊರಿನ ಬೆಂಡೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಕಾರಣ ಈ ಬೆಳೆಯನ್ನು ಕೃಷಿಕರು ಬೆಳೆಯುತ್ತಾರೆ.

ಹೀರೆ ಬೆಳೆನಾಶ

ಬಜಪೆ ಅಡ್ಕಬಾರೆಯ ಲಾನ್ಸಿ ಡಿ’ಸೋಜಾ ಸುಮಾರು 50 ಸೆಂಟ್ಸು ಜಾಗದಲ್ಲಿ ಹೀರೆ ಕಾಯಿ ಬೆಳೆಸಿದ್ದರು. ಮಳೆ ಬರುವ ಮುಂಚೆ ಸುಮಾರು 50 ಕೆ.ಜಿ. ಹೀರೆಯನ್ನು ಮಾರಾಟ ಮಾಡಿದ್ದಾರೆ. ಮಳೆ ಬಂದ ಮೇಲೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಕೀಟಗಳ ಭಾದೆಯಿಂದ ಬೆಳೆ ಹಾಳಾಗಿದೆ.

ಮಳೆಯಿಂದ ಬೆಳೆಗಳಿಗೆ ಕೀಟ ಭಾದೆ ಹೆಚ್ಚು. ಬಿಸಿಲು ಬಂದರೆ ಉತ್ತಮ. ಕೀಟನಾಶಕ ಸಿಂಪಡಣೆ ಅನಿವಾರ್ಯ ವಾಗಿದೆ. ಮೆಣಸು ಗಿಡಗಳಿಗೂ ಕೂಡ ಮಳೆ ಬಾಧಿಸಿದೆ. ಊರಿನ ತರಕಾರಿಗೆ ಹೆಚ್ಚು ಬೇಡಿಕೆ ಇದೆ. ಅದರೆ ಮಳೆ ತರಕಾರಿ ಬೆಳೆಯನ್ನು ಕಾಡುತ್ತಿದೆ.

ಮಳೆಗೆ ಮೇಲೆಳದ ಬೆಂಡೆ ಗಿಡ

ಇಲ್ಲಿನ ಅನೇಕ ರೈತರು ಬೆಂಡೆಗೆ ಈಗಾಗಲೇ ಬಿತ್ತನೆ ನಡೆಸಿದ್ದು ಬೆಂಡೆಯ ಹೂ ಗಳು ಬಿಟ್ಟು ಬೆಂಡೆಯಾಗುವ ಸಮಯ. ಅದರೆ ಮಳೆಗೆ ಬೆಂಡೆ ಗಿಡ ಒಂದು ಅಡಿಯಷ್ಟು ಮೇಲೆ ಬಂದಿಲ್ಲ, ಇನ್ನೂ ಮಳೆ ಜಾಸ್ತಿ ಬಂದರೆ ಊರಿನ ತರಕಾರಿ ಸಿಗುವುದೇ ಕಷ್ಟ.ಕೆಲವೆಡೆ ಎರಡು ಬಾರಿ ಬಿತ್ತನೆ ಮಾಡಿದ್ದಾರೆ. ಮಳೆ ನೋಡಿ ತರಕಾರಿ ಬೆಳೆಸುವುದನ್ನು ಕೆಲವರು ಬಿಟ್ಟಿದ್ದಾರೆ.ಕೆಲ ರೈತರು ನಮಗೆ ವರ್ಷಪ್ರತೀ ಮಾಡುವ ಕಾಯಕ ನಷ್ಟ ವೆಂದು ಬಿಡಲು ಮನಸ್ಸು ಬರುವುದಿಲ್ಲ ಎನ್ನುತ್ತಾರೆ.

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.