ಐರೋಪ್ಯರ ಜೀವನ ತಲ್ಲಣ! ಬೇಸಿಗೆ, ಉಷ್ಣಹವೆಯಿಂದ ಜನರು ತತ್ತರ

ಜನರ ಆಟೋಟ, ಪ್ರವಾಸ, ಹವ್ಯಾಸಗಳೆಲ್ಲವಕ್ಕೂ ಬ್ರೇಕ್‌!

Team Udayavani, Aug 2, 2022, 6:55 AM IST

ಐರೋಪ್ಯರ ಜೀವನ ತಲ್ಲಣ! ಬೇಸಿಗೆ, ಉಷ್ಣಹವೆಯಿಂದ ಜನರು ತತ್ತರ

ಲಂಡನ್‌: ಯೂರೋಪ್‌ ರಾಷ್ಟ್ರಗಳಲ್ಲಿ ಬೀಸುತ್ತಿರುವ ಉಷ್ಣಹವೆ ಅತ್ಯಧಿಕವಾಗಿದ್ದು ಅಲ್ಲಿನ ಜನಜೀವನವನ್ನು ತಲ್ಲಣಗೊಳಿಸಿದೆ. ಯೂರೋಪ್‌ ನೆಲ, ಫುಟ್ ಬಾಲ್ , ಕ್ರೀಡೆಗಳ ಆಶ್ರಯದಾಣ. ಅಲ್ಲಿನ ಜನರಿಗೆ, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವಾಸ, ಪ್ರಯಾಣ ಮುಂತಾದ ಶೋಕಿಗಳು ಇದ್ದೇ ಇರುತ್ತವೆ. ಆದರೆ, ಇವೆಲ್ಲವೂ ಅಲ್ಲಿ ಮಾಯವಾಗಿವೆ. ಎಲ್ಲರೂ ಸುಡುಬಿಸಿಲು ಹಾಗೂ ಉಷ್ಣ ವಾತಾವರಣಕ್ಕೆ ಹೆದರಿ ಮನೆ ಸೇರಿಕೊಂಡಿದ್ದಾರೆ.

ಬರೀ ಬೇಸಗೆಯಲ್ಲ, ನಿತ್ಯ ನರಕ!
ಯೂರೋಪ್‌ನಲ್ಲಿ ಈಗ ಬೇಸಗೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಬೇಸಗೆ ಪ್ರತಿವರ್ಷದಂತೆ ಇಲ್ಲ. ಹೆಚ್ಚು ಶುಷ್ಕತೆಯ ಜೊತೆಗೆ ಶಾಖವೂ ಹೆಚ್ಚಾಗಿರುವುದರಿಂದ ಅದು ಬೇಸಗೆವನ್ನು ನರಕವನ್ನಾಗಿಸಿದೆ.

ಮನೆ ಸಾಕು, ಕಚೇರಿ ಬೇಕು!
ಮೊದಲೇ ತಂಪು ವಾತಾವರಣ ಇದ್ದಿದ್ದರಿಂದ ಯೂರೋಪ್‌ನಲ್ಲಿ ಮನೆಗಳಲ್ಲಿ ಸಾಮಾನ್ಯವಾಗಿ ಹವಾ ನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಆದರೆ, ಈಗ ವಾತಾವರಣದ ಉಷ್ಣ ಏರಿಕೆಯಾಗಿರುವುದರಿಂದ ಅಲ್ಲಿ “ವರ್ಕ್‌-ಫ್ರಂ-ಹೋಂ’ನಲ್ಲಿದ್ದ ದುಡಿಯುವ ವರ್ಗ, ಈಗ ಕಚೇರಿಯತ್ತ ಮುಖ ಮಾಡಿದೆ. ಅದಕ್ಕೆ ಕಾರಣ, ಆಫೀಸ್‌ನಲ್ಲಿರುವ ಹವಾ ನಿಯಂತ್ರಿತ ವ್ಯವಸ್ಥೆ!

ಟೈ ಹಾಕ್ಕೋಬೇಡಿ: ಪ್ರಧಾನಿ ಕರೆ
ಸ್ಪೇನ್‌ನ ಪ್ರಧಾನಿ ಪೆಡ್ರೋ ಸ್ಯಾಚೆಝ್ ಅವರು, ಕಚೇರಿಗಳಲ್ಲಿ ಯಾರೂ ಟೈ ಕಟ್ಟಬಾರದು ಎಂದು ಅಲ್ಲಿನ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಕರೆಕೊಟ್ಟಿದ್ದಾರೆ. ಸ್ಪೇನ್‌ನಲ್ಲಿ ವಾತಾವರಣದ ಉಷ್ಣ ಅತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ. ನಾನೂ ಸಹ ಟೈ ಕಟ್ಟುವುದಿಲ್ಲ. ಇದರಿಂದ ಕುತ್ತಿಗೆಯ ಭಾಗಕ್ಕೆ ಕೊಂಚ ಗಾಳಿಯಾಡಲು ಅನುಕೂಲವಾಗುತ್ತದೆ. ಆಗ ನಮಗೆ ಕಚೇರಿಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಬೇಕೇಬೇಕು ಎಂಬುದರ ಸಮಸ್ಯೆಯೇ ಇರುವುದಿಲ್ಲ ಎಂದಿದ್ದಾರೆ.

ಲೋಳೆ ಮೀನುಗಳ ಮಹಾಮೇಳ!
ಇಸ್ರೇಲ್‌ನ ಕರಾವಳಿಯಲ್ಲಿ ಲೋಳೆ ಮೀನುಗಳ ಮಹಾಮೇಳವೇ ಆಯೋಜನೆಗೊಂಡಿದೆ. ಹಿಂದೂ ಮಹಾಸಾಗರದಿಂದ ಇಸ್ರೇಲ್‌ ಕಡೆಗೆ ಪ್ರತಿ ವರ್ಷದ ಮಧ್ಯಭಾಗದಲ್ಲಿ ಸಾಗಿಹೋಗುವ ಇವು ಅಲ್ಲಿ ವಾಸ್ತವ್ಯ ಹೂಡುತ್ತವೆ. ಈ ಬಾರಿ ಹಿಂದೆಂದೂ ಕಾಣದಂಥ ಲೋಳೆ ಮೀನುಗಳ ಸಂಗ್ರಹ ಅಲ್ಲಿ ಕಾಣತೊಡಗಿದೆ. ಇದಕ್ಕೂ ಜಾಗತಿಕ ತಾಪಮಾನ ಹೆಚ್ಚಳ, ಪರಿಸರ ಮಾಲಿನ್ಯವೇ ಕಾರಣ ಎನ್ನಲಾಗಿದೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.