ನಾನು ನಂಬರ್ 1, ನಂಬರ್ 2 ರೇಸ್ ನಲ್ಲಿ ಇಲ್ಲ : ಅಕ್ಷಯ್ ಕುಮಾರ್
ನಿರ್ದಿಷ್ಟ ಇಮೇಜ್ಗೆ ಸೀಮಿತವಾಗಲು ಬಯಸುವುದಿಲ್ಲ...
Team Udayavani, Aug 6, 2022, 6:55 AM IST
ಇಂದೋರ್ : ಯಾವುದೇ ರೀತಿಯ ವೃತ್ತಿಪರ ಸ್ಪರ್ಧೆಯಿಂದ ದೂರವಿರುತ್ತೇನೆ ಮತ್ತು ನಟನೆಯಲ್ಲಿ ನಿರ್ದಿಷ್ಟ ಇಮೇಜ್ಗೆ ಸೀಮಿತವಾಗಲು ಬಯಸುವುದಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ ಅವರ ಚಿತ್ರ “ರಕ್ಷಾ ಬಂಧನ” ದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಮಾತನಾಡುತ್ತಿದ್ದರು.”ನನ್ನನ್ನು ಕೆಲವೊಮ್ಮೆ ನಂಬರ್ ಒನ್, ನಂಬರ್ ಟು, ಮತ್ತು ಕೆಲವೊಮ್ಮೆ ನಂಬರ್ ಥ್ರೀ ನಟ ಎಂದು ಕರೆಯುತ್ತಾರೆ. ಆದರೆ ನಾನು ರೇಸ್ನಲ್ಲಿ ಇಲ್ಲ. ನಾನು ಓಟದಲ್ಲಿ ಮೊದಲ, ಎರಡನೆಯ ಅಥವಾ ಮೂರನೇ ಸ್ಥಾನ ಪಡೆಯುವ ಕುದುರೆಯಲ್ಲ”ಎಂದು 54 ರ ಹರೆಯದ ನಟ ಸುದ್ದಿಗಾರರಿಗೆ ತಿಳಿಸಿದರು.
”ನಟನಾಗಿ, ನಾನು ಪಾತ್ರವನ್ನು ನಿರ್ವಹಿಸಿ ಒಂದು ಚಿತ್ರದಲ್ಲಿ ಸೀಮಿತವಾಗದಿರಲು ಪ್ರಯತ್ನಿಸುತ್ತೇನೆ.ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇದೆ” ಎಂದರು.
ಗಲ್ಲಾಪೆಟ್ಟಿಗೆಯಲ್ಲಿ, “ರಕ್ಷಾ ಬಂಧನ” ಅಮೀರ್ ಖಾನ್ ಅಭಿನಯದ “ಲಾಲ್ ಸಿಂಗ್ ಚಡ್ಡಾ” ದೊಂದಿಗೆ ಮುಖಾಮುಖಿಯಾಗಲಿದೆ. ”ಎರಡು ಚಿತ್ರಗಳ ನಡುವೆ ಯಾವುದೇ ಪೈಪೋಟಿ ಇಲ್ಲ” ಎಂದು ಅಕ್ಷಯ್ ಹೇಳಿದರು. ಎರಡೂ ಚಲನಚಿತ್ರಗಳು ಉತ್ತಮವಾಗಿ ಕಲೆಕ್ಷನ್ ಮಾಡುತ್ತವೆ ಎಂದು ಅವರು ಭಾವಿಸಿದರು.
ಈ ಸಂದರ್ಭದಲ್ಲಿ, ಟ್ವಿಟರ್ನಲ್ಲಿ ಅವರ ಚಿತ್ರದ ಬಹಿಷ್ಕಾರಕ್ಕೆ ಕರೆ ನೀಡಲಾಗಿರುವ ಹ್ಯಾಶ್ಟ್ಯಾಗ್ ಕುರಿತು ಅಕ್ಷಯ್ ಕುಮಾರ್ ಅವರನ್ನು ಕೇಳಲಾಯಿತು, ಈ ಬಗ್ಗೆ ನನಗೇನು ತಿಳಿದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ