ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿ ಬನ್ನೇರುಘಟ್ಟ ಪಾರ್ಕ್ಗೆ
Team Udayavani, Aug 6, 2022, 1:03 PM IST
ಆನೇಕಲ್: ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ವ್ಯಾಪ್ತಿಯ ಮುತ್ತತ್ತಿ ಕಾಡುದಾರಿಯಲ್ಲಿ, ತಾಯಿಯಿಂದ ಬೇರ್ಪಟ್ಟ ಗಂಡಾನೆ ಮರಿಯೊಂದನ್ನು ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದ್ದಾರೆ.
ಆನೆ ಮರಿಯು ಅಂದಾಜು 4 ತಿಂಗಳದ್ದಾಗಿದ್ದು 2-3 ದಿನ ಗಳಿಂದ ತಾಯಿಯ ಹಾಲು ಸಿಗದೇ ನಿತ್ರಾಣವಾಗಿತ್ತು. ಸಿಬ್ಬಂದಿ ಆನೆಮರಿ ಯನ್ನು ಹಲವು ಆನೆಗಳ ಗುಂಪಿಗೆ ಸೇರಿಸಲು ಮಾಡಿದ ಪ್ರಯತ್ನ ಫಲವಾಗಿ ಅದನ್ನು ಸಂರಕ್ಷಿಸಿ ಕರೆತರಲಾಗಿದೆ ಎಂದರು.
ಪಾರ್ಕಿನ ವೈದ್ಯ ಉಮಾಶಂಕರ್ ಮಾಹಿತಿ ನೀಡಿ, ಆನೆ ಮರಿ ಸಾಧಾರಣ ಆರೋಗ್ಯ ಹೊಂದಿದ್ದು, ಕಡಿಮೆ ಎಂದರೂ 6-12 ತಿಂಗಳ ಕಾಲ ತಾಯಿಯ ಹಾಲು ಅವಶ್ಯವಾಗಿದೆ. ಇಲ್ಲಿಗೆ ಬಂದ ಆನೆ ಮರಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿದ್ದು, ನಮ್ಮಲ್ಲಿನ ನುರಿತ ಮಾವುತರು ಅದರ ಆರೈಕೆ ಮಾಡುತ್ತಿದ್ದಾರೆ. ಆನೆ ಮರಿಯ ರಕ್ತದ ಮಾದರಿಯನ್ನು ಹೆಬ್ಟಾಳದ ತಪಾಸಣಾ ಕೇಂದ್ರಕ್ಕೆ ಕಳಿಸಿದ್ದು, ಪಾರ್ಕಿನ ಪಶು ವೈದ್ಯಕೀಯ ತಂಡದ ನಿಗಾವಣೆಯಲ್ಲಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ