ಭಾರಿ ಮಳೆ : ವರ್ಕಾಡಿ ಸುಂಕದಕಟ್ಟೆಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ, ತಪ್ಪಿದ ದುರಂತ
Team Udayavani, Aug 8, 2022, 9:05 AM IST
ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಲೇ ಇದ್ದು ಅಪಾರ ಹಾನಿ ಸಂಭವಿಸಿದೆ. ರವಿವಾರ ಬೆಳಗ್ಗೆ ಮಂಜೇಶ್ವರದ ವರ್ಕಾಡಿ ಸುಂಕದಕಟ್ಟೆಯಲ್ಲಿ ಮೂರು ಅಂತಸ್ತುಗಳ ಕಟ್ಟಡ ಕುಸಿದಿದೆ.
ಎರಡು ದಿನಗಳ ಹಿಂದೆಯೇ ಕಟ್ಟಡ ಬಿರುಕು ಬಿಟ್ಟಿದ್ದು ಇದರಲ್ಲಿದ್ದ ವಾಸವಾಗಿರುವವರನ್ನು ಮತ್ತು ವ್ಯಾಪಾರಿಗಳನ್ನು ತೆರವುಗೊಳಿಸಿರುವುದರಿಂದ ಸಂಭಾವ್ಯ ದುರಂತ ತಪ್ಪಿದೆ.
ನೆಟ್ಟಣಿಗೆಯ ಸಸಿಹಿತ್ತಿಲಲ್ಲಿ ರವೀಂದ್ರನಾಥ ಶೆಟ್ಟಿ ಅವರ ಬಾವಿ ಸಂಪೂರ್ಣ ಕುಸಿದಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಬಿಡುವು ನೀಡದ ಮಳೆ : ರಸ್ತೆ, ತೋಟ, ಮನೆ ಜಲಾವೃತ, ದೇಗುಲ ಆವರಣಕ್ಕೆ ಕಾವೇರಿ