ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
Team Udayavani, Aug 8, 2022, 9:38 PM IST
ನವದೆಹಲಿ: ಆನ್ಲೈನ್ನಲ್ಲಿ ದ್ವೇಷಪೂರಿತ ಮತ್ತು ದೋಷಾರೋಪಣೆಯ ವಿಚಾರಗಳನ್ನು ಪೋಸ್ಟ್ ಮಾಡುವ ಮೂಲಕ ಭಾರತದಲ್ಲಿ ‘ಜಿಹಾದ್’ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.
ನಾರಾಯಣಗಂಜ್ ಜಿಲ್ಲೆಯ ಹಮೀದುಲ್ಲಾ ಅಲಿಯಾಸ್ ‘ರಾಜು ಗಾಜಿ’ ಮತ್ತು ಬಾಂಗ್ಲಾದೇಶದ ಮದರಿಪುರ ಜಿಲ್ಲೆಯ ಮೊಹಮ್ಮದ್ ಸಹದತ್ ಹುಸೇನ್ ಅಲಿಯಾಸ್ ಅಬಿದುಲ್ಲಾ ಎಂಬ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಭೋಪಾಲ್ನ ಐಶ್ಬಾಗ್ನಿಂದ ಮೂವರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಸೇರಿದಂತೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ (ಜೆಎಂಬಿ) ಆರು ಸಕ್ರಿಯ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಎನ್ ಐ ಎ ವಕ್ತಾರರು ತಿಳಿಸಿದ್ದಾರೆ.