ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಹಿಂದೂ-ಮುಸ್ಲಿಂ ಮೊಹರಂ ಆಚರಣೆ
Team Udayavani, Aug 9, 2022, 9:55 AM IST
ನಾಲತವಾಡ: ಪಟ್ಟಣದ ಮೂರು ಓಣಿಯ ಮಸೂತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ದೂರಿಯಾಗಿ ಹಿಂದೂ-ಮುಸ್ಲಿಂ ಸೇರಿಕೊಂಡು ಐದು ದಿನಗಳ ಕಾಲ ಮೊಹರಂ ಹಬ್ಬ ಆಚರಿಸಿದರು.
ಸೋಮವಾರ ರಾತ್ರಿ ಚವನಭಾವಿ ಅವರಿಂದ ಯಜ್ಜೆ ಮೇಳ ಹಾಗೂ ನಾಲತವಾಡ ಪಟ್ಟಣದ ರಿವಾಯತ ಪದಗಳು ಮೆರಗು ತಂದವು. ರಾತ್ರಿಯಿಡಿ ಜಾಗ್ರಣೆ ಮಾಡಿ ಬಳಿಕ 15 ಜನ ಯುವಕರು, ಹಿರಿಯರು ಸೇರಿಕೊಂಡು ಬಿಂದಿಗೆ ತಗೊಂಡು ಗಂಗಸ್ಥಳಕೆ ಹೋಗಿ ಶುದ್ಧ(ಮಡಿ) ಆಗಿ ಬಿಂದಿಗೆ ತುಂಬಿಕೊಂಡು ಬಂದು ಅಲಾಯ್ ಕುಣಿಯ ಐದು ಸುತ್ತು ನೀರನ್ನು ಹಾಕಿ ನಂತರ ಮಸೂತಿ ಒಳಗೆ ಹೋಗಿ ಮಸೂತಿ ಮಡಿ ಮಾಡಿ, ಅಲಾಯ್ ಕುಣಿಯ ಮುಂದೆ ದೀಪಗಳನ್ನು ಹಚ್ಚಿ ಒಂದು ನಿಂಬೆ ಹಣ್ಣನ್ನು ಇಟ್ಡು, 15 ಜನ ಮಡಿಯಿಂದ ಬೆಂಕಿ ಇರುವ ಅಲಾಯ್ ಕುಣಿಯಲ್ಲಿ ಒಬ್ಬರಂತೆ ಒಬ್ಬರು ಬೆಂಕಿ ಒಳಗೆ ಹಾದು ಮಸೂತಿ ಒಳ ಹೋದರು.
ಒಟ್ಟಾರೆ ಈ ವರ್ಷ ಮೊಹರಂ ಹಬ್ಬ ಅದ್ದೂರಿಯಾಗಿ ನಡೆಯಿತು. ಯಾಕೆಂದರೆ ಎರಡು ವರ್ಷಗಳ ಕಾಲ ಕೊರೊನಾ ಹಿನ್ನೆಲೆ ಮೊಹರಂ ಹಬ್ಬ ಅದ್ದೂರಿಯಾಗಿ ಆಚರಿಸಿರಲಿಲ್ಲ ಎಂದು ನಿವೃತ್ತ ಶಿಕ್ಷಕ ಇಮಾಮ ಸಾಬ್ ಅವಟಿ ಹೇಳಿದರು.
ಹಸನಸಾಬ್ ಕುಳಗೇರಿ, ಖಾಜಹುಸೆನ್ ಖತೀಬಿ, ರಾಜೇಸಾಬ ಕುಳಗೇರಿ, ಬಸವರಾಜ ಭೂವಿ, ರಾಯಪ್ಪ ಭೂವಿ, ಅಲ್ಲಾಭಕ್ಷ ಕುಳಗೇರಿ, ಬಸವರಾಜ ತಳವಾರ, ಇನ್ನೂ ಮೂರು ಓಣಿಯ ಗುರು ಹಿರಿಯರು ಹಾಗೂ ಯುವಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ