ನರೇಗಾಕ್ಕೆ ಇನ್ನೂ 15 ಸಾವಿರ ಕೋಟಿ? ಯೋಜನೆಗೆ ಹೆಚ್ಚುವರಿ ಮೊತ್ತ ನೀಡಲು ಕೇಂದ್ರ ಚಿಂತನೆ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದಲೂ ಬೇಡಿಕೆ
Team Udayavani, Aug 10, 2022, 7:00 AM IST
ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರ್ಇಜಿಎಸ್)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯಿಂದ ಹೆಚ್ಚುವರಿಯಾಗಿ ಶೇ.20 ಮೊತ್ತ ನೀಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ.
ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಸರ್ಕಾರಗಳಿಂದಲೂ ಕೂಡ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಒತ್ತಡಗಳು ಹೆಚ್ಚುತ್ತಿವೆ.
ರಾಜ್ಯಗಳು 5,517.87 ಕೋಟಿ ರೂ. ಮೊತ್ತವನ್ನು ಪಾವತಿ ಮಾಡಲು ರಾಜ್ಯಗಳು ಬಾಕಿ ಉಳಿಸಿಕೊಂಡಿವೆ. ಕರ್ನಾಟಕ 462.78 ಕೋಟಿ ರೂ., ಪಶ್ಚಿಮ ಬಂಗಾಳ 2,636.71 ಕೋಟಿ ರೂ., ಬಿಹಾರ 1,160.77 ಕೋಟಿ ರೂ., ಉತ್ತರ ಪ್ರದೇಶ 661.42 ಕೋಟಿ ರೂ. ಪಾವತಿ ಮಾಡಲು ಇದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಎಂಜಿಎನ್ಆರ್ಇಜಿಎಸ್ಗೆ 73 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು. ನಂತರ ಈ ಮೊತ್ತವನ್ನು 98 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಪೈಕಿ 37,500 ಕೋಟಿ ರೂ. ಮೊತ್ತವನ್ನು ರಾಜ್ಯಗಳಿಗೆ ನೀಡಲಾಗಿದೆ.
ಇದನ್ನೂ ಓದಿ:ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳಿಗೆ ಬೇಡಿಕೆ 50 ಪಟ್ಟು ಹೆಚ್ಚಳ!
ಹೆಚ್ಚಳ ಸಾಧ್ಯತೆ:
ಜುಲೈನಲ್ಲಿ ಕಡಿಮೆಯಾಗಿದ್ದ ಕೆಲಸ ದಿನಗಳು ಹಾಲಿ ಮತ್ತು ಮುಂದಿನ ತಿಂಗಳು ಹೆಚ್ಚಾಗಲಿವೆ. ಮೇನಲ್ಲಿ 30.7 ಮಿಲಿಯ ಮನೆಗಳು ಯೋಜನೆಯ ಅಡಿಯಲ್ಲಿ ಕೆಲಸ ಬಯಸಿದ್ದರೆ, ಜೂನ್ನಲ್ಲಿ 31.6 ಮಿಲಿಯ ಮನೆಗಳಿಗೆ ಏರಿಕೆಯಾಗಿತ್ತು. ಜುಲೈನಲ್ಲಿ ಮಳೆ ಹಿನ್ನೆಲೆಯಲ್ಲಿ 20.4 ಮಿಲಿಯನ್ ಮನೆಗಳು ಯೋಜನೆ ಅಡಿಯಲ್ಲಿ ಕೆಲಸ ಬಯಸಿದ್ದವು ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
73 ಸಾವಿರ ಕೋಟಿ ರೂ.- ಬಜೆಟ್ನಲ್ಲಿ ಘೋಷಣೆಯಾಗಿದ್ದ ಮೊತ್ತ
37,500 ಕೋಟಿ ರೂ.- ಜುಲೈ ವರೆಗೆ ವೆಚ್ಚವಾದ ಮೊತ್ತ
5,517 ಕೋಟಿ ರೂ.- ರಾಜ್ಯಗಳು ಪಾವತಿ ಮಾಡಲು ಬಾಕಿ ಇರುವ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ